KN/Prabhupada 0023 - ಸಾವಿಗೆ ಮುನ್ನ ಕೃಷ್ಣ ಪ್ರಜ್ಞರಾಗಿರಿ

Revision as of 01:18, 22 July 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Sri Isopanisad Invocation Lecture -- Los Angeles, April 28, 1970

ವಿಶ್ವವು ತನ್ನದೇ ಆದ ಸಮಯವನ್ನು ಹೂಂದಿದೆ, ಇದನ್ನು ಭಗವಂತನ ಶಕ್ತಿಯು ನಿಯಮಿಸಿದೆ. ವಿಶ್ವವು ಒಂದು ಬೃಹತ್ ಭೌತಿಕ ವಸ್ತು. ಅಷ್ಟೇ. ನಿಮ್ಮ ದೇಹದ ತರಹ; ಎಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿದೆ. ಆಧುನಿಕ ವಿಜ್ಞಾನ, ಸಾಪೇಕ್ಷತಾ ಸಿದ್ಧಾಂತ. ಒಂದು ಅಣು, ಒಂದು ಸಣ್ಣ ತುಣುಕು, ಸಣ್ಣ ಇರುವೆ, ಅವು ಸಾಪೇಕ್ಷ ಜೀವನವನ್ನು ಹೂಂದಿದೆ. ನೀವೂ ಕೂಡ ಸಾಪೇಕ್ಷ ಜೀವನವನ್ನು ಹೂಂದಿದ್ದೀರಿ. ಅದೇ ರೀತಿ ಈ ವಿಶಾಲವಾದ ಬ್ರಹ್ಮಾಂಡ, ಇದು ಎಷ್ಟೇ ದಶಲಕ್ಷ ವರ್ಷಗಳವರೆಗೆ ಉಳಿದರೂ ಇದು ಶಾಶ್ವತವಲ್ಲ. ಇದು ಸತ್ಯ. ಅದು ಒಂದು ಬೃಹತ್ ವಸ್ತುವಾದ್ದರಿಂದ ಕೆಲವು‌ ದಶಲಕ್ಷ ವರ್ಷಗಳ ಕಾಲ ಇರಬಹುದು. ಆದರೆ ಅದು ನಾಶವಾಗುತ್ತದೆ. ಅದು ಪ್ರಕೃತಿಯ ನಿಯಮ. ಹಾಗೂ ಸಮಯವು ಮುಗಿದಾಗ ಈ ನಶ್ವರವಾದ ಸೃಷ್ಟಿಯು ಪರಿಪೂರ್ಣನಾದ ಭಗವಂತನ ಪರಿಪೂರ್ಣ ವ್ಯವಸ್ಥೆಯಿಂದ ನಾಶವಾಗುತ್ತದೆ. ನಿಮ್ಮ ಸಮಯವು ಮುಗಿದಾಗ ಎಲ್ಲವೂ ಮುಗಿಯುತ್ತದೆ. ಯಾರೂ ಕಾಪಾಡಲು ಸಾಧ್ಯವಿಲ್ಲ. ಈ ವ್ಯವಸ್ಥೆಯು ಬಹಳ ಬಲಯುತವಾಗಿದೆ. "ನಾನು ಇಲ್ಲಿಯೇ ಇರುತ್ತೇನೆ", ಎಂದು ಹೇಳಲು ಸಾಧ್ಯವಿಲ್ಲ. ಇದು ನಿಜವಾಗಿ ನಡೆದ ಘಟನೆ. ನಾನು ಭಾರತದ ಅಲಹಾಬಾದ್ ಅಲ್ಲಿ ಇದ್ದಾಗ, ನನಗೆ ಒಬ್ಬ ಗೆಳೆಯನಿದ್ದ. ಅವನು ತುಂಬಾ ಶ್ರೀಮಂತ. ಅವನ ಸಾವು ಹತ್ತಿರವಾಗಿತ್ತು. ಅವನು ವೈದ್ಯರಲ್ಲಿ ವಿನಂತಿಸಿಕೊಳ್ಳುತ್ತಿದ್ದ, "ನೀವು ನನ್ನನ್ನು ನಾಲ್ಕು ವರ್ಷಗಳಾದರೂ ಬದುಕುವಂತೆ ಮಾಡಲು ಸಾಧ್ಯವಿಲ್ಲವೇ? ನನಗೆ ಕೆಲವು ಯೋಜನೆಗಳಿವೆ. ನಾನು ಅವುಗಳನ್ನು ಪೂರ್ಣಗೊಳಿಸಿಲ್ಲ." ಆಶಾ ಪಾಶ ಶತೈ ಬದ್ಧಾಃ (ಭ.ಗೀ 16.12). ಇದು ಆಸುರೀ ಪ್ರವೃತ್ತಿ. "ನಾನು ಇದನ್ನು ಮಾಡಬೇಕು. ನಾನು ಇದನ್ನು ಮಾಡಬೇಕು", ಎಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಇಲ್ಲ. ವೈದ್ಯರು ಅಥವಾ ಅವನ ಅಪ್ಪ, ಅವನ ಅಪ್ಪ, ಯಾವುದೇ ವಿಜ್ಞಾನಿ ಕೂಡ ರಕ್ಷಿಸಲಾರರು. "ನಾಲ್ಕು ವರ್ಷಗಳಲ್ಲ, ನಾಲ್ಕು ನಿಮಿಷಗಳೂ ಇಲ್ಲ. ನೀವು ಕೂಡಲೇ ಹೊರಡಬೇಕು." ಇದೇ ಕಾನೂನು. ಆದ್ದರಿಂದ, ಅಂತಹ ಸಮಯ ಬರುವ ಮೊದಲೇ ತನ್ನ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಲು ವ್ಯಕ್ತಿಯು ನಿಪುಣನಾಗಿರಬೇಕು. ತೂರ್ಣಂ ಯತೇತ (ಶ್ರೀ.ಭಾ 11.9.29) ತೂರ್ಣಂ ಎಂದರೆ ಅತ್ಯಂತ ವೇಗವಾಗಿ, ಆದಷ್ಟು ಬೇಗ ನೀವು ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಿಕೂಳ್ಳಬೇಕು. ಅನು... ಮುಂದಿನ ಸಾವು ಬರುವ ಮುನ್ನ ನೀವು ನಿಮ್ಮ ಕೆಲಸ ಸಾಧಿಸಬೇಕು. ಅದೇ ಬುದ್ಧಿವಂತಿಕೆ. ಇಲ್ಲದಿದ್ದಲ್ಲಿ ಸೋಲುತ್ತೀರಿ. ಧನ್ಯವಾದಗಳು.