KN/720428 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟೊಕಿಯೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವೈಕುಂಠ ಗ್ರಹಗಳಲ್ಲಿ ಬಹಳ ಶ್ರೇಷ್ಠವಾದ, ಗೌರವಯುತವಾದ ಪ್ರಜ್ಞೆ ಇದೆ, 'ಇಗೋ ಭಗವಂತ'.

ಆದರೆ ವೃಂದಾವನದಲ್ಲಿ ಅಂತಹ ಗೌರವ ಪ್ರಜ್ಞೆ ಇಲ್ಲ. ಕೃಷ್ಣ ಮತ್ತು ಗೋಪಾಲಕರು ಹುಡುಗರು, ಗೋಪಿಯರು. ಆದರೆ ಅವರ ಪ್ರೀತಿ ತುಂಬಾ ತುಂಬಾ ತೀವ್ರವಾಗಿರುತ್ತದೆ. ಪ್ರೀತಿಯಿಂದ, ಅವರು ಕೃಷ್ಣನಿಗೆ ಅವಿಧೇಯರಾಗಲು ಸಾಧ್ಯವಿಲ್ಲ. ಇಲ್ಲಿ ವೈಕುಂಠ ಗ್ರಹಗಳಲ್ಲಿ, ಗೌರವದಿಂದ, ಅವರು ಅವಿಧೇಯರಾಗಲು ಸಾಧ್ಯವಿಲ್ಲ. ವೃಂದಾವನದಲ್ಲಿ, ಗೋಲೋಕ ವೃಂದಾವನದಲ್ಲಿ, ಅವರು ಕೃಷ್ಣನಿಗೆ ಏನನ್ನೂ ನಿರಾಕರಿಸುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಕೃಷ್ಣನು ತುಂಬಾ ಪ್ರೀತಿಪಾತ್ರನು. ಅವರು ಏನು ಬೇಕಾದರೂ ನೀಡಬಹುದು. ಕೃಷ್ಣನು ದೇವರೋ ಅಲ್ಲವೋ ಎಂದು ಅವರಿಗೆ ತಿಳಿದಿಲ್ಲದ ಕಾರಣ ಅಷ್ಟು ಗೌರವವಿಲ್ಲ. ಅವರಿಗೆ ಗೊತ್ತು, 'ಕೃಷ್ಣ ನಮ್ಮಂತೆ, ಅವನು ನಮ್ಮಲ್ಲಿ ಒಬ್ಬ'. ಆದರೆ ಅವರ ಗೌರವ ಮತ್ತು ಪ್ರೀತಿ ಎಷ್ಟು ತೀವ್ರವಾಗಿದೆ ಎಂದರೆ ಕೃಷ್ಣನಿಲ್ಲದೆ ಅವರು ನಿರ್ಜೀವರಾಗುತ್ತಾರೆ. ಕೃಷ್ಣನಿಲ್ಲದೆ ಜೀವನವಿಲ್ಲ."

720428 - ಉಪನ್ಯಾಸ SB 02.09.10 - ಟೊಕಿಯೊ