KN/720630 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಡಿಯಾಗೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರತಿಯೊಬ್ಬರೂ ತಮ್ಮ ನಿರ್ದಿಷ್ಟ ರೀತಿಯ ಧರ್ಮ ಅಥವಾ ಉದ್ಯೋಗವನ್ನು ಹೊಂದಿದ್ದಾರೆ. ಅದು ಪರವಾಗಿಲ್ಲ. 'ಧರ್ಮ: ಸ್ವಾನುಷ್ಠಿತ್: ಪುಂಸ'(SB 1.2.8). ಫಲಿತಾಂಶವು ಹೀಗಿರುತ್ತದೆ... ನಿಮ್ಮ ನಿರ್ದಿಷ್ಟ ರೀತಿಯ ಧರ್ಮವನ್ನು ಕಾರ್ಯಗತಗೊಳಿಸುವ ಮೂಲಕ, ಫಲಿತಾಂಶವು ಇರಬೇಕು. ಇದರ ಫಲಿತಾಂಶವೆಂದರೆ, 'ನಾನು ಮನೆಗೆ ಹಿಂದಿರುಗುವುದು ಹೇಗೆ, ದೇವರಿಗೆ ಹಿಂತಿರುಗುವುದು'. ಆ ಆಸೆಯನ್ನು ಬೆಳೆಸಿಕೊಳ್ಳದಿದ್ದರೆ, ಅದು ಸಮಯ ವ್ಯರ್ಥ. ನೀವು ಈ ಧರ್ಮ ಅಥವಾ ಆ ಧರ್ಮ ಅಥವಾ ಈ ಧರ್ಮ ಅಥವಾ ಆ ಧರ್ಮವನ್ನು ಪ್ರತಿಪಾದಿಸಬಹುದು, ಅದು ಪರವಾಗಿಲ್ಲ. ನೀವು ಸಿದ್ಧಾಂತಗಳನ್ನು ಮತ್ತು ಆಚರಣೆಗಳನ್ನು ಅನುಸರಿಸುವ ಮೂಲಕ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ಅದು ನಿಮಗೆ ಸಹಾಯ ಮಾಡುವುದಿಲ್ಲ. ಫಲೇನ ಪರಿಚಯತೇ. ನೀವು ಈ ಪ್ರಜ್ಞೆಗೆ ಬಂದಿದ್ದೀರಾ, 'ನಾನು ಏನು? ನಾನು ಸ್ಥೂಲ ಶರೀರವಲ್ಲ; ನಾನು ಆತ್ಮ. ನಾನು ನನ್ನ ಆಧ್ಯಾತ್ಮಿಕತೆಗೆ ಹಿಂತಿರುಗಬೇಕು. ಅದು... ಅದು ಬೇಕು.

ಹಾಗಾದರೆ ನೀವು ಹೀಬ್ರೂ ಆಗಿರಬಹುದು ಅಥವಾ ಹಿಂದೂ ಅಥವಾ ಕ್ರಿಶ್ಚಿಯನ್ ಆಗಿರಬಹುದು - ಆ ಪ್ರಜ್ಞೆ ಹುಟ್ಟಿದೆಯೇ ಎಂದು ನಾವು ನೋಡಬೇಕು. ಅದು ಇಲ್ಲದಿದ್ದರೆ, ನೀವು ಸುಮ್ಮನೆ ಸಮಯವನ್ನು ವ್ಯರ್ಥ ಮಾಡಿದಿರಿ. ನೀವು ಹಿಂದೂ ಅಥವಾ ಬ್ರಾಹ್ಮಣ ಅಥವಾ ಇದು ಅಥವಾ ಅದು ಮುಖ್ಯವಲ್ಲ. ಶ್ರಮ ಏವ ಹಿ ಕೇವಲಮ್. (SB 1.2.8). ಸುಮ್ಮನೆ ನೀವು ಸಮಯ ವ್ಯರ್ಥ ಮಾಡುತ್ತಿದ್ದೀರಿ."

720630 - ಉಪನ್ಯಾಸ at Indians Home - ಸ್ಯಾನ್ ಡಿಯಾಗೊ