KN/680824 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಭಗವದ್ಗೀತೆ ದೇವರನ್ನು ಅರಿಯುವ ವಿಜ್ಞಾನವಾಗಿದೆ. ಎಲ್ಲವೂ ವೈಜ್ಞಾನಿಕ ತಿಳುವಳಿಕೆಯ ಪ್ರಕ್ರಿಯೆಯನ್ನು ಹೊಂದಿದೆ. ಶ್ರೀಮದ್ ಭಾಗವತಮ್ ನಲ್ಲಿ, ಜ್ಞಾನಂ ಮೆ ಪರಮ -ಗುಹ್ಯಮ್ ಯದ್ ವಿಜ್ಞಾನ-ಸಮನ್ವಿತಮ್ ಎಂದು ಹೇಳಲಾಗಿದೆ. (ಶ್ರೀ.ಭಾ.೨.೯.೩೧). ಜ್ಞಾನ, ಅಥವಾ ದೇವರ ವಿಜ್ಞಾನ ಬಹಳ ಗೌಪ್ಯವಾಗಿರುತ್ತದೆ. ಈ ವಿಜ್ಞಾನ ಸಾಮಾನ್ಯ ವಿಜ್ಞಾನವಲ್ಲ. ಇದು ತುಂಬಾ ಗೌಪ್ಯವಾಗಿರುತ್ತದೆ. ಜ್ಞಾನಂ ಮೆ ಪರಮ-ಗುಹ್ಯಮ್ ಯದ್ ವಿಜ್ಞಾನ-ಸಮನ್ವಿತಮ್. ವಿಜ್ಞಾನ ಎಂದರೆ... ವಿ ಎಂದರೆ ನಿರ್ದಿಷ್ಟ. ಇದು ಒಂದು ನಿರ್ದಿಷ್ಟ ಜ್ಞಾನ, ಮತ್ತು ಅದನ್ನು ನಿರ್ದಿಷ್ಟ ಪ್ರಕ್ರಿಯೆಯಿಂದ ಅರ್ಥಮಾಡಿಕೊಳ್ಳಬೇಕು. "
680824 - ಉಪನ್ಯಾಸ ಭ. ಗೀತಾ ೦೪.೦೧ - ಮಾಂಟ್ರಿಯಲ್