KN/690218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಕೃಷ್ಣನ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಭಾವಿಸೋಣ, ಮತ್ತು ನಿಮ್ಮ ಮನಸ್ಸು ಬೇರೆಡೆಗೆ ತಿರುಗಿದೆ, ಇನ್ನೆಲ್ಲಿಗೋ ಹೋಗುತ್ತಿದೆ, ಯಾವುದೋ ಸಿನೆಮಾ ಹಾಲ್ ಕಡೆಗೆ ಹೋಗುತ್ತದೆ. ಆದ್ದರಿಂದ ನೀವು ಹಿಂದೆ ಸರಿಯಬೇಕು," ಅಲ್ಲಿಲ್ಲ. ದಯವಿಟ್ಟು, ಇಲ್ಲೇ. "ಇದು ಯೋಗದ ಅಭ್ಯಾಸ: ಮನಸ್ಸನ್ನು ಕೃಷ್ಣನಿಂದ ದೂರ ಹೋಗಲು ಬಿಡದೆ ಇರುವುದು. ನೀವು ಇದನ್ನು ಸುಮ್ಮನೆ ಅಭ್ಯಾಸ ಮಾಡಲು ಸಾಧ್ಯವಾದರೆ, ನಿಮ್ಮ ಮನಸ್ಸನ್ನು ಕೃಷ್ಣನಿಂದ ದೂರ ಹೋಗಲು ಬಿಡಬೇಡಿ ... ಮತ್ತು ಏಕೆಂದರೆ ನಾವು ಒಂದೇ ಜಾಗದಲ್ಲಿ ಕುಳಿತು ನಮ್ಮ ಮನಸ್ಸನ್ನು ಕೃಷ್ಣನ ಮೇಲೆ ಸ್ಥಿರವಾಗಿರಸಲು ಸಾಧ್ಯವಿಲ್ಲದ ಕಾರಣ, ಅದಕ್ಕೆ ಹೆಚ್ಚಿನ ತರಬೇತಿಯ ಅಗತ್ಯವಿರುತ್ತದೆ. ಒಂದೇ ಸ್ಥಳದಲ್ಲಿ ಕುಳಿತು ಯಾವಾಗಲೂ ಕೃಷ್ಣನ ಮೇಲೆ ಮನಸ್ಸನ್ನು ಸ್ಥಿರವಾಗಿರುಸುವುದು, ಅದು ತುಂಬಾ ಸುಲಭದ ಕೆಲಸವಲ್ಲ. ಅದನ್ನು ಅಭ್ಯಾಸ ಮಾಡದವನು, ಅವನು ಸುಮ್ಮನೆ ಅನುಕರಿಸಿದರೆ, ಆಗ ಅವನು ಗೊಂದಲಕ್ಕೊಳಗಾಗುತ್ತಾನೆ. ನಾವು ಯಾವಾಗಲೂ ನಮ್ಮನ್ನು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಮಾಡುವ ಪ್ರತಿಯೊಂದೂ ಕೃಷ್ಣನಲ್ಲಿ ಜೋಡಿಸಿಕೊಂಡಿರಬೇಕು. ನಮ್ಮ ಸಾಮಾನ್ಯ ಚಟುವಟಿಕೆಗಳು ಹೇಗೆ ಅಚ್ಚಾಗಿರಬೇಕೆಂದರೆ, ಅವೆಲ್ಲವನ್ನೂ ಕೃಷ್ಣನಿಗಾಗಿ ಮಾಡಬೇಕು. ಆಗ ನಿಮ್ಮ ಮನಸ್ಸು ಕೃಷ್ಣನಲ್ಲಿ ಸ್ಥಿರವಾಗಿರುತ್ತದೆ. "
690218 - ಉಪನ್ಯಾಸ ಭ. ಗೀತಾ ೦೬.೨೫-೨೯ - ಲಾಸ್ ಎಂಜಲೀಸ್