KN/710216c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಗುರುವು ಬದ್ಧ ಆತ್ಮವಾಗಲು ಸಾಧ್ಯವಿಲ್ಲ. ಗುರುವು ಮುಕ್ತನಾಗಿರಬೇಕು. ಏಕೆಂದರೆ ಕೃಷ್ಣನ ಸಂಪೂರ್ಣ ಜ್ಞಾನವಿಲ್ಲದೆ, ಭೌತಿಕ ಪ್ರಕೃತಿಯ ತ್ರಿಗುಣಗಳ ಮಾಲಿನ್ಯದಿಂದ ಮುಕ್ತನಾಗದೆ… ಪ್ರಕೃತಿಯ ಈ ಭೌತಿಕ ತ್ರಿಗುಣಗಳಲ್ಲಿ ತಲ್ಲೀನನಾಗಿರುವುದರಿಂದ ಯಾರೂ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಕೃಷ್ಣ ಹೇಳುತ್ತಾನೆ, ‘ಯಾರು ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೋ, ಅವನು ತಕ್ಷಣವೇ ಮುಕ್ತನಾಗುತ್ತಾನೆ." ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ (ಭ.ಗೀ 4.9). ನಾವು ಪ್ರತಿ ಕ್ಷಣವೂ ನಮ್ಮ ಉಡುಪನ್ನು ಅಥವಾ ನಮ್ಮ ವಿಭಿನ್ನ ದೇಹಗಳನ್ನು ಬದಲಾಯಿಸುತ್ತಿರುವುದರಿಂದ ಕೃಷ್ಣ ಹೇಳುತ್ತಾನೆ, ‘ತ್ಯಕ್ತ್ವಾ ದೇಹಂ’."
710216 - ಉಪನ್ಯಾಸ at Krsna Niketan - ಗೋರಖ್ಪುರ