KN/690616b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಭೌತಿಕ ಪ್ರಕೃತಿಯ ಹಿಡಿತದಲ್ಲಿದ್ದೇವೆ. ಈ ... ಕರ್ಮಣಾ ದೈವ - ನೇತ್ರೇಣ (ಶ್ರೀ ಮ ಭಾ ೩.೩೧.೧). ನೀವು ಕೆಲವು ಭೌತಿಕ ಗುಣದ ಪ್ರಭಾವದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಮತ್ತು ನೀವು ನಿಮ್ಮ ಮುಂದಿನ ಜನ್ಮವನ್ನು ಸಿದ್ಧಗೊಳಿಸುತ್ತಿದ್ದೀರಿ. , 'ಪರವಾಗಿಲ್ಲ, ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ನೀವು ಹೇಳಲು ಸಾಧ್ಯವಿಲ್ಲ. ನಾನು... ನಾನು ಅಮೆರಿಕಾದಲ್ಲಿ ಹುಟ್ಟಿದ್ದೇನೆ. ನನ್ನ ರಾಷ್ಟ್ರವು ಬಹಳ ಶ್ರೇಷ್ಠ ರಾಷ್ಟ್ರವಾಗಿದೆ ಮತ್ತು ನಾವು ತುಂಬಾ ಶ್ರೀಮಂತರಾಗಿದ್ದೇವೆ. ಹಾಗಾಗಿ ನಾನು ಮುಂದಿನ ಜನ್ಮವೂ, ನಾನು ಅಮೇರಿಕಾಕ್ಕೆ ಬರುತ್ತೇನೆ. ನಾನು ನನ್ನ ಜನ್ಮವನ್ನು ಇಲ್ಲಿಯೇ ತೆಗೆದುಕೊಳ್ಳುತ್ತೇನೆ ಮತ್ತು ಈ ರೀತಿ ಆನಂದಿಸುತ್ತೇನೆ. ಒಹ್ ಅದು ನಿನ್ನ ಕೈನಲ್ಲಿ ಇಲ್ಲ. ಅದು ದೈವ ನೇತ್ರೇಣ. ದೈವ. ದೈವ ಎಂದರೆ ಅದು ಅಲೌಕಿಕ ಶಕ್ತಿಯಲ್ಲಿದೆ. ದೈವ. ಅದೇ ವಿಷಯ: ದೈವಿ ಹಿ ಏಷಾ ಗುಣಮಯಿ ಮಮ ಮಾಯಾ. (ಭ.ಗೀ- ೭.೧೪). ನೀವು ಹೇಳಲು ಸಾಧ್ಯವಿಲ್ಲ. ದೈವ-ನೇತ್ರೇಣ. ನೀವು ನಿಮ್ಮ ಜೀವನವನ್ನು ಸಿದ್ಧಪಡಿಸುತ್ತಿದ್ದೀರಿ. ಉನ್ನತ ಅಧಿಕಾರಿಗಳು ನಿಮಗೆ ಅವಕಾಶವನ್ನು ನೀಡುತ್ತಾರೆ. ನೀವು ನಿಮ್ಮನ್ನು ಚೆನ್ನಾಗಿ ಸಿದ್ಧಪಡಿಸಿದರೆ, ನಿಮಗೆ ಉತ್ತಮ ಅವಕಾಶ ಸಿಗುತ್ತದೆ; ನೀವು ಉನ್ನತ ಗ್ರಹದಲ್ಲಿ ಜನ್ಮ ಪಡೆಯುತ್ತೀರಿ. ಅಥವಾ ನೀವು ಸ್ವತಃ ..., ನಿಮ್ಮನ್ನು ಚೆನ್ನಾಗಿ ಸಿದ್ಧಪಡಿಸಿದರೆ, ನಂತರ ನೀವು ಕೃಷ್ಣನ ಬಳಿಗೆ ಹೋಗುತ್ತೀರಿ. ಈಗ ಅದು ನಿಮ್ಮ ಆಯ್ಕೆಯಾಗಿದೆ."
690616 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೩-ನವ ವೃಂದಾವನ, ಯು ಯಸ್ ಏ