KN/Prabhupada 0199 - ಧೂರ್ತ ತಥಾಕಥಿತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಲು ಬಯಸುತ್ತಾರೆ

Revision as of 00:43, 3 September 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0199 - in all Languages Category:KN-Quotes - 1973 Category:KN-Quotes - Lectures, Bhagavad-gita As It Is Category:KN-Quotes - in India Category:KN-Quotes - in India, Bombay <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0198 - Give up these Bad Habits and Chant these...")
(diff) ← Older revision | Latest revision (diff) | Newer revision → (diff)


Lecture on BG 13.8-12 -- Bombay, September 30, 1973

ತತ್ತ್ವಶಾಸ್ತ್ರವಿಲ್ಲದ ಯಾವುದೇ ತಿಳುವಳಿಕೆ, ಅದು ಕೇವಲ ಭಾವನೆ. ಮತ್ತು ಧಾರ್ಮಿಕ ಪರಿಕಲ್ಪನೆಯಿಲ್ಲದ ತತ್ವಶಾಸ್ತ್ರವು ಮಾನಸಿಕ ಊಹೆಯಾಗಿದೆ. ಈ ಎರಡು ವಿಷಯಗಳು ನಡೆಯುತ್ತಿವೆ, ಸಂಯೋಜನೆಯಿಲ್ಲದೆ. ಪ್ರಪಂಚದಾದ್ಯಂತ ಅನೇಕ ತಥಾಕತಥಿತ ಧಾರ್ಮಿಕ ವ್ಯವಸ್ಥೆಗಳಿವೆ, ಆದರೆ ಯಾವುದೇ ತತ್ವಶಾಸ್ತ್ರವಿಲ್ಲ. ಅದರಿಂದಾಗಿ, ಈ ತಥಾಕತಥಿತ ಧಾರ್ಮಿಕ ವ್ಯವಸ್ಥೆಗಳು ಆಧುನಿಕ ವಿದ್ಯಾವಂತ ವ್ಯಕ್ತಿಗಳಿಗೆ ಇಷ್ಟವಾಗುವುದಿಲ್ಲ. ಅವರು ಕ್ರಿಶ್ಚಿಯನ್, ಮುಸ್ಲಿಂ, ಮತ್ತು ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದಾರೆ. ಅವರು ಕೇವಲ ಔಪಚಾರಿಕತೆಗಳು ಮತ್ತು ಆಚರಣೆಗಳನ್ನು ಇಷ್ಟಪಡುವುದಿಲ್ಲ. ಅವರು ತತ್ವಶಾಸ್ತ್ರದ ಆಧಾರದ ಮೇಲೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಅದುವೇ ಭಗವದ್ಗೀತೆ.

ಭಗವದ್ಗೀತೆಯು ಈ ವ್ಯವಸ್ಥೆ, ಅಂದರೆ ಕೃಷ್ಣ-ಭಕ್ತಿಯ ತತ್ವಶಾಸ್ತ್ರದ ಮೇಲೆ ಆಧಾರಿತವಾಗಿದೆ. ಭಗವದ್ಗೀತೆ ಎಂದರೆ ಕೃಷ್ಣ-ಭಕ್ತಿ, ಕೃಷ್ಣನ ಆರಾಧನೆ, ಕೃಷ್ಣ ಪ್ರಜ್ಞೆ. ಅದೇ ಭಗವದ್ಗೀತೆ. ಭಗವದ್ಗೀತೆಯ ಬೋಧನೆ: ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಮ್ ನಮಸ್ಕುರು (ಭ.ಗೀ 18.65). ಇದು ಭಗವದ್ಗೀತೆ. "ಯಾವಾಗಲೂ ನನ್ನನ್ನು ಸ್ಮರಿಸು." ಕೃಷ್ಣ ಪ್ರಜ್ಞೆ; ಶುದ್ಧ ಮತ್ತು ಸರಳ. ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65). ಎಲ್ಲೆಡೆ ಕೃಷ್ಣನು ತನ್ನ ವ್ಯಕ್ತಿತ್ವವನ್ನು ಒತ್ತಿಹೇಳಿದ್ದಾನೆ. ಅಹಮ್ ಆದಿರ್ ಹಿ ದೇವಾನಾಮ್ (ಭ.ಗೀ 10.2). "ನಾನು ಎಲ್ಲಾ ದೇವತೆಗಳ ಮೂಲ." ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ (ಭ.ಗೀ 7.7).

ಅಹಂ ಸರ್ವಸ್ಯ ಪ್ರಭವೋ
ಮತ್ತಃ ಸರ್ವಂ ಪ್ರವರ್ತತೇ
ಇತಿ ಮತ್ವಾ ಭಜಂತೇ ಮಾಂ
ಬುಧಾ ಭಾವ-ಸಮನ್ವಿತಾಃ
(ಭ.ಗೀ 10.8)

ಎಲ್ಲವೂ ಇದೆ.

ಆದ್ದರಿಂದ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ (ಭ.ಗೀ 18.66), ಮಾಮ್, ಅಹಮ್, "ನಾನು." ಆದ್ದರಿಂದ, ಪ್ರತಿ ಪದ್ಯದಲ್ಲೂ, ಪ್ರತಿ ಅಧ್ಯಾಯದಲ್ಲೂ, ಕೃಷ್ಣನಿದ್ದಾನೆ. ಮಯಿ ಆಸಕ್ತ-ಮನಃ ಪಾರ್ಥ ಯೋಗಂ ಯುಂಜನ್ ಮದ್-ಆಶ್ರಯಃ (ಭ.ಗೀ 7.1). ಮಯಿ ಆಸಕ್ತ, "ನನ್ನಲ್ಲಿ ಆಸಕ್ತನಾಗಿರುವವನು," ಆಸಕ್ತ-ಮನಃ, "ನನ್ನಲ್ಲಿ ಆಸಕ್ತವಾಗಿರುವ ಮನಸ್ಸು, ಅದೇ ಯೋಗ." ಯೋಗಿನಾಮ್ ಅಪಿ ಸರ್ವೇಷಾಂ ಮದ್-ಗತೇನಾಂತರಾತ್ಮನ. ಮದ್-ಗತ, ಮತ್ತೆ ಮತ್ (ಭ.ಗೀ 6.47). ಮದ್-ಗತೇನಾಂತರಾತ್ಮನ, ಶ್ರದ್ಧವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ. ಆದ್ದರಿಂದ, ಪ್ರತಿಯೊಂದರಲ್ಲೂ ಕೃಷ್ಣ ಎಂದು ಒತ್ತಿ ಹೇಳಲಾಗಿದೆ. ಆದರೆ ಧೂರ್ತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಿಲು ಬಯಸುತ್ತಾರೆ.

ಈ ದುಷ್ಟತನವು ಭಾರತದಲ್ಲಿ ಹಾವಳಿಯನ್ನು ಉಂಟುಮಾಡಿದೆ. ಈ ಧೂರ್ತ ತಥಾಕಥಿತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಲು ಬಯಸುತ್ತಾರೆ. ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ಈ ದುಷ್ಟರಿಗೆ ಒಂದು ಸವಾಲಾಗಿದೆ. "ನೀವು ಕೃಷ್ಣನಿಲ್ಲದೆ ಕೃಷ್ಣನನ್ನು ತಯಾರಿಸಲು ಬಯಸುತ್ತೀರಿ. ಇದು ಅಸಂಬದ್ಧ", ಎಂಬ ಸವಾಲು.