KN/690716c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಯಾವಾಗ ಒಬ್ಬ ವ್ಯಕ್ತಿಯು ಈ ಐಹಿಕ ಕಲ್ಮಶದಿಂದ ಬಳಲುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ಅವನ ಜೀವನವು ಪ್ರಾಣಿ ಜೀವನ. ತಾನು ಬಳಲುತ್ತಿರುವುದನ್ನು ಅವನು ತಿಳಿದಿದ್ದಾನೆ, ಆದರೆ ಅವನು ಕೆಲವು ಅಸಂಬದ್ಧ ವಿಧಾನಗಳಿಂದ ದುಃಖವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆ: ಮರೆವು, ಮದ್ಯಪಾನ, ಮಾದಕತೆ, ಇದರಿಂದ, ಅದರಿಂದ. ಅವನು ತನ್ನ ಸಂಕಟದ ಅರಿವನ್ನು ಹೊಂದಿದ್ದಾನೆ, ಆದರೆ ಅವನು ತನ್ನ ನೋವನ್ನು ಅಸಂಬದ್ಧ ರೀತಿಯಲ್ಲಿ ಮುಚ್ಚಿಡಲು ಬಯಸುತ್ತಾನೆ. ಮೊಲದಂತೆಯೇ. ಮೊಲವು, ಯಾವುದಾದರೂ ಕ್ರೂರ ಪ್ರಾಣಿಯ ಮುಖಾಮುಖಿಯಾದಾಗ, ಮೊಲವು ಕಣ್ಣು ಮುಚ್ಚುತ್ತದೆ; ತಾನು ಸುರಕ್ಷಿತವೆಂದು ಅದು ಭಾವಿಸುತ್ತದೆ. ಅದೇ ರೀತಿ, ನಮ್ಮ ಕಷ್ಟಗಳನ್ನು ಕೃತಕ ವಿಧಾನಗಳಿಂದ ಮುಚ್ಚಿಡಲು ಪ್ರಯತ್ನಿಸುವುದರಿಂದ ಅದು ಪರಿಹಾರವಲ್ಲ. ಅದು ಅಜ್ಞಾನ. ಕಷ್ಟ ದುಃಖಗಳನ್ನು ಆಧ್ಯಾತ್ಮಿಕ ಜೀವನದ ಜ್ಞಾನೋದಯ, ಆಧ್ಯಾತ್ಮಿಕ ಆನಂದದಿಂದ ಪರಿಹರಿಸಬಹುದು."
690716 - ಉಪನ್ಯಾಸ ದೀಕ್ಷೆ - ಲಾಸ್ ಎಂಜಲೀಸ್