KN/710201 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಭಗವಂತನ ನಾಮದಲ್ಲಿ ಯಾವುದಾದರೂ ಒಂದನ್ನು ಜಪಿಸಿದರೂ, ಭಗವಂತನು ಪರಮ ಸತ್ಯನಾಗಿರುವುದರಿಂದ ಅವನ ಮತ್ತು ಅವನ ಹೆಸರಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆದ್ದರಿಂದ, ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ನೀವು ನೇರವಾಗಿ ಕೃಷ್ಣನೊಂದಿಗೆ ಸಂಪರ್ಕಿಸುತ್ತೀರಿ ಮತ್ತು ಪರಿಶುದ್ಧರಾಗುತ್ತೀರಿ. ಚೇತೋ-ದರ್ಪಣ-ಮಾರ್ಜನಂ ಭವ-ಮಹಾ-ದಾವಾಗ್ನಿ-ನಿರ್ವಾಪಣಂ (ಚೈ.ಚ ಅಂತ್ಯ 20.12, ಶಿಕ್ಷಾಷ್ಠಕ 1). ಸಹಜವಾಗಿ, ಈ ಮಹಾ-ಮಂತ್ರದ ಬಗ್ಗೆ ಎಲ್ಲವನ್ನೂ ವಿವರಿಸುವುದು ಒಂದು ದೀರ್ಘವಾದ ಯೋಜನೆ. ಆದರೆ ಈ ಹುಡುಗರು ಮತ್ತು ಹುಡುಗಿಯರು ಕೇವಲ ಜಪ ಮಾಡುವ ಮೂಲಕ ಹೇಗೆ ಪರಿಶುದ್ಧರಾಗುತ್ತಿದ್ದಾರೆ, ಮತ್ತು ಹೇಗೆ ಪಾರಮಾರ್ಥಿಕ ಭಾವಪರವಶತೆಯಲ್ಲಿ ನರ್ತಿಸುತ್ತಿದ್ದಾರೆ ಎಂದು ನೀವು ಗಮನಿಸಿ, ನಿಮ್ಮ ಜೀವನದಲ್ಲಿಯೂ ಇದನ್ನು ಹೇಗೆ ಪ್ರಯೋಗ ಮಾಡಬಹುದು ಎಂದು ನಮ್ಮಿಂದ ತಿಳಿದುಕೊಂಡರೆ ಸಂತೋಷವಾಗಿರುತ್ತೀರಿ."
710201 - ಉಪನ್ಯಾಸ - ಅಲಹಾಬಾದ್