KN/690506 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನಿಮ್ಮ ಪ್ರಜ್ಞೆಯನ್ನು ಸಂಪೂರ್ಣವಾಗಿ ಕೃಷ್ಣನಲ್ಲಿ ಲೀನಗೊಳಿಸಿದರೆ, ಕೃಷ್ಣ ಎಂದರೇನು, ನಿಮ್ಮ ಸಂಬಂಧ ಏನು, ಆ ಸಂಬಂಧದಲ್ಲಿ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೀವು ಅರ್ಥಮಾಡಿಕೊಂಡರೆ, ನೀವು ಈ ಜನ್ಮದಲ್ಲಿ ಈ ವಿಜ್ಞಾನವನ್ನು ಕಲಿತರೆ, ಆಗ ಭಗವಂತನಾದ ಕೃಷ್ಣನೇ ಭರವಸೆಯನ್ನು ನೀಡಿದ್ದಾನೆ, ಕೃಷ್ಣ, ಭಗವದ್ಗೀತೆಯಲ್ಲಿ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತೀ ಮಾಂ ಏತಿ ಕೌನ್ತೇಯ (ಭ.ಗೀ ೪.೯)."ಈ ದೇಹವನ್ನು ತೊರೆದ ನಂತರ, ಈ ಭೌತಿಕ ಪ್ರಪಂಚಕ್ಕೆ ಒಬ್ಬರು ಮತ್ತೆ 8,400,000 ಜೀವ ರಾಶಿಗಳಲ್ಲಿ ಒಂದು ದೇಹವನ್ನು ಸ್ವೀಕರಿಸಲುಹಿಂತಿರುಗುವುದಿಲ್ಲ, ಆದರೆ ಅವನು ನೇರವಾಗಿ ನನ್ನ ಬಳಿಗೆ ಹೋಗುತ್ತಾನೆ." ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಭ.ಗೀ ೧೫.6)."ಮತ್ತು ಅಲ್ಲಿಗೆ ಒಬ್ಬನು ಹಿಂತಿರುಗಲು ಸಾಧ್ಯವಾದರೆ, ಈ ಭೌತಿಕ ದೇಹವನ್ನು ಸ್ವೀಕರಿಸಲು ಅವನು ಮತ್ತೆ ಈ ಭೌತಿಕ ಜಗತ್ತಿಗೆ ಹಿಂತಿರುಗುವುದಿಲ್ಲ." ಮತ್ತು ಭೌತಿಕ ದೇಹ ಎಂದರೆ ಮೂರು ರೀತಿಯ ಕ್ಲೇಶಗಳು, ಮೂರು ಪಟ್ಟು ದುಃಖಗಳು, ಯಾವಾಗಲೂ. ಮತ್ತು ಕನಿಷ್ಠ ಮೂರು ಪಟ್ಟು ದುಃಖಗಳು ನಾಲ್ಕು ರೀತಿಯ ಸಂಕಟಗಳಲ್ಲಿ ಪ್ರದರ್ಶಿಸಲ್ಪಡುತ್ತವೆ. ಅವುಗಳೆಂದರೆ ಜನನ, ಮರಣ, ವೃದ್ಧಾಪ್ಯ ಮತ್ತು ರೋಗ."
690506 - ಉಪನ್ಯಾಸ ವಿವಾಹ - ಬೋಸ್ಟನ್