KN/720604b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಕ್ಸಿಕೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಒಬ್ಬ ಮನುಷ್ಯ: "ಕೃಷ್ಣನು ವಿಶ್ವವನ್ನು ಏಕೆ ಸೃಷ್ಟಿಸಿದನು?"

ಪ್ರಭುಪಾದರು: "ಏಕೆಂದರೆ ಅವನು ಸೃಷ್ಟಿಕರ್ತ. ದೇವರು; ಅವನನ್ನು ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಅವನು ಅನೇಕವನ್ನು ಸೃಷ್ಟಿಸುತ್ತಿದ್ದಾನೆ. ಅವನು ನಿನ್ನನ್ನೂ ಸೃಷ್ಟಿಸಿದ್ದಾನೆ. ನೀವು ಸಹ ರಚಿಸುತ್ತಿದ್ದೀರಿ. ವಿಜ್ಞಾನಿಗಳಾದ ನೀವೂ ಹಲವು ಆವಿಷ್ಕಾರಗಳನ್ನು ರಚಿಸುತ್ತಿದ್ದೀರಿ. ನೀವು ಸೃಜನಶೀಲ ಶಕ್ತಿಯನ್ನು ಹೊಂದಿದ್ದೀರಿ. ಎಲೆಕ್ಟ್ರಿಷಿಯನ್ ವಿದ್ಯುತ್ ಫ್ಯಾನ್, ವಿದ್ಯುತ್ ದೀಪ, ಹೀಟರ್, ಎಲೆಕ್ಟ್ರಿಕ್ ಹೀಗೆ ಹಲವು ವಸ್ತುಗಳನ್ನು ಸೃಷ್ಟಿಸುತ್ತಾನೆ. ಎಲೆಕ್ಟ್ರಿಷಿಯನ್, ಅದು ಪ್ರಕೃತಿ. ಮತ್ತು ಭಗವಂತ ಸರ್ವೋತ್ತಮ. ಸೃಷ್ಟಿಸುವ ಶಕ್ತಿ ಅವನಿಗಿದೆ. ಅವನು ಸೃಷ್ಟಿಯಿಂದ ಅನೇಕನಾಗುತ್ತಿದ್ದಾನೆ. ಅನೇಕ; ವೈವಿಧ್ಯತೆ ಇದ್ದಾಗ, ಅನೇಕ, ಅಂದರೆ ಸೃಷ್ಟಿ. ಹಾಗಾಗಿ ಇದು ಭಗವಂತನ ಸೃಷ್ಟಿಗಳಲ್ಲಿ ಒಂದಾಗಿದೆ. ಸೃಷ್ಟಿಯ ಅವಶ್ಯಕತೆ ಇತ್ತು, ಆದ್ದರಿಂದ ಅವನು ಸೃಷ್ಟಿಸಿದನು. ಕೆಲವು ಜೀವಿಗಳು ಆನಂದಿಸಲು ಬಯಸುವುದು ಅಗತ್ಯವಾಗಿತ್ತು. ಅವರಿಗೆ ಕೃಷ್ಣನ ಸೇವೆ ಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ಅವರಿಗಾಗಿ, ಇಲ್ಲಿ ಈ ಭೌತಿಕ ಜಗತ್ತಿನಲ್ಲಿ ಆನಂದಿಸಲು, ಕೃಷ್ಣನು ಈ ಜಗತ್ತನ್ನು ಸೃಷ್ಟಿಸಿದನು."

720604 - ಸಂಭಾಷಣೆ C - ಮೆಕ್ಸಿಕೊ