KN/Prabhupada 0015 - ನಾನು ಈ ದೇಹವಲ್ಲ



Lecture on BG 9.34 -- New York, December 26, 1966

ಆತ್ಮದ ಉಪಸ್ಥಿತಿಯನ್ನು ತೋರಲು ಆರು ಲಕ್ಷಣಗಳಿವೆ. ಬೆಳವಣಿಗೆ ಪ್ರಮುಖವಾದದು. ಆದ್ದರಿಂದ, ಬೆಳವಣಿಗೆ. ದೇಹದಿಂದ ಆತ್ಮ ಹೊರಗೆ ಹೋದ ತಕ್ಷಣ ಯಾವುದೇ ಬೆಳವಣಿಗೆ ಇಲ್ಲ. ಮೃತಜಾತ ಮಗು, ಓ, ಅಲ್ಲಿ ಬೆಳವಣಿಗೆ ಇರುವುದ್ದಿಲ್ಲ. ಓ, ಇದು ಉಪಯೋಗವಿಲ್ಲ, ಅದ್ದನ್ನು ಎಸೆಯಿರಿ ಎಂದು ಪೋಷಕರು ಹೇಳುತ್ತಾರೆ. ಅದೇ ರೀತಿ, ಭಗವಂತ ಕೃಷ್ಣ ಅರ್ಜುನನಿಗೆ ಮೊದಲನೆಯ ಉದಾಹರಣೆ ನೀಡಿದನು, "ಈ ದೇಹದಲ್ಲಿರುವ ಆಧ್ಯಾತ್ಮಿಕ ಚೇತನ, ಆದರ ಉಪಸ್ಠಿತಿಯ ಕಾರಣ, ಈ ದೇಹವು ಶಿಶುವಿನಿಂದ ಬಾಲ್ಯದವರೆಗೆ ಬೆಳೆಯುತ್ತದೆ, ಬಾಲ್ಯದಿಂದ ಯೌವನದವರಗೆ, ಯೌವನದಿಂದ ಮುಪ್ಪಿನವರಗೆ. ಆದ್ದರಿಂದ, ಯಾವಾಗ ಈ ದೇಹ ಅನುಪಯುಕ್ತವಾಗುತ್ತದೆಯೊ, ಅಗ್ರಾಹ್ಯವಾಗಿ, ಆತ್ಮ ಈ ದೇಹವನ್ನು ತ್ಯಜಿಸುತ್ತದೆ. ವಾಸಾಂಸಿ ಜೀರ್ಣಾನಿ ಯತಾ ವಿಹಾಯ (ಭ.ಗೀ 2.22). ನಾವು ಹಳೆಯ ವಸ್ತ್ರವನ್ನು ತ್ಯಜಿಸಿ ಹೊಸ ವಸ್ತ್ರವನ್ನು ಧರಿಸುವ ಹಾಗೆ ಮತ್ತೊಂದು ದೇಹವನ್ನು ಸ್ವೀಕರಿಸುತ್ತೇವೆ.

ನಾವು ಸ್ವೀಕರಿಸಿದ ಮತ್ತೊಂದು ದೇಹ ನಮ್ಮ ಆಯ್ಕೆಯ ಪ್ರಕಾರವಲ್ಲ. ಆ ಆಯ್ಕೆ ಪ್ರಕೃತಿ ನಿಯಮಗಳ ಮೇಲೆ ಅವಲಂಬಿಸಿರುತ್ತದೆ. ಆ ಆಯ್ಕೆ ಪ್ರಕೃತಿ ನಿಯಮಗಳ ಮೇಲೆ ಅವಲಂಬಿಸಿರುತ್ತದೆ. ನೀವು ಮರಣದ------- ಸಮಯದಲ್ಲಿ ಹೇಳಲು ಸಾಧ್ಯವಿಲ್ಲ, ಆದರೆ ನೀವು ಯೋಚಿಸಬಹುದು. ನೀವು ಹೇಳಬಹುದು, ಅಂದರೆ, ಪ್ರತ್ಯೇಕತೆ ಮತ್ತು ಆ ಆಯ್ಕೆ ಎಲ್ಲವು ಇದೆ. ಯಮ್ ಯಮ್ ವಾಪಿ ಸ್ಮರಣ್ ಲೋಕೇ ತ್ಯಜತಿ ಅಂತೇ ಕಲೇವರಮ್ (ಭ.ಗೀ 8.6). ಕೇವಲ, ಮರಣದ ಸಮಯದಲ್ಲಿ, ನಿಮ್ಮ ಮನಸ್ಥಿತಿ, ನಿಮ್ಮ ಆಲೋಚನೆಗಳು ಅಭಿವೃದ್ಧಿಯಾದಂತೆ, ನಿಮ್ಮಗೆ ಮುಂದಿನ ಜನ್ಮ ಆ ದೇಹದ ಪ್ರಕಾರ ಸಿಗುತ್ತದೆ. ಅದುದರಿಂದ ಬುದ್ಧಿವಂತ ಮನುಶ್ಯ, ಯಾರು ಹುಚ್ಚನಲ್ಲವೊ ಅವನು ನಾನು ಈ ದೇಹವಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಮೊದಲು ನಾನು ಈ ದೇಹವಲ್ಲ ಆಮೇಲೆ ಅವನ ಕರ್ತವ್ಯ ಏನೆಂದು ಅರಿವಾಗುತ್ತದೆ. ಓ! ಚೇತನ ಆತ್ಮವಾಗಿ, ಅವನ ಕರ್ತವ್ಯವೇನು?

ಅವನ ಕರ್ತವ್ಯ, ಅದನ್ನು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಕೊನೆಯ ಶ್ಲೋಕದಲ್ಲಿ ಹೇಳಲಾಗಿದೆ. ಆ ಕರ್ತವ್ಯ "ಮನ್-ಮನಾ ಭವ" (ಭ.ಗೀ 9.34). ನೀವು ಏನೋ ಯೋಚಿಸುತ್ತಿದ್ದಿರಿ. ನಮ್ಮಲ್ಲಿ ಪ್ರತಿಯೊಬ್ಬರು, ದೇಹಗತವಾಗಿ, ನಾವು ಏನಾದರು ಯೋಚಿಸುತ್ತೇವೆ. ಒಂದು ಕ್ಷಣವೂ ಯೋಚಿಸದೆ ಇರಲಾರೆವು. ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಆದ್ದರಿಂದ, ಇದೇ ನಮ್ಮ ಕರ್ತವ್ಯ. ನೀವು ಕೃಷ್ಣನನ್ನು ಸ್ಮರಿಸಿ. ನೀವು ಕೃಷ್ಣನ ಬಗ್ಗೆ ಆಲೋಚಿಸಿರಿ. ನೀವು ಏನಾದರು ಆಲೋಚಿಸಲೇ ಬೇಕು. ಆದ್ದರಿಂದ, ಕೃಷ್ಣನ ಬಗ್ಗೆ ಆಲೋಚಿಸಿದರೆ ತಪ್ಪೇನು? ಕೃಷ್ಣನ ಅನೇಕ ಲೀಲೆಗಳಿವೆ, ಅನೇಕ ಸಾಹಿತ್ಯಗಳು, ಮತ್ತು ಅನೇಕ ವಿಷಯಗಳಿವೆ. ಕೃಷ್ಣ ಇಲ್ಲಿ ಬರುತ್ತಾನೆ. ನಮ್ಮ ಬಳಿ ಅನೇಕ ಪುಸ್ತಕ ಸಂಪುಟಗಳಿವೆ. ನೀವು ಕೃಷ್ಣನನ್ನು ಸ್ಮರಿಸಲು ಇಚ್ಚಿಸಿದರೆ, ನಾವು ನಿಮ್ಮಗೆ ಅನೇಕ ಸಾಹಿತ್ಯಗಳನ್ನು ಒದಗಿಸುತ್ತೇವೆ. ನೀವು ಇಪತ್ತನಾಲ್ಕು ಗಂಟೆಗಳು ಓದಿದರೂ ನಿಮ್ಮ ಇಡೀ ಜೀವನದಲ್ಲಿ ಮುಗಿಸಲು ಸಾಧ್ಯವಿಲ್ಲ. ಆದ್ದರಿಂದ, ಕೃಷ್ಣನ ಬಗ್ಗೆ ಆಲೋಚನೆ ಮಾಡಲು ಸಾಕಷ್ಟು ಇದೆ. ಕೃಷ್ಣನನ್ನು ಸ್ಮರಿಸಿ. ಮನ್-ಮನಾ ಭವ. ಓ! ನಾನು ನಿನ್ನನ್ನು ಸ್ಮರಿಸ ಬಲ್ಲೆ.

ಒಬ್ಬ ವ್ಯಕ್ತಿ ತನ್ನ ಯಜಮಾನನಿಗೆ ಸೇವೆ ಮಾಡುವ ಹಾಗೆ. ಓ! ಅವನು ಯಾವಾಗಲೂ ಆ ಯಜಮಾನನ ಬಗ್ಗೆ ಆಲೋಚನೆ ಮಾಡುತ್ತಾನೆ. ಓ, ನಾನು ಒಂಬತ್ತು ಗಂಟೆಗೆ ಅಲ್ಲಿ ಹಾಜರಾಗಬೇಕು ಇಲ್ಲವಾದರೆ ಯಜಮಾನನಿಗೆ ಬೇಜರಾಗುತ್ತದೆ. ಅವರು ಯಾವುದೋ ಉದ್ದೇಶಕ್ಕಾಗಿ ಆಲೋಚನೆ ಮಾಡುತ್ತಾನೆ. ಆ ರೀತಿಯ ಆಲೋಚನೆ ಸೂಕ್ತವಲ್ಲ. ಅದ್ದರಿಂದ, ಅವನು ಹೇಳುತ್ತಾನೆ ಭವ ಮದ್-ಭಕ್ತಃ. "ನೀವು ಕೇವಲ ಪ್ರೀತಿಯಿಂದ ನನ್ನನ್ನು ಸ್ಮರಿಸು." ಯಾವಾಗ ಯಜಮಾನ... ಅಂದರೆ ಯಾವಾಗ ಸೇವಕ ತನ್ನ ಯಜಮಾನನ ಬಗ್ಗೆ ಆಲೋಚಿಸುತ್ತಾನೊ, ಅಲ್ಲಿ ಪ್ರೀತಿ ಇರುವುದ್ದಿಲ್ಲ. ಅವನು ವ್ಯಾಪಾರದ ದೃಷ್ಟಿಯಿಂದ ಯೋಚಿಸುತ್ತಾನೆ, "ನಾನು ಒಂಬ್ಬತ್ತು ಘಂಟೆಗೆ ಕಚೇರಿಗೆ ಹೋಗದಿದ್ದರೆ ಓ, ಆಗ ನಿಧಾನವಾಗುತ್ತದೆ, ಮತ್ತು ನಾನು ಎರಡು ಡಾಲರ್ ಕಳೆದುಕೊಳ್ಳಬಹುದು." ಅವನು ಆಲೋಚಿಸುವುದು ಯಜಮಾನನ ಬಗ್ಗೆ ಅಲ್ಲ. ಅವನು ಆಲೋಚಿಸುವುದು ಆ ಹಣದ ಬಗ್ಗೆ. ಹಾಗಾಗಿ ಈ ರೀತಿಯ ಆಲೋಚನೆ ನಿನ್ನನ್ನು ಉಳಿಸುವುದ್ದಿಲ್ಲ. ಆದ್ದರಿಂದ, ಕೃಷ್ಣನು ಹೇಳುತ್ತಾನೆ, ಭವ ಮದ್-ಭಕ್ತಃ. "ನೀನು ಕೇವಲ ನನ್ನ ಭಕ್ತನಾಗು. ಆಗ ನನ್ನ ಬಗ್ಗೆ ನಿನ್ನ ಆಲೋಚನೆ ಬಹಳ ಸೊಗಸಾಗಿರುತ್ತದೆ." ಮತ್ತು ಯಾವುದು ಆ ಭಕ್ತಿ? ಮದ್-ಭಕ್ತಃ. ಭಕ್ತಿ ಪೂರ್ವಕ... ಭಕ್ತಿ ಎಂದರೆ ಸೇವೆ. ಮದ್-ಯಾಜೀ. ನೀನು ಆ ಭಗವಂತನಿಗೆ ಕೆಲವು ಸೇವೆ ಮಾಡಬೇಕು. ನಾವು ಯಾವಾಗಲೂ ಇಲ್ಲಿ ತೊಡಗಿಸಿಕೊಂಡಿರುವ ಹಾಗೆ. ನೀವು ಯಾವಾಗ ಬಂದರು ನಾವು ಸದಾ ಕೆಲವು ಕಾರ್ಯದಲ್ಲಿ ತೊಡಗಿರುವುದುನ್ನು ನೋಡುತ್ತೀರಿ. ಹಾಗಾಗಿ ನಾವು ಕೆಲವು ಕರ್ತವ್ಯಗಳನ್ನು ತಯಾರಿಸಿದ್ದೇವೆ. ಕೇವಲ ಕೃಷ್ಣನ ಬಗ್ಗೆ ಆಲೋಚಿಸಲು.