KN/720503 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟೊಕಿಯೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನವಜಾತ ಭಕ್ತನಲ್ಲಿ ಅವನ ಹಿಂದಿನ ಅನುಭವದಿಂದ ಕೆಲವು ಕೆಟ್ಟ ನಡವಳಿಕೆಗಳನ್ನು ನಾವು ಕಂಡುಕೊಂಡರೂ, ನಾವು ಅವನನ್ನು ಭಕ್ತನಲ್ಲ ಎಂದು ನೋಡಬಾರದು.

'ಸಾಧುರ್ ಏವ ಸ ಮಾಂತವ್ಯಃ' (ಭಗವದ್ಗೀತೆ 9.30). ಅವನು ಸಾಧು - ಅವನು ಕೃಷ್ಣ ಪ್ರಜ್ಞೆಗೆ ಅಂಟಿಕೊಂಡರೆ. ಈಗ ಗೋಚರಿಸುವ ಕೆಟ್ಟ ಅಭ್ಯಾಸಗಳು ಕಣ್ಮರೆಯಾಗುತ್ತವೆ. ಅದೆಲ್ಲ ಮಾಯವಾಗುತ್ತದೆ. ಹಾಗಾಗಿ ಅವಕಾಶ ನೀಡಬೇಕು. ಭಕ್ತನ ಕೆಲವು ಕೆಟ್ಟ ಅಭ್ಯಾಸಗಳನ್ನು ಕಂಡ ಮಾತ್ರಕ್ಕೆ ಅವನನ್ನು ತಿರಸ್ಕರಿಸಬಾರದು. ನಾವು ಇನ್ನೊಂದು ಅವಕಾಶ ನೀಡಬೇಕು. ನಾವು ಅವನಿಗೆ ಇನ್ನೊಂದು ಅವಕಾಶವನ್ನು ನೀಡಬೇಕು, ಏಕೆಂದರೆ ಅವನು ಸರಿಯಾದ ವಿಷಯಗಳನ್ನು ತೆಗೆದುಕೊಂಡಿದ್ದಾನೆ, ಆದರೆ ಹಿಂದಿನ ನಡವಳಿಕೆಗೆ, ಅವನು ಮತ್ತೆ ಮಾಯೆಯ ಹಿಡಿತಕ್ಕೆ ಹಿಂತಿರುಗುತ್ತಿರುವಂತೆ ತೋರುತ್ತಿದೆ. ಆದ್ದರಿಂದ ನಾವು ಅವನನ್ನು ತಿರಸ್ಕರಿಸಬಾರದು. ನಾವು ಅವಕಾಶ ನೀಡಬೇಕು. ಒಬ್ಬನು ಗುಣಮಟ್ಟಕ್ಕೆ ಬರಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದರೆ ನಾವು ಅವನಿಗೆ ಅವಕಾಶವನ್ನು ನೀಡಬೇಕು. ಅವನು ಕೃಷ್ಣ ಪ್ರಜ್ಞೆಗೆ ಅಂಟಿಕೊಂಡರೆ, ಶೀಘ್ರದಲ್ಲೇ ಈ ಎಲ್ಲಾ ದೋಷಗಳು ಕಣ್ಮರೆಯಾಗುತ್ತವೆ. 'ಕ್ಷಿಪ್ರಂ ಭವತಿ ಧರ್ಮಾತ್ಮ' (ಭಗವದ್ಗೀತೆ 9.31). ಅವನು ಸಂಪೂರ್ಣವಾಗಿ ಧರ್ಮಾತ್ಮನಾಗುತ್ತಾನೆ, ಮಹಾತ್ಮನಾಗುತ್ತಾನೆ."

720503 - ಉಪನ್ಯಾಸ SB 02.09.13 - ಟೊಕಿಯೊ