KN/690503c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಈ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಾ ಹೋದರೆ, ನಿಮ್ಮ ಗಳಿಕೆಯ ಮೊದಲ ಕಂತು ಏನೆಂದರೆ, ನೀವು ಈ ದೇಹವಲ್ಲ, ನೀವು ಆಧ್ಯಾತ್ಮ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ, ಹೀಗೆ ಅರ್ಥಮಾಡಿಕೊಳ್ಳಲು ಕನಿಷ್ಠ ಹಲವು ವರ್ಷಗಳು ಬೇಕಾಗುತ್ತದೆ, 'ನಾನು ಈ ದೇಹವಲ್ಲ' ಎಂದು. ಎಲ್ಲರೂ... ನೀವು ಯಾರನ್ನಾದರೂ ಕೇಳಿ, 'ನೀವು ಏನಾಗಿದ್ದೀರಿ?', ‘ನಾನು ಇದು ಸಾರ್, ಇದು ಮತ್ತು ಅದು’ ಎಂದು ಹೇಳುವರು.‘ನಾನು ಅಮೆರಿಕನ್’, ‘ನಾನು ಈ ದೇಹ’, ‘ನಾನು ಆ ದೇಹ’. ಆದರೆ ಅವನು ಈ ದೇಹವಲ್ಲ ಎಂದು ಯಾರಿಗೂ ತಿಳಿದಿಲ್ಲ. ಆದರೆ ನೀವು, ಈ ಹರೇ ಕೃಷ್ಣ ಮಂತ್ರವನ್ನು ಜಪ ಮಾಡಿದರೆ , ನಿಮ್ಮ ಲಾಭದ ಮೊದಲ ಕಂತಾಗಿ ನೀವು ನಿಮ್ಮನ್ನು ಅರಿತುಕೊಳ್ಳುತ್ತೀರಿ, ಅಹಂ ಬ್ರಹ್ಮಾಸ್ಮಿ: 'ನಾನು ಈ ದೇಹವಲ್ಲ, ಆದರೆ ನಾನು ಆಧ್ಯಾತ್ಮ. ನಾನು ಪರಮಾತ್ಮನ ಅಂಶವಾಗಿದ್ದೇನೆ'. ಮತ್ತು ಎಷ್ಟು ಶೀಘ್ರದಲ್ಲಿ ನೀವು ಈ ತಿಳುವಳಿಕೆಯ ಹಂತಕ್ಕೆ ಬರುವಿರೋ ತದ ನಂತರ ಮುಂದಿನ ಹಂತದಲ್ಲಿ ನೀವು ಖುಷಿಯಾಗಿರುತ್ತೀರಿ."
690503 - ಆರ್ಲಿಂಗ್ಟನ್ ಸ್ಟ್ರೀಟ್ ಚರ್ಚ್‌ನಲ್ಲಿ ಉಪನ್ಯಾಸ- ಬೋಸ್ಟನ್