KN/Prabhupada 0022 - ಕೃಷ್ಣನಿಗೆ ಹಸಿವಿಲ್ಲ

Revision as of 01:32, 12 July 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on SB 1.8.18 -- Chicago, July 4, 1974

ಶ್ರೀ ಕೃಷ್ಣ ಹೇಳುತ್ತಾನೆ, "ನನ್ನ ಭಕ್ತ ಸ್ನೇಹದಿಂದ", ಯೋ ಮೇ ಭಕ್ತ್ಯಾ ಪ್ರಯಚ್ಛತಿ. ಕೃಷ್ಣ ಹಸಿದಿಲ್ಲ. ಕೃಷ್ಣ ನಿಮ್ಮ ಅರ್ಪಣೆಯೆನ್ನು ಸ್ವೀಕರಿಸಲು ಹಸಿದು ಬಂದಿಲ್ಲ. ಇಲ್ಲ. ಅವನು ಹಸಿದಿಲ್ಲ. ಅವನು ಆತ್ಮ ಸಂಪೂರ್ಣ. ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ಅವನಿಗೆ ಸೇವೆ ಸಲ್ಲುತ್ತಿದೆ. ಲಕ್ಷ್ಮಿ ಸಹಸ್ರ ಶತ ಸಂಭ್ರಮ ಸೇವ್ಯಮಾನಂ. ಅವನಿಗೆ ಸಾವಿರಾರು ಲಕ್ಷ್ಮಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಶ್ರೀ ಕೃಷ್ಣ ಬಹಳ ದಯಾಮಯಿ, ಏಕೆಂದರೆ ನೀವು ಶ್ರೀ ಕೃಷ್ಣನಿಗೆ ಪ್ರಾಮಾಣಿಕವಾಗಿ ಪ್ರೀತಿಸಿದ್ದರೆ, ಅವನು ನಿಮ್ಮ ಪತ್ರಂ ಪುಷ್ಪಂ ಸ್ವೀಕರಿಸುತ್ತಾನೆ. ನೀವು ಕಡುಬಡವರಾದರು ಸಹ, ನೀವು ಏನು ಒಟ್ಟು ಮಾಡುತ್ತೀರೋ ಅದನ್ನು ಸ್ವೀಕರಿಸುತ್ತಾನೆ. ಸ್ವಲ್ಪ ಎಲೆ, ಸ್ವಲ್ಪ ನೀರು, ಸ್ವಲ್ಪ ಹೂವು. ಜಗತ್ತಿನ ಯಾವ ಭಾಗದಲ್ಲಾದರು ಸರಿ. ಯಾರೂ ಸಹ ಒಟ್ಟು ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಬಹುದು. "ಕೃಷ್ಣ, ನಿನಗೆ ಅರ್ಪಿಸಲು ನನ್ನ ಬಳಿ ಏನೂ ಇಲ್ಲ. ನಾನು ಬಹಳ ಬಡವ. ದಯಮಾಡಿ ಇದನ್ನು ಸ್ವೀಕರಿಸು." ಕೃಷ್ಣ ಸ್ವೀಕರಿಸುತ್ತಾನೆ. ಕೃಷ್ಣ ಹೇಳುತ್ತಾನೆ, "ತದ್ ಅಹಂ ಅಶ್ನಾಮಿ." ನಾನು ತಿನ್ನುತೇನೆ. ಆದ್ದರಿಂದ, ಮುಖ್ಯವಾದದ್ದು ಭಕ್ತಿ, ಆತ್ಮೀಯತೆ, ಮತ್ತು ಪ್ರೀತಿ.

ಇಲ್ಲಿ "ಅಲಕ್ಷ್ಯಂ" ಎಂದು ಹೇಳಲಾಗಿದೆ. ಕೃಷ್ಣ ಅಗೋಚರ. ಭಗವಂತ ಅಗೋಚರ. ಆದರೆ ಅವನು ಅತ್ಯಂತ ದಯಾಮಯಿ. ಕೃಷ್ಣ ನಿಮ್ಮ ಮುಂದೆ ಬಂದಿದ್ದಾನೆ, ನಿಮ್ಮ ಭೌತಿಕ ಕಣ್ಣುಗಳಿಗೆ ಕಾಣುವಂತೆ. ಕೃಷ್ಣ ಈ ಭೌತಿಕ ಪ್ರಪಂಚದಲ್ಲಿ ಭೌತಿಕ ಕಣ್ಣುಗಳಿಗೆ ಕಾಣಿಸುವದಿಲ್ಲ. ಕೃಷ್ಣನ ಭಾಗಾಂಶಗಳ ಹಾಗೆ. ನಾವೆಲ್ಲ ಸಕಲ ಜೀವಿಗಳು ಕೃಷ್ಣನ ಭಾಗಾಂಶಗಳು. ಆದರೆ ನಾವು ಪರಸ್ಪರ ಕಾಣುವುದಿಲ್ಲ. ನಾನು ನಿನಗೆ ಕಾಣಿಸುವುದಿಲ್ಲ. ನಿನಗೆ ನಾನು ಕಾಣಿಸುವುದಿಲ್ಲ. "ಇಲ್ಲ, ನನಗೆ ನೀನು ಕಾಣಿಸುತ್ತಿಯೇ". ನೀನು ಏನು ನೋಡುತ್ತೀಯೆ? ನೀನು ನನ್ನ ಶರೀರವನ್ನು ನೋಡುತ್ತೀಯೆ. ಹಾಗಾದರೆ, ಆತ್ಮವು ಶರೀರದಿಂದ ಹೊರಟು ಹೋದಾಗ ನೀನು ಏಕೆ ಅಳುವೇ? "ನನ್ನ ತಂದೆ ಹೋದರು". ತಂದೆ ಎಲ್ಲಿ ಹೋದರು? ತಂದೆ ಇಲ್ಲಿಯೇ ಮಲಗಿದ್ದಾರಲ್ಲ. ಹಾಗಾದರೆ ನೀನು ಏನು ನೋಡಿದೆ? ನೀನು ನಿನ್ನ ತಂದೆಯ ಮೃತ ಶರೀರ ನೋಡಿದೆ. ನಿನ್ನ ತಂದೆಯನ್ನು ಅಲ್ಲ. ಆದ್ದರಿಂದ, ಕೃಷ್ಣನ ಕಣವನ್ನು, ಆತ್ಮನ್ನನ್ನು ನೋಡಲು ನಿನ್ನಿಂದ ಆಗದಿದ್ದಾಗ ನೀನು ಕ್ರಿಷ್ಣನನ್ನು ಹೇಗೆ ನೋಡುವೆ? ಆದ್ದರಿಂದ, ಶಾಸ್ತ್ರವು ಹೇಳಿದೆ, "ಅತಃ ಶ್ರೀ ಕೃಷ್ಣ ನಾಮದಿ ನಾ ಭವೇತ್ ಗ್ರಾಹ್ಯಂ ಇಂದ್ರಿಯೈಃ. ಈ ಮೊಂಡು ಭೌತಿಕ ಕಣ್ಣುಗಳು ಕೃಷ್ಣನನ್ನು ನೋಡಲು ಆಗುವುದ್ದಿಲ್ಲ, ಅಥವಾ ಕೃಷ್ಣನ ನಾಮವನ್ನು ಕೇಳಲು ಸಾಧ್ಯವಿಲ್ಲ, "ನಾಮಾದಿ". ನಾಮ ಎಂದರೆ ಹೆಸರು. ನಾಮ ಎಂದರೆ ಹೆಸರು, ರೂಪ, ಗುಣ, ಲೀಲೆಗಳು. ಇವುಗಳನ್ನು ಮೊಂಡು ಭೌತಿಕ ಕಣ್ಣುಗಳಾಗಲಿ ಅಥವಾ ಇಂದ್ರಿಯಗಳಾಗಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಪವಿತ್ರ ಪಡಿಸಿದರೆ, ಸೇವೊನ್ಮುಖೇ ಹಿ ಜಿಹ್ವಾದೌ, ಅವಗಳನ್ನು ಭಕ್ತಿ ಸೇವೆ ಮೂಲಕ ಶುದ್ಧ ಪಡಿಸಿದರೆ ನೀವು ಕೃಷ್ಣನನ್ನು ಸಕಲ ಸಮಯದಲ್ಲಿ ಮತ್ತು ಎಲ್ಲೆಲ್ಲೂ ನೋಡುವಿರೀ. ಆದರೆ ಸಾಮಾನ್ಯರಿಗೆ ಅವನು "ಅಲಕ್ಷ್ಯ", ಗೋಚರಿಸುವುದಿಲ್ಲ. ಕೃಷ್ಣ ಸರ್ವಗತ, ಭಗವಂತ ಎಲ್ಲೆಲ್ಲೂ ಇದ್ದಾನೆ. "ಅಂಡಾಂತರ-ಸ್ಥ-ಪರಮಾಣು-ಚಯಾಂತರ-ಸ್ಥಮ್." ಆದರಿಂದ, "ಅಲಕ್ಷ್ಯಂ ಸರ್ವ ಭೂತಾನಾಂ." ಕೃಷ್ಣನು ಹೊರಗೆ ಮತ್ತು ಒಳಗೆ ಇದ್ದರೂ ಸಹ, ಎರಡೂ ಕಡೆ, ಕೃಷ್ಣನನ್ನು ನೋಡುವ ಕಣ್ಣುಗಳು ಪ್ರಾಪ್ತಿ ಆಗುವ ತನಕ ನಾವು ಅವನನ್ನು ಕಾಣಲಾರೆವು.

ಆದ್ದರಿಂದ, ಈ ಕೃಷ್ಣ ಪ್ರಜ್ಞಾ ಆಂದೋಲನವಿರುವುದು ಕೃಷ್ಣನನ್ನು ನೋಡಲು ಕಣ್ಣುಗಳನ್ನು ತೆರೆಯಲು, ಮತ್ತು ನೀವು ಕೃಷ್ಣನನ್ನು ನೋಡಿದರೆ, ಅಂತಃ ಬಹಿಃ, ಆಗ ನಿಮ್ಮ ಜನ್ಮ ಸಫಲವಾಯಿತು. ಅದಕ್ಕೆ ಶಾಸ್ತ್ರ ಹೇಳುತ್ತದೆ "ಅಂತರ್ ಬಹಿರ್".

ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್
ನಾಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್

ಪ್ರತಿಯೊಬ್ಬರೂ ಪರಿಪೂರ್ಣರಾಗಲು ಪ್ರಯತ್ನಿಸುತ್ತಾರೆ, ಆದರೆ ಪರಿಪೂರ್ಣತೆ ಎಂದರೆ ಕೃಷ್ಣನನ್ನು ಒಳಗೂ ಮತ್ತು ಹೊರಗೂ ನೋಡಲು ಸಾಧ್ಯವಾಗುವದು. ಅದೇ ಪರಿಪೂರ್ಣತೆ.