KN/720715 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಮ್ಮ ಆದರ್ಶವೆಂದರೆ ನಾವು ಮಾಯೆಯೊಂದಿಗೆ ಹೋರಾಡುತ್ತಿದ್ದೇವೆ. ತಿನ್ನುವುದು, ಮಲಗುವುದು, ಮಿಲನ ಮಾಡುವುದು ಮತ್ತು ರಕ್ಷಿಸುವುದು ಎಂಬ ಈ ನಾಲ್ಕು ಪ್ರಕ್ರಿಯೆಗಳಿಂದ ನಾವು ವಿಚಲಿತರಾಗುವುದಿಲ್ಲ ಎಂದು ನೋಡಿದಾಗ ಮಾಯೆಯ ಮೇಲೆ ನಮ್ಮ ವಿಜಯ. ಇದು ಪರೀಕ್ಷೆ. ಒಬ್ಬರು ಆಧ್ಯಾತ್ಮಿಕವಾಗಿ ಹೇಗೆ ಮುನ್ನಡೆಯುತ್ತಿದ್ದಾರೆಂದು ಯಾರೂ ಯಾರಿಂದಲೂ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕಾಗಿಲ್ಲ. ಅವನು ತನ್ನನ್ನು ತಾನೇ ಪರೀಕ್ಷಿಸಿಕೊಳ್ಳಬಹುದು: "ನಾನು ಈ ನಾಲ್ಕು ಅಭ್ಯಾಸಗಳನ್ನು ಎಷ್ಟು ಜಯಿಸಿದೆ: ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಿಸುವುದು." ಅಷ್ಟೇ. ಅದುವೇ ಪರೀಕ್ಷೆ. ಹಾಗಾಗಿ ಊಟ ಮಾಡಬೇಡಿ, ನಿದ್ದೆ ಮಾಡಬೇಡಿ... ಕಡಿಮೆ ಮಾಡಿ, ಕನಿಷ್ಠ ನಿಯಂತ್ರಣವನ್ನಾದರೂ ಮಾಡಿ. ಪ್ರಯತ್ನಿಸಿ. ಇದನ್ನು ತಪಸ್ಸು ಎನ್ನುತ್ತಾರೆ. ನಾನು ಮಲಗಲು ಬಯಸುತ್ತೇನೆ, ಆದರೆ ನಾನು ಅದನ್ನು ನಿಯಂತ್ರಿಸುತ್ತೇನೆ. ನಾನು ತಿನ್ನಲು ಬಯಸುತ್ತೇನೆ, ಆದರೆ ನಾನು ಅದನ್ನು ನಿಯಂತ್ರಿಸಬೇಕು. ನಾನು ಇಂದ್ರಿಯ ಆನಂದವನ್ನು ಬಯಸುತ್ತೇನೆ, ಆದರೆ ನಾನು ಅದನ್ನು ನಿಯಂತ್ರಿಸಬೇಕು. ಅದು ಹಳೆಯ ವೈದಿಕ ನಾಗರಿಕತೆ."
720715 - ಉಪನ್ಯಾಸ SB 01.01.05 - ಲಂಡನ್