KN/Prabhupada 0013 - 24 ಗಂಟೆಗಳು ತೊಡಗಿಸಿಕೊಂಡಿರುವುದು



Lecture on BG 2.49-51 -- New York, April 5, 1966

ಯೋಗಃ ಕರ್ಮಸು ಕೌಶಲಮ್. ಕೌಶಲಮ್ ಎಂದರೆ ನಿಪುಣ ಕೈಚಲಕ, ನಿಪುಣ ಕೈಚಲಕ. ಇಬ್ಬರು ಕೆಲಸ ಮಾಡುತ್ತಿದ್ದರು. ಒಬ್ಬ ನಿಪುಣ; ಮತ್ತೊಬ್ಬ ಅಷ್ಟು ನಿಪುಣನಲ್ಲ, ಯಂತ್ರಗಳಲ್ಲಿ. ಯಂತ್ರದಲ್ಲಿ ಏನೋ ತಪ್ಪಿದೆ. ಆ ಯಂತ್ರವನ್ನು ಸರಿಪಡಿಸುವುದು ಹೇಗೆ ಎಂದು ಅಷ್ಟು ನಿಪುಣನಲ್ಲದವನು ಇಡೀ ಹಗಲು-ರಾತ್ರಿ ಪ್ರಯತ್ನ ಮಾಡುತ್ತಿರುತ್ತಾನೆ. ಆದರೆ ನಿಪುಣ ಬರುತ್ತಾನೆ, ಮತ್ತು ಒಮ್ಮೆಲೆ ನ್ಯೂನತೆ ಏನೆಂದು ನೋಡುತ್ತಾನೆ, ಮತ್ತು ಅವನು ಒಂದು ತಂತಿಯನ್ನು ಹೀಗೆ ಮತ್ತು ಹಾಗೆ ಸೇರಿಸಿದಾಗ ಮತ್ತೆ ಯಂತ್ರ ಶುರುವಾಗುತ್ತದೆ. ಹ್ರುಮ್, ಹ್ರುಮ್, ಹ್ರುಮ್, ಹ್ರುಮ್, ಹ್ರುಮ್. ನೋಡಿದಿರಾ? ಕೆಲವೊಮ್ಮೆ ನಮ್ಮಗೆ ತೊಂದರೆಯಾದಾಗ, ನಮ್ಮ ಈ ಟೇಪ್ ರೆಕಾರ್ಡರ್ʼನಲ್ಲಿ, ಆಗ ಕಾರ್ಲ್‌ರವರು ಅಥವಾ ಬೇರೆ ಯಾರಾದರು ಇದನ್ನು ಸರಿಪಡಿಸುತ್ತಾರೆ. ಆದ್ದರಿಂದ, ಎಲ್ಲದಕ್ಕು ಪರಿಣಿತ ಜ್ಞಾನದ ಅಗತ್ಯವಿದೆ. ಕರ್ಮ, ಕರ್ಮ ಎಂದರೆ ಕೆಲಸ. ನಾವು ಕೆಲಸ ಮಾಡಬೇಕು. ಕೆಲಸ ಮಾಡದ ಹೊರತು ನಮ್ಮ ಈ ದೇಹ ಮತ್ತು ಆತ್ಮ ಮುನ್ನಡೆಯುವುದಿಲ್ಲ. ಇದು ಒಂದು ತಪ್ಪು ತಿಳುವಳಿಕೆ ಅದು... ಆಧ್ಯಾತ್ಮಿಕ ಜಾಗೃತಿಗೆ ಕೆಲಸದ ಆಗತ್ಯವಿಲ್ಲ ಎಂದು. ಇಲ್ಲ, ಅವನು ಇನ್ನು ಹೆಚ್ಚು ಕೆಲಸ ಮಾಡಬೇಕು. ಯಾವ ವ್ಯಕ್ತಿಗಳಿಗೆ ಆಧ್ಯಾತ್ಮಿಕ ಜಾಗೃತಿಯಲ್ಲಿ ಆಸಕ್ತಿ ಇಲ್ಲವೋ ಅವರನ್ನು ಏಂಟು ಘಂಟೆಗಳ ಕಾಲ ಕೆಲಸದಲ್ಲಿ ತೊಡಗಿಸಬಹುದು. ಆದರೆ ಯಾರು ಆಧ್ಯಾತ್ಮಿಕ ಜಾಗೃತಿಯನ್ನು ಬಯಸುತ್ತಾರೊ, ಓ! ಅವರು ಇಪತ್ತನಾಲ್ಕು ಘಂಟೆಗಳ ಕಾಲ ತೊಡಗಿದ್ದಾರೆ, ಇಪತ್ತನಾಲ್ಕು ಘಂಟೆಗಳ ಕಾಲ. ಇದೆ ವ್ಯತ್ಯಾಸ. ಮತ್ತು ಆ ವ್ಯತ್ಯಾಸ... ನೀವು ಅದನ್ನು ಭೌತಿಕ ಮಟ್ಟದಲ್ಲಿ ಕಾಣಬಹುದು, ಜೀವನದ ದೇಹಾತ್ಮಾಭಿಮಾನದಲ್ಲಿ, ನೀವು ಕೇವಲ ಎಂಟು ಘಂಟೆಗಳ ಕಾಲ ಕೆಲಸ ಮಾಡಿದರೆ ನಿಮ್ಮಗೆ ಆಯಾಸವಾಗುತ್ತದೆ. ಆದರೆ ಆಧ್ಯಾತ್ಮಿಕ ಉದ್ದೇಶದಿಂದ ನೀವು ಇಪತ್ತನಾಲ್ಕು ಘಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ... ದುರದೃಷ್ಟವಶಾತ್, ನಿಮ್ಮಗೆ ಇಪತ್ತನಾಲ್ಕು ಘಂಟೆಗಳಿಗಿಂತ ಹೆಚ್ಚು ಸಮಯ ಸಿಗುವುದಿಲ್ಲ. ಆದರು ಸಹ ನಿಮ್ಮಗೆ ಆಯಾಸವೆನಿಸುವುದ್ದಿಲ್ಲ. ನಾನು ಗಂಬೀರವಾಗಿ ಹೇಳುತಿದ್ದೇನೆ. ಇದು ನನ್ನ ಸ್ವಂತ ಪ್ರಾಯೋಗಿಕ ಅನುಭವ. ಇದು ನನ್ನ ಸ್ವಂತ ಪ್ರಾಯೋಗಿಕ ಅನುಭವ. ಮತ್ತು ನಾನು ಇಲ್ಲಿ ಇದ್ದಿನಿ, ಯಾವಗಲು ಕೆಲಸ ಮಾಡುತ್ತಾ, ಏನಾದರು ಓದುತ್ತಾ ಅಥವಾ ಬರೆಯುತ್ತಾ, ಏನಾದರು ಓದುತ್ತಾ ಅಥವಾ ಬರೆಯುತ್ತಾ, ಇಪತ್ತನಾಲ್ಕು ಘಂಟೆಗಳು. ಕೇವಲ ನನಗೆ ಹಸಿವಾದಾಗ ಸ್ವಲ್ಪ ಆಹಾರ ತೆಗೆದುಕೊಳ್ಳುವೆ. ಮತ್ತು ಕೇವಲ ನನಗೆ ಯಾವಾಗ ನಿದ್ದೆ ಬರುತ್ತದೆಯೊ ಆಗ ಮಲಗುವೆ. ಇಲ್ಲದಿದ್ದರೆ, ಯಾವಾಗಲು ನನಗೆ ಆಯಾಸವಾಗುವುದಿಲ್ಲ. ನಾನು ಇದನ್ನು ಮಾಡುತ್ತಿಲ್ಲವೇ ಎಂದು ನೀವು ಪಾಲ್ʼನನ್ನು ಕೇಳಬಹುದು. ಆದ್ದರಿಂದ, ನಾನು ಇದ್ದನು ಮಾಡುವುದರಿಂದ ಆನಂದವನ್ನು ಪಡೆಯುತೇನೆ. ನನಗೆ ಆಯಾಸವಾಗುವುದ್ದಿಲ್ಲ. ಅದೇ ರೀತಿ, ಯಾವಾಗ ನಮ್ಮಗೆ ಆಧ್ಯಾತ್ಮಿಕ ಭಾವ ಇರುತ್ತದೆಯೋ ಅವನಿಗೆ... ಬದಲಿಗೆ ಅವನಿಗೆ ನಿದ್ದೆ ಮಾಡಲು ಜುಗುಪ್ಸೆಯಾಗುತ್ತದೆ, ನಿದ್ದೆ ಮಾಡಲು, "ಓ! ಈ ನಿದ್ದೆ ತೊಂದರೆ ಕೊಡಲು ಬಂದಿದೆ. ನೋಡಿದಿರಾ? ಅವನು ತನ್ನ ನಿದ್ದೆ ಸಮಯವನ್ನು ಕಮ್ಮಿ ಮಾಡಲು ಪ್ರಯತ್ನಿಸುತ್ತಾನೆ ಆಗ... ನಾವು ಪ್ರಾರ್ಥನೆ ಮಾಡಿದರೆ, ವಂದೆ ರೂಪ-ಸನಾತನೌ ರಘು-ಯುಗೌ ಶ್ರೀ-ಜೀವ-ಗೋಪಾಲಕೌ. ಈ ಆರು ಗೋಸ್ವಾಮಿಗಳು, ಇವರನ್ನು ಈ ವಿಜ್ಞಾನ ಚರ್ಚಿಸಲು ಮಾಹಾಪ್ರಭು ಚೈತನ್ಯರು ನೇಮಿಸಿದ್ದಾರೆ. ಅವರು ಇದರ ಬಗ್ಗೆ ಅಪಾರ ಸಾಹಿತ್ಯ ಬರೆದಿದ್ದಾರೆ. ನೋಡಿದಿರಾ? ನಿಮ್ಮಗೆ ಆಶ್ಚರ್ಯವಾಗುತ್ತದೆ. ಅವರು ದಿನಾ ಕೇವಲ ಒಂದುವರೆ ಘಂಟೆಗಳು ಮಾತ್ರ ಮಲಗುತ್ತಿದ್ದರು, ಅದಕಿಂತ ಜಾಸ್ತಿಯಲ್ಲ. ಅದ್ದನ್ನು ಸಹ ಕೆಲವೊಮ್ಮೆ ತ್ಯಜಿಸುತ್ತಿದ್ದರು.