KN/680927 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸರ್ವಕಾಲದಲ್ಲೂ ದುಃಖಗಳು ಇದ್ದೆ ಇರುತ್ತವೆ. ಪ್ರತಿಯೊಬ್ಬರೂ ದುಃಖಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ, ಅದು ವಾಸ್ತವವಾಗಿದೆ. ಅಸ್ತಿತ್ವದ ಸಂಪೂರ್ಣ ಹೋರಾಟವೆಂದರೆ ದುಃಖದಿಂದ ಹೊರಬರುವುದು. ಆದರೆ ವಿವಿಧ ರೀತಿಯ ಸೂಚನೆಗಳಿವೆ. ಕೆಲವರು ನೀವು ನೋವಿನಿಂದ ಈ ರೀತಿಯಾಗಿ ಹೊರಬನ್ನಿ ಎಂದು ಹೇಳುತ್ತಾರೆ , ಇನ್ನು ಕೆಲವರು ನೀವು ನೋವುಗಳಿಂದ ಆ ರೀತಿಯಲ್ಲಿ ಹೊರಬನ್ನಿ ಎಂದು ಹೇಳುತ್ತಾರೆ. ಆದ್ದರಿಂದ ಅಲ್ಲಿ ಆಧುನಿಕ ವಿಜ್ಞಾನಿಗಳಿಂದ, ದಾರ್ಶನಿಕರಿಂದ, ನಾಸ್ತಿಕರಿಂದ ಅಥವಾ ಆಸ್ತಿಕಕರಿಂದ, ಕಾಮ್ಯ ಕರ್ಮಿಗಳಿಂದ ನೀಡುವ ಸೂಚನೆಗಳಿವೆ, ಆದರೆ ಕೃಷ್ಣ ಪ್ರಜ್ಞೆ ಆಂದೋಲನದ ಪ್ರಕಾರ, ನೀವು ನಿಮ್ಮ ಪ್ರಜ್ಞೆಯನ್ನು ಸುಮ್ಮನೆ ಬದಲಾಯಿಸಿದರೆ ನೀವು ಎಲ್ಲಾ ನೋವುಗಳಿಂದ ಹೊರಬರಬಹುದು, ಅಷ್ಟೆ. ಅದು ಕೃಷ್ಣ ಪ್ರಜ್ಞೆ. ನಾನು ನಿಮಗೆ ಹಲವಾರು ಬಾರಿ ಉದಾಹರಣೆ ನೀಡಿದಂತೆ ... ನಮ್ಮೆಲ್ಲರ ನೋವುಗಳು ಜ್ಞಾನದ ಕೊರತೆ, ಅಜ್ಞಾನದಿಂದಾಗಿವೆ. ಆ ಜ್ಞಾನವನ್ನು ಉತ್ತಮ ಅಧಿಕಾರಿಗಳ ಒಡನಾಟದಿಂದ ಸಾಧಿಸಬಹುದು."
680927 - ಉಪನ್ಯಾಸ - ಸಿಯಾಟಲ್