KN/690913 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟಿಟನ್ಹರ್ಸ್ಟ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಪ್ರಜ್ಞೆ ಎಂದರೆ ಭಗವಂತನ ಕರುಣೆಯಿಂದ ನಾವು ಏನನ್ನೇ ಪಡೆದರೂ ನಾವು ತೃಪ್ತರಾಗಬೇಕು. ಅಷ್ಟೇ. ಆದ್ದರಿಂದ ನಾವು ನಮ್ಮ ವಿದ್ಯಾರ್ಥಿಗಳಿಗೆ ಮದುವೆಯಾಗಬೇಕೆಂದು ಸೂಚಿಸುತ್ತೇವೆ. ಏಕೆಂದರೆ ಅದೊಂದು ಸಮಸ್ಯೆ. ಲೈಂಗಿಕ ಜೀವನವು ಒಂದು ಸಮಸ್ಯೆ. ಆದ್ದರಿಂದ ಪ್ರತಿಯೊಂದು ಸಮಾಜದಲ್ಲಿ ಈ ಮದುವೆ ಇದೆ — ಹಿಂದೂ ಸಮಾಜ ಅಥವಾ ಕ್ರಿಶ್ಚಿಯನ್ ಅಥವಾ ಮುಹಮ್ಮದ್‌ನ ಸಮಾಜ. ಮದುವೆಯನ್ನು ಧಾರ್ಮಿಕ ವಿಧಿಗಳ ಅಡಿಯಲ್ಲಿ ಮಾಡಲಾಗುತ್ತದೆ. ಅಂದರೆ ಒಬ್ಬನು ತೃಪ್ತನಾಗಬೇಕು: 'ಓ, ಭಗವಂತನು ನನಗೆ ಈ ವ್ಯಕ್ತಿಯನ್ನು ನನ್ನ ಗಂಡನನ್ನಾಗಿ ಕಳುಹಿಸಿದ್ದಾನೆ'. ಮತ್ತು ಪುರುಷನು ಯೋಚಿಸಬೇಕು, 'ಭಗವಂತನು ನನಗೆ ಈ ಮಹಿಳೆಯನ್ನು, ಈ ಸುಂದರವಾದ ಮಹಿಳೆಯನ್ನು ನನ್ನ ಹೆಂಡತಿಯಾಗಿ ಕಳುಹಿಸಿದ್ದಾನೆ. ನಾವು ಶಾಂತಿಯುತವಾಗಿ ಬದುಕೋಣ'. ಆದರೆ ನಾನು ಬಯಸಿದರೆ, 'ಓ, ಈ ಹೆಂಡತಿ ಚೆನ್ನಾಗಿಲ್ಲ. ಆ ಹುಡುಗಿ ಚೆನ್ನಾಗಿರುವಳು', 'ಈ ಪುರುಷನು ಒಳ್ಳೆಯವನಲ್ಲ. ಆ ಪುರುಷನು ಒಳ್ಳೆಯವನು’ ಎಂದಾಗ ಎಲ್ಲವೂ ನಾಶವಾಗುತ್ತದೆ."
690913 - ಉಪನ್ಯಾಸ SB 05.05.01-2 - ಟಿಟನ್ಹರ್ಸ್ಟ್