KN/Prabhupada 0022 - ಕೃಷ್ಣನಿಗೆ ಹಸಿವಿಲ್ಲ



Lecture on SB 1.8.18 -- Chicago, July 4, 1974

ಶ್ರೀ ಕೃಷ್ಣ ಹೇಳುತ್ತಾರೆ, "ನನ್ನ ಭಕ್ತ ಸ್ನೇಹದಿಂದ", ಯೋ ಮೇ ಭಕ್ತ್ಯಾ ಪ್ರಯಚ್ಛಾತಿ. ಶ್ರೀ ಕೃಷ್ಣ ಹಸಿದಿಲ್ಲ. ಶ್ರೀ ಕೃಷ್ಣ ನಿಮ್ಮ ಅರ್ಪಣೆಯೆನ್ನು ಸ್ವೀಕಾರಿಸಲು ಹಸಿದು ಬಂದಿಲ್ಲ. ಇಲ್ಲ. ಅವನು ಹಸಿದಿಲ್ಲ. ಅವನು ಆತ್ಮ ಸಂಪೂರ್ಣ. ಮತ್ತು ಆಧಾಯಾತ್ಮಿಕ ಜಗತ್ತಿನಲ್ಲಿ ಅವನಿಗೆ ಸೇವೆ ಸಲ್ಲುತ್ತಿದೆ. ಲಕ್ಷ್ಮಿ ಸಹಸ್ರ ಶತ ಸಂಭ್ರಮ ಸೇವ್ಯಮಾನಂ. ಅವನಿಗೆ ಸಾವಿರಾರು ಲಕ್ಷ್ಮಿಗಳು ಸೇವೆ ಸಲ್ಲಿಸುತ್ತಾ ಇದ್ದಾರೆ. ಆದರೆ ಶ್ರೀ ಕೃಷ್ಣ ಬಹಳ ದಯಾಮಯಿ, ಏಕೆಂದರೆ ನೀವು ಶ್ರೀ ಕೃಷ್ಣನಿಗೆ ಪ್ರಾಮಾಣಿಕವಾಗಿ ಪ್ರೀತಿಸುತ್ತಾ ಇದ್ದರೆ, ಅವನು ನಿಮ್ಮ ಪತ್ರಂ ಪುಷ್ಪಂ ಸ್ವೀಕರಿಸಲು ಇಲ್ಲಿದ್ದಾನೆ. ನೀವು ಕಡುಬಡವರಾದರೂ ಸಹ, ನೀವು ಏನು ಒಟ್ಟು ಮಾಡುತ್ತೀರೋ ಅದನ್ನು ಸ್ವೀಕರಿಸುತ್ತಾನೆ. ಸ್ವಲ್ಪ ಎಲೆ, ಸ್ವಲ್ಪ ನೀರು, ಸ್ವಲ್ಪ ಹುವು. ಜಗತ್ತಿನ ಯಾವ ಭಾಗದಲ್ಲಾದರೂ. ಯಾರೂ ಸಹ ಒಟ್ಟು ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಬಹುದು. "ಕೃಷ್ಣ, ನಾನು ನಿನಗೆ ಅರ್ಪಿಸಲು ಏನೂ ಹೊಂದಿಲ್ಲ. ನಾನು ಬಹಳ ಬಡವ. ದಯಮಾಡಿ ಇದನ್ನು ಸ್ವೀಕರಿಸು." ಕೃಷ್ಣ ಸ್ವೀಕರಿಸುತ್ತಾನೆ. ಕೃಷ್ಣ ಹೇಳುತ್ತಾನೆ "ತದ್ ಅಹಂ ಅಷ್ಣ್ನಾಮಿ." ನಾನು ಉಣ್ಣುತ್ತೇನೆ. ಆದ್ದರಿಂದ ಮುಖ್ಯವಾದದ್ದು ಭಕ್ತಿ, ಆತ್ಮೀಯತೆ ಮತ್ತು ಪ್ರೀತಿ. ಆದ್ದರಿಂದ ಇಲ್ಲಿ ಹೇಳಿದೆ "ಅಲಕ್ಷ್ಯಂ". ಕೃಷ್ಣ ಅಗೋಚರ. ಭಗವಂತ ಅಗೋಚರ. ಆದರೆ ಅವನು ಅತ್ಯಂತ ದಯಾಮಯಿ. ಕೃಷ್ಣ ನಿಮ್ಮ ಸನ್ಮುಖದಲ್ಲಿ ಬಂದಿದ್ದಾನೆ. ನಿಮ್ಮ ಭೌತಿಕ ಕಣ್ಣುಗಳಿಗೆ ಕಾಣುವಂತೆ. ಕೃಷ್ಣ ಈ ಭೌತಿಕ ಪ್ರಪಂಚದಲ್ಲಿ ಭೌತಿಕ ಕಣ್ಣುಗಳಿಗೆ ಕಾಣಿಸುವದಿಲ್ಲ. ಕೃಷ್ಣನ ಅವಿಭಾಜ್ಯಅಂಗಗಳ ಹಾಗೆ, ನಾವು ಕೃಷ್ಣನ ಅವಿಭಾಜ್ಯ ಅಂಗಗಳು ಸಕಲರೂ ಜೀವಿಗಳು. ಆದರೆ ನಾವು ಪರಸ್ಪರ ಕಾಣುವುದಿಲ್ಲ. ನಾನು ನಿನಗೆ ಕಾಣಿಸುವುದಿಲ್ಲ. ನಿನಗೆ ನಾನು ಕಾಣಿಸುವುದಿಲ್ಲ. "ಇಲ್ಲ, ನನಗೆ ನೀನು ಕಾಣಿಸುತ್ತಿಯೇ". ನೀನು ಏನು ನೋಡುತ್ತೀಯೆ? ನೀನು ನನ್ನ ಶರೀರವನ್ನು ನೋಡುತ್ತೀಯೆ. ಹಾಗಾದರೆ, ಆತ್ಮವು ಶರೀರದಿಂದ ಹೊರಟು ಹೋದಾಗ ನೀನು ಏಕೆ ಅಳುವೇ? "ನನ್ನ ತಂದೆ ಹೋದರು". ತಂದೆ ಎಲ್ಲಿ ಹೋದರು? ತಂದೆ ಇಲ್ಲಿಯೇ ಮಲಗಿದ್ದಾರಲ್ಲ. ಹಾಗಾದರೆ ನೀನು ಏನು ನೋಡಿದೆ? ನೀನು ನಿನ್ನ ತಂದೆಯ ಮೃತ ಶರೀರ ನೋಡಿದೆ. ನಿನ್ನ ತಂದೆಯನ್ನು ಅಲ್ಲ. ಆದರಿಂದ ಕೃಷ್ಣನ ಕಣವನ್ನು, ಆತ್ಮನ್ನನ್ನು, ನೋಡಲು ನಿನ್ನಿಂದ ಆಗಲ್ಲಿಲ್ಲ, ಆಗ ಕ್ರಿಶ್ನನ್ನನ್ನು ಹೇಗೆ ನೋಡುವೆ? ಆದ್ದರಿಂದ ಶಾಸ್ತ್ರವು ಹೇಳಿದೆ, "ಅತಃ ಶ್ರೀ ಕೃಷ್ಣ ನಾಮದಿ ನಾ ಭವೇತ್ ಗ್ರಾಹ್ಯಂ ಇಂದ್ರಿಯೈಹ. ಈ ಮೊಂಡು ಭೌತಿಕ ಕಣ್ಣುಗಳು, ಕೃಷ್ಣನನ್ನು ನೋಡಲು ಆಗುವದ್ದಿಲ್ಲ, ಅಥವಾ ಕೃಷ್ಣನ ನಾಮವನ್ನು ಕೇಳಲು ಸಾಧ್ಯವಿಲ್ಲ "ನಾಮಾದಿ". ನಾಮ ಎಂದರೆ ಹೆಸರು. ನಾಮ ಎಂದರೆ ಹೆಸರು, ರೂಪ, ಗುಣ, ಲೀಲೆಗಳು. ಇವುಗಳನ್ನು ಮೊಂಡು ಭೌತಿಕ ಕಣ್ಣುಗಳಾಗಲಿ ಅಥವಾ ಇಂದ್ರಿಯಗಳಾಗಲಿ, ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಪವಿತ್ರ ಪಡಿಸಿದರೆ "ಸೆವೊನ್ಮುಖೇ ಹಿ ಜಿಹ್ವಾದೌ " ಅವಗಳನ್ನು ಭಕ್ತಿ ಸೇವೆ ಮೂಲಕ ಶುದ್ಧ ಪಡಿಸಿದರೆ. ನೀವು ಕೃಷ್ಣನನ್ನು ಸಕಲ ಸಮಯದಲ್ಲಿ ಮತ್ತು ಎಲ್ಲೆಲ್ಲೂ ನೋಡುವಿರೀ. ಆದರೆ ಸಾಮಾನ್ಯ ಮಾನವನಿಗೆ "ಅಲಕ್ಸ್ಯ" ಗೋಚರಿಸುವುದಿಲ್ಲ. ಕೃಷ್ಣ ಎಲ್ಲೆಲ್ಲೂ ಇದ್ದಾನೆ, ಭಗವಂತ ಎಲ್ಲೆಲ್ಲೂ ಇದ್ದಾನೆ. "ಅನ್ದಾನ್ತರಸ್ಥ ಪರಮಾಣು ಚಯಾನ್ತರಸ್ಥಮ್." ಆದರಿಂದ "ಅಲಕ್ಷ್ಯಂ ಸರ್ವ ಭೂತಾನಾಂ." ಕೃಷ್ಣನು ಹೊರಗೂ ಮತ್ತು ಒಳಗೂ ಇದ್ದರೂ ಸಹ, ಎರಡೂ ಕಡೆ, ಆದರೂ ನಾವು ಅವನ್ನನ್ನು ಕಾಣಲಾರೆವು, ಕೃಷ್ಣನನ್ನು ನೋಡುವ ಕಣ್ಣುಗಳು ಪ್ರಾಪ್ತಿ ಆಗುವ ತನಕ. ಆದ್ದರಿಂದ ಈ ಕೃಷ್ಣ ಪ್ರಜ್ಞಾ ಸಂಸ್ಥೆ ಇರುವುದು ಕಣ್ಣುಗಳನ್ನು ತೆರೆಯಲು ಮತ್ತು ಹೇಗೆ ಕೃಷ್ಣನನ್ನು ನೋಡಲು. ಮತ್ತು ನೀವು ಕೃಷ್ಣನನ್ನು ನೋಡಿದರೆ "ಅಂತಃ ಬಹಿಃ" ಆಗ ನಿಮ್ಮ ಜನ್ಮ ಸಫಲವಾಯಿತು. ಅದಕ್ಕೆ ಶಾಸ್ತ್ರ ಹೇಳುತ್ತದೆ "ಅಂತರ್ ಬಹಿರ್". ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್ ನಾಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್ ಪ್ರತಿಯೊಬ್ಬರೂ ಸಫಲವಾಗಲು ಪ್ರಯತ್ನಿಸುತ್ತಾರೆ, ಆದರೆ ಸಫಲತೆ ಎಂದರೆ ಕೃಷ್ಣನನ್ನು ಒಳಗೂ ಮತ್ತೆ ಹೊರಗೂ ನೋಡಲು ಸಾಧ್ಯವಾಗುವದು. ಅದೇ ಸಫಲತೆ.