KN/690212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮ್ಮ ಪ್ರಕ್ರಿಯೆ ... ಇದು ಧ್ಯಾನವೂ ಆಗಿದೆ. ಆದರೆ ನೀವು ಧ್ಯಾನದಿಂದ ಅರ್ಥಮಾಡಿಕೊಂಡಂತೆ, ಕೆಲವು ಹೆಚ್ಚಿನ ವಸ್ತು ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು, ಅದೇ ವಿಷಯವಿದೆ, ಆದರೆ ನಾವು ಮನಸ್ಸನ್ನು ಕೃತಕವಾಗಿ ಕೇಂದ್ರೀಕರಿಸಲು ಪ್ರಯತ್ನಿಸುವುದಿಲ್ಲ. ಆದರೆ ನಮ್ಮ ಈ ಜಪ ಪ್ರಕ್ರಿಯೆಯು ತಕ್ಷಣವೇ ಮನಸ್ಸನ್ನು ಆಕರ್ಷಿಸುತ್ತದೆ. ನಮ್ಮ ಪ್ರಕ್ರಿಯೆ ಹೀಗಿದೆ ... ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ, ನಾವು ಅದನ್ನು ಸುಮಧುರವಾಗಿ ಹಾಡಿ ಜಪಿಸುತ್ತೇವೆ. ಆದ್ದರಿಂದ ಮನಸ್ಸು ಆಕರ್ಷಿತವಾಗುತ್ತದೆ, ಮತ್ತು ನಾವು ಶಬ್ದವನ್ನು ಕೇಳಲು ಪ್ರಯತ್ನಿಸುತ್ತೇವೆ. ಇದರರ್ಥ ನನ್ನ ಮನಸ್ಸು ಮತ್ತು ಕಿವಿ ಆ ಆಲೋಚನೆಯಲ್ಲಿ ಸಾಂದ್ರವಾಗಿರುತ್ತದೆ. ಆದ್ದರಿಂದ ಇದು ಪ್ರಾಯೋಗಿಕ ಧ್ಯಾನ. "
690212 - ಸಂದರ್ಶನ - ಲಾಸ್ ಎಂಜಲೀಸ್