KN/690219b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸುಮ್ಮನೆ ನೀವು" ಕೃಷ್ಣ "ಎಂದು ಜಪಿಸಿ ಮತ್ತು ನೀವು ಕೇಳಿದರೆ, ಸ್ವಯಂಚಾಲಿತವಾಗಿ ನಿಮ್ಮ ಮನಸ್ಸು ಕೃಷ್ಣನಲ್ಲಿ ಸ್ಥಿರವಾಗಿರುತ್ತದೆ. ಅಂದರೆ ಯೋಗ ಪದ್ಧತಿಯನ್ನು ತಕ್ಷಣವೇ ಸಾಧಿಸಲಾಗಿದೆ ಎಂದರ್ಥ. ಏಕೆಂದರೆ ಇಡೀ ಯೋಗ ವ್ಯವಸ್ಥೆಯು ನಿಮ್ಮ ಮನಸ್ಸನ್ನು ವಿಷ್ಣುವಿನ ರೂಪದಲ್ಲಿ ಕೇಂದ್ರೀಕರಿಸುವುದು, ಮತ್ತು ಕೃಷ್ಣನು ವಿಷ್ಣುವಿನ ರೂಪಗಳ ವಿಸ್ತರಣೆಯ ಮೂಲ ವ್ಯಕ್ತಿತ್ವ. ಕೃಷ್ಣ ಎಂದರೆ ... ಇಲ್ಲಿ ಒಂದು ದೀಪವಿದೆ. ಈಗ, ಈ ದೀಪದಿಂದ, ಈ ಮೇಣದ ಬತ್ತಿಯಿಂದ, ನೀವು ಇನ್ನೊಂದು ಮೇಣದ ಬತ್ತಿಯನ್ನು ತರಬಹುದು, ನೀವು ಅದನ್ನು ಬೆಳಗಿಸಬಹುದು. ನಂತರ ಮತ್ತೊಂದು, ಇನ್ನೊಂದು, ಇನ್ನೊಂದು - ಸಾವಿರಾರು ಮೇಣದಬತ್ತಿಯನ್ನು ನೀವು ವಿಸ್ತರಿಸಬಹುದು. ಪ್ರತಿ ಮೇಣದಬತ್ತಿಯೂ ಈ ಮೇಣದ ಬತ್ತಿಯಂತೆ ಶಕ್ತಿಯುತವಾಗಿದೆ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಈ ಮೇಣದಬತ್ತಿಯನ್ನು ಮೂಲ ಮೇಣದ ಬತ್ತಿಎಂದು ತೆಗೆದುಕೊಳ್ಳಬೇಕಾಗಿದೆ. ಅದೇ ರೀತಿ, ಕೃಷ್ಣನು ಲಕ್ಷಾಂತರ ವಿಷ್ಣುವಿನ ರೂಪಗಳಲ್ಲಿ ವಿಸ್ತರಿಸುತ್ತಿದ್ದಾನೆ. ಪ್ರತಿಯೊಂದು ವಿಷ್ಣುವಿನ ರೂಪವು ಕೃಷ್ಣನಂತೆ ಚೆನ್ನಾಗಿದೆ, ಆದರೆ ಕೃಷ್ಣನು ಮೂಲ ಮೇಣದ ಬತ್ತಿ ಏಕೆಂದರೆ ಕೃಷ್ಣನಿಂದ ಎಲ್ಲವೂ ವಿಸ್ತರಿಸುತ್ತದೆ. "
690219 - ಉಪನ್ಯಾಸ ಭ. ಗೀತಾ ೦೬.೩೦-೩೪ - ಲಾಸ್ ಎಂಜಲೀಸ್