KN/690621 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್: Difference between revisions

 
(No difference)

Latest revision as of 19:19, 3 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಇದೇ ಉದಾಹರಣೆಯಂತೆಯೇ, ನಾವು ಪದೇ ಪದೇ ಹೇಳುವಂತೆ..., ಹೊಟ್ಟೆಗೆ ಆಹಾರವನ್ನು ನೀಡುವ ಮೂಲಕ, ನೀವು ದೇಹದ ಎಲ್ಲಾ ಅಂಗಾಂಗಗಳಿಗೆ ಆಹಾರವನ್ನು ಪೂರೈಸುತ್ತೀರಿ. ನಿಮಗೆ ಅಗತ್ಯವಿಲ್ಲ... ಇದು ಪ್ರಾಯೋಗಿಕ. ಅಥವಾ ನೀರನ್ನು ಮರದ ಬೇರಿಗೆ ಹಾಕುವುದರಿಂದ, ನೀವು ಎಲ್ಲಾ ಕೊಂಬೆಗಳಿಗೆ, ಎಲೆಗಳಿಗೆ, ಎಲ್ಲೆಡೆ ನೀರನ್ನು ಪೂರೈಸುತ್ತೀರಿ. ನಾವು ಪ್ರತಿದಿನ ನೋಡುತ್ತೇವೆ. ಇದು ಪ್ರಾಯೋಗಿಕ ಉದಾಹರಣೆಯಾಗಿದೆ. ಹಾಗೆಯೇ, ಈ ಎಲ್ಲಾ ಅಭಿವ್ಯಕ್ತಿಯ ಕೇಂದ್ರ ಬಿಂದು ಇರಬೇಕು. ಅದು ಕೃಷ್ಣ. ನಾವು ಕೇವಲ ಕೃಷ್ಣನನ್ನು ಹಿಡಿದುಕೊಂಡರೆ ಸಾಕು, ನಾವು ಎಲ್ಲವನ್ನೂ ಹಿಡಿದುಕೊಂಡಂತೆ. ಮತ್ತು ವೇದಗಳು ಸಹ ಹೇಳುತ್ತವೆ - ಯಸ್ಮಿನ್ ವಿಜ್ಞಾತೇ ಸರ್ವಂ ಇದಂ ವಿಜ್ಞಾತಂ ಭವತಿ (ಮುಂಡಕ ಉಪನಿಷದ್ 1.3). ನಾವು ವಿಭಾಗೀಯ ಜ್ಞಾನವನ್ನು ಹುಡುಕುತ್ತಿದ್ದೇವೆ, ಆದರೆ ನೀವು ಕೇಂದ್ರ ಬಿಂದುವಾದ ಕೃಷ್ಣನನ್ನು ಅರ್ಥಮಾಡಿಕೊಂಡರೆ, ನೀವು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತೀರಿ."
690621 - ಉಪನ್ಯಾಸ SB 01.05.17-18 - New Vrindaban, USA