KN/681118b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಪ್ರತಿಯೊಬ್ಬ ಮಾನವ ಸಮಾಜದಲ್ಲೂ ಅಂತಹ ವಿಚಾರಣೆ ಇದೆ ಮತ್ತು ಕೆಲವು ಉತ್ತರವೂ ಇದೆ. ಆದ್ದರಿಂದ ಈ ಜ್ಞಾನವನ್ನು ಬೆಳೆಸುವುದು, ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಅತ್ಯಗತ್ಯ. ನಾವು ಈ ವಿಚಾರಣೆಗಳನ್ನು ಮಾಡದಿದ್ದರೆ, ಸುಮ್ಮನೆ ನಾವು ಪ್ರಾಣಿಗಳ ಪ್ರವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ... ಏಕೆಂದರೆ ಈ ಭೌತಿಕ ದೇಹವು ಪ್ರಾಣಿಗಳ ದೇಹವಾಗಿದೆ, ಆದರೆ ಪ್ರಜ್ಞೆಯು ಅಭಿವೃದ್ಧಿಯಾಗಿದೆ. ಪ್ರಾಣಿಗಳ ದೇಹದಲ್ಲಿ ಅಥವಾ ಪ್ರಾಣಿಗಳ ದೇಹಕ್ಕಿಂತ ಕೆಳಗಿನ ದೇಹಗಳಲ್ಲಿ- ಮರಗಳು ಮತ್ತು ಸಸ್ಯಗಳಂತೆಯೇ, ಅವುಗಳು ಸಹ ಜೀವಿಗಳೇ- ಪ್ರಜ್ಞೆಯು ಅಭಿವೃದ್ಧಿ ಹೊಂದಿಲ್ಲ. ನೀವು ಒಂದು ಮರವನ್ನು ಕತ್ತರಿಸಿದರೆ, ಅದು ಪ್ರತಿಭಟಿಸುವುದಿಲ್ಲ, ಏಕೆಂದರೆ ಪ್ರಜ್ಞೆ ಅಭಿವೃದ್ಧಿಯಾಗಿಲ್ಲ. ಆದರೆ ಅದು ನೋವನ್ನು ಅನುಭವಿಸುತ್ತದೆ."
ಉಪನ್ಯಾಸ ಶ್ರೀ ಶ್ರೀ ಷಡ್-ಗೋಸ್ವಾಮಿ -ಅಷ್ಟಕ ಉತ್ಸವ - ಲಾಸ್ ಎಂಜಲೀಸ್