KN/720320 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಕೃಷ್ಣನ ಶಾಶ್ವತ ಸೇವಕರು; ನಿಮ್ಮ ದೇಹದ ಭಾಗಗಳಂತೆ, ಅವರೆಲ್ಲರೂ ನಿಮ್ಮ ಸೇವಕರು.

ಈ ಬೆರಳು ನಿಮ್ಮ ದೇಹದ ಭಾಗವಾಗಿದೆ, ಆದರೆ ಅದು ಯಾವಾಗಲೂ ಇಡೀ ದೇಹಕ್ಕೆ ಸೇವೆ ಸಲ್ಲಿಸುತ್ತದೆ. ಬೆರಳು ಆಸ್ವಾದಿಸುವವನಲ್ಲ, ಅಥವಾ ಕೈ ಆಸ್ವಾದಿಸುವವನಲ್ಲ; ಹೊಟ್ಟೆಯು ಆನಂದಿಸುವವನು. ನೀವು ನಿಮ್ಮ ಬೆರಳುಗಳು ಮತ್ತು ಕೈಗಳಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಹೊಟ್ಟೆಗೆ ಕೊಡುತ್ತೀರಿ. ಹಾಗೆಯೇ, 'ದಾಸ್ಯಂ ಗತಾನಂ:' ನಿಜವಾದ ಆತ್ಮಸಾಕ್ಷಾತ್ಕಾರವೆಂದರೆ 'ನಾನು ಪರಮಾತ್ಮನ ಭಾಗವಾಗಿದ್ದೇನೆ'. 'ಮಮೈವಾಂಶೋ ಜೀವ-ಭೂತ'. (ಭಗವದ್ಗೀತೆ 15.7) ಹಾಗಾಗಿ ನಾನು ಪರಮಾತ್ಮನ ಭಾಗವಾಗಿದ್ದೇನೆ, ನನ್ನ ನಿಜವಾದ ಕರ್ತವ್ಯ ಏನು ಎಂದು ಅರ್ಥಮಾಡಿಕೊಳ್ಳಬೇಕು."

720320 - ಉಪನ್ಯಾಸ - ಬಾಂಬೆ