KN/710223 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರತಿಯೊಂದು ಜೀವಿಯು ಜಾಗೃತವಾಗಿದೆ. ಈ ಭೌತಿಕ ಪ್ರಪಂಚದ ಮಾಲಿನ್ಯದಿಂದ ಮೂಲ ಪ್ರಜ್ಞೆಯು ಕಲುಷಿತವಾಗಿದೆ. ಅಂದರೆ ನೀರು ನೇರವಾಗಿ ಮೋಡದಿಂದ ಬೀಳುವಾಗ ಯಾವುದೇ ಕೊಳಕು ಇಲ್ಲದೆ ಸ್ಪಷ್ಟವಾಗಿರುತ್ತದೆ. ಆದರೆ ಅದು ನೆಲವನ್ನು ಮುಟ್ಟಿದ ತಕ್ಷಣ ಕೆಸರಾಗುತ್ತದೆ. ಮತ್ತೆ, ನೀರಿನಿಂದ ಕೆಸರಿನ ಭಾಗವನ್ನು ಬೇರೆಮಾಡಿದರೆ ಮತ್ತೊಮ್ಮೆ ನೀರು ಸ್ಪಷ್ಟವಾಗುತ್ತದೆ. ಅಂತೆಯೇ, ನಮ್ಮ ಪ್ರಜ್ಞೆಯು ಭೌತಿಕ ಪ್ರಕೃತಿಯ ತ್ರಿಗುಣಗಳಿಂದ ಕಲುಷಿತವಾಗಿರುವುದರಿಂದ, ನಾವು ಒಬ್ಬರನ್ನೊಬ್ಬರು ಶತ್ರು ಅಥವಾ ಮಿತ್ರ ಎಂದು ಭಾವಿಸುತ್ತೇವೆ. ಕೃಷ್ಣ ಪ್ರಜ್ಞೆಯ ನೆಲೆ ತಲುಪಿದಾಗ, ‘ನಾವು ಒಂದು. ಕೇಂದ್ರವು ಕೃಷ್ಣ’ ಎಂದು ನೀವು ಭಾವಿಸುತ್ತೀರಿ.”
710223 - ಉಪನ್ಯಾಸ Pandal - ಬಾಂಬೆ