KN/690915b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅದನ್ನು ನಾವು ಕೀರ್ತನೆ ಮಾಡುವ ಮೂಲಕ ಮುಕ್ತವಾಗಿ ವಿತರಿಸುತ್ತಿದ್ದೇವೆ. ನೀವು ನಮ್ಮೊಂದಿಗೆ ಸೇರಿಕೊಳ್ಳಿ, ನೀವು ನಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ನಮ್ಮ ತತ್ವ ಏನು? ನಮ್ಮ ಹತ್ತಿರ 'ಬ್ಯಾಕ್ ಟು ಗಾಡ್ಹೆಡ್' ಎಂಬ ಮಾಸಿಕ ಪತ್ರಿಕೆಯಿದೆ, ನಮ್ಮಲ್ಲಿ ಅನೇಕ ಪ್ರಕಟಣೆಗಳಿವೆ: ಭಗವದ್ಗೀತಾ ಯಥಾರೂಪ, ಶ್ರೀ ಚೈತನ್ಯ ಶಿಕ್ಷಾಮೃತ. ನೀವು ಈ ಆಂದೋಳನವನ್ನು ತತ್ವಶಾಸ್ತ್ರ, ವಿಜ್ಞಾನ, ವಾದದ ಮೂಲಕ ಅರ್ಥಮಾಡಿಕೊಳ್ಳಲು ಬಯಸಿದರೆ, ನಾವು ಸಿದ್ಧರಿದ್ದೇವೆ. ನಿಮಗೆ ಸಾಕಷ್ಟು ಅವಕಾಶವಿದೆ, ಆದರೆ ನೀವು ಸರಳವಾಗಿ ಜಪ ಮಾಡಿದರೆ, ಯಾವುದೇ ಶಿಕ್ಷಣದ ಅಗತ್ಯವಿಲ್ಲ, ಯಾವುದೇ ತತ್ವಜ್ಞಾನದ ಅಗತ್ಯವಿಲ್ಲ. ಜಪಿಸಿ - ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಮತ್ತು ನೀವು ಎಲ್ಲವನ್ನೂ ಗಳಿಸುವಿರಿ."
690915 - ಉಪನ್ಯಾಸ at Conway Hall - ಲಂಡನ್