KN/Prabhupada 0053 - ಮೊದಲೆನೆಯದಾಗಿ ನಾವು ಆಲಿಸ ಬೇಕು



Lecture on SB 2.1.5 -- Delhi, November 8, 1973

ನಾವು ಕೂಡ ಪ್ರಕೃತಿ. ನಾವು ಕೂಡ ದೇವರ ಶಕ್ತಿ. ಮತ್ತು ನಾವು ಭೌತಿಕ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತಿರುವುದರಿಂದ ಭೌತಿಕ ವಸ್ತುಗಳಿಗೆ ಬೆಲೆಯಿದೆ. ಇಲ್ಲವಾದರೆ, ಅದಕ್ಕೆ ಯಾವ ಬೆಲೆಯೂ ಇಲ್ಲ, ಸೊನ್ನೆ. ಆದರೆ ನಮ್ಮ ವ್ಯವಹಾರ... ಅದನ್ನು ಇಲ್ಲಿ ಹೇಳಲಾಗಿದೆ, ಈಗ ನಾವು ಈ ಜಡದೊಂದಿಗೆ ಸಿಲುಕಿಕೊಂಡಿರುವುದರಿಂದ... ಜಡದೊಂದಿಗೆ ನಮ್ಮ ವ್ಯವಹಾರವಿಲ್ಲ. ನಮ್ಮ ವ್ಯವಹಾರ ಏನಿದ್ದರೂ ಜಡದಿಂದ ಹೇಗೆ ಹೊರಬರುವುದು ಎಂಬುದು. ಅದೇ ನಮ್ಮ ನಿಜವಾದ ವ್ಯವಹಾರ. ನಿಮಗೆ ಆ ವ್ಯವಹಾರ ತಿಳಿಯಬೇಕಾದರೆ, ಅದರ ನಿಯಮನ ಇಲ್ಲಿದೆ. ಅದು ಏನು? ಶ್ರೋತವ್ಯಃ ಕೀರ್ತಿತವ್ಯಶ್ ಚ (ಶ್ರೀ.ಭಾ 1.2.14). ನೀವು ಆಲಿಸದಿದ್ದರೆ ನಿಮ್ಮ ಸ್ಥಾನದ ಬಗ್ಗೆ ಹೇಗೆ ಅರಿತುಕೊಳ್ಳುವಿರಿ? ನೀವು ಭಗವಂತನನ್ನು, ಕೃಷ್ಣನನ್ನು, ಅರಿತುಕೊಂಡಾಗ, ಹಾಗು ನೀವು ಭಗವಂತನ, ಅಥವ ಕೃಷ್ಣನ, ಭಾಗಾಂಶ ಎಂದು ಅರಿತುಕೊಂಡಾಗ, ನೀವು ನಿಮ್ಮ ನಿಜವಾದ ಸ್ಥಾನವನ್ನು ಅರಿಯುವುರಿ: "ಓ, ನಾವು ಭಗವಂತನ ಭಾಗಾಂಶ." ಕೃಷ್ಣನು ದೇವೋತ್ತಮ ಪರಮ ಪುರುಷ, ಷಡ್-ಐಶ್ವರ್ಯ-ಪೂರ್ಣಮ್, ಎಲ್ಲ ಐಶ್ವರ್ಯಗಳನ್ನು ಸಂಪೂರ್ಣವಾಗಿ ಹೊಂದಿರುವನು. ಹುಚ್ಚ ಮಗನು ಬೀದಿಯಲ್ಲಿ ಅಲೆದಾಡುವಂತೆ, ಆತ ಸರಿಯಾದ ಬುದ್ಧಿಯಿಂದ ಆಲೋಚಿಸಿದರೆ, " ನನ್ನ ತಂದೆ ಬಹಳ ಶ್ರೀಮಂತ, ಬಹಳ ಶಕ್ತಿಶಾಲಿ, ಹೀಗಿರುವಾಗ ನಾನೇಕೆ ಬೀದಿಯಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದೇನೆ? ನನಗೆ ಉಟವಿಲ್ಲ, ಆಶ್ರಯವಿಲ್ಲ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿದ್ದೇನೆ", ಆಗ ಆತ ತನ್ನ ಪ್ರಜ್ಞೆಗೆ ಬರುತ್ತಾನೆ. ಅದನ್ನೇ ಬ್ರಹ್ಮ-ಭೂತ ಸ್ಥಿತಿ (ಭ.ಗೀ 18.54) ಎನ್ನುತ್ತಾರೆ. "ಓ, ನಾನು ಈ ಜಡ ಅಲ್ಲ. ನಾನು ಆತ್ಮ, ದೇವರ ಭಾಗಾಂಶ. ಓ." ಅದುವೇ ಪ್ರಜ್ಞೆ.

ಈ ಪ್ರಜ್ಞೆಯನ್ನು ಎಬ್ಬಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದುವೆ ಜನರಿಗೆ ಸಲ್ಲಿಸುವ ಅತ್ಯುತ್ತಮ ಜನಕಲ್ಯಾಣ, ಅವರ ಕಳೆದುಹೋದ ಪ್ರಜ್ಞೆಯನ್ನು ಎಚ್ಚರಿಸುವುದು. ಆತ ಮೂರ್ಖನಂತೆ, "ನಾನು ಜಡದ ಉತ್ಪತ್ತಿ, ಹಾಗು ಈ ಭೌತಿಕ ಜಗತ್ತಿನಲ್ಲಿ ನನ್ನನ್ನು ನಾನು ಸರಿಹೊಂದಿಸಿಕೊಳ್ಳಬೇಕು" ಎಂದು ಯೋಚಿಸುತ್ತಿದ್ದಾನೆ. ಇದು ಮೂರ್ಖತನ. ನಿಜವಾದ ಬುದ್ಧಿವಂತಿಕೆ ಎಂದರೆ ಬ್ರಹ್ಮ-ಭೂತ, ಅಹಂ ಬ್ರಹ್ಮಾಸ್ಮಿ. ಅಹo ಬ್ರಹ್ಮಾಸ್ಮಿ, "ನಾನು ದೇವರ ಭಾಗಾಂಶ. ದೇವರು ಪರ ಬ್ರಹ್ಮನ್. ನಾನು ಭಾಗಾಂಶವಾಗಿರುವುದರಿಂದ..." ಹೇಗೆ ಚಿನ್ನದ, ಅಥವ ಚಿನ್ನದ ಗಣಿಯ, ಭಾಗಾಂಶ... ಅದು ಪುಟ್ಟ ಕಿವಿ ಒಲೆಯಾಗಿರಬಹುದು, ಆದರೂ ಅದು ಕೂಡ ಚಿನ್ನ. ಹಾಗೆಯೇ, ಸಮುದ್ರ ನೀರಿನ ಚಿಕ್ಕ ಕಣವೂ ಸಮುದ್ರ ನೀರಿನ ಗುಣವಾದ ಉಪ್ಪಿನ ರುಚಿಯನ್ನು ಪಡೆದಿರುತ್ತದೆ. ಆಗೇ, ನಾವು ದೇವರ ಆಂಶಿಕ ಭಾಗವಾಗಿರುವುದರಿಂದ, ದೇವರ ಗುಣಗಳನ್ನೇ ಹೊಂದಿರುವೆವು. ಗುಣಾತ್ಮಕವಾಗಿ ನಾವು ಒಂದು. ನಾವು ಪ್ರೀತಿಗಾಗಿ ಏಕೆ ಹಾತೊರೆಯುತ್ತೇವೆ? ಏಕೆಂದರೆ ಕೃಷ್ಣನಲ್ಲಿ ಪ್ರೀತಿ ಇದೆ. ನಾವು ಇಲ್ಲಿ ರಾಧಾ-ಕೃಷ್ಣರನ್ನು ಅರಾಧಿಸುತ್ತಿದ್ದೇವೆ. ಮೂಲಭೂತವಾಗಿ ಪ್ರೀತಿ ಇದೆ. ಆದ್ದರಿಂದ, ಭಗವಂತನ ಭಾಗಾಂಶವಾಗಿರುವ ನಾವು ಕೂಡ ಪ್ರೀತಿಸಲು ಪ್ರಯತ್ನಿಸುತ್ತೆದ್ದೇವೆ. ಒಬ್ಬ ಪುರುಷ ಮಹಿಳೆಯೊಬ್ಬಳನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದಾನೆ, ಒಬ್ಬ ಮಹಿಳೆ ಪುರುಷನೊಬ್ಬನನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದಾಳೆ. ಇದು ಸ್ವಾಭಾವಿಕ. ಇದು ಕೃತಕವಲ್ಲ. ಆದರೆ ಭೌತಿಕ ಮುಸುಕಿನಲ್ಲಿ ಅದು ವ್ಯತಿರಿಕ್ತವಾಗಿದೆ. ಅದೆ ಇದರ ದೋಷ. ಈ ಭೌತಿಕ ಆವರಣದಿಂದ ಮುಕ್ತರಾದಾಗಲೇ, ಗುಣಾತ್ಮಕವಾಗಿ ಆನಂದಮಯೋ ಅಭ್ಯಾಸಾತ್ (ವೇದಾಂತ ಸೂತ್ರ 1.1.12), ಖುಷಿಯಾಗಿ...ಹೇಗೆ ಕೃಷ್ಣನು ಸದಾ ನರ್ತಿಸುತ್ತಿರುತ್ತಾನೆ... ಎಂದಿಗೂ ನೀವು ಕಾಣಲಾರಿರಿ ಕೃಷ್ಣನು... ಕೃಷ್ಣನ ಚಿತ್ರವನ್ನು ನೀವು ನೋಡಿರುವಿರಿ. ಅವನು ಕಾಳಿಯ ಸರ್ಪದೊಂದಿಗೆ ಕಾದಾಡುತ್ತಿದ್ದಾನೆ. ಆತ ನರ್ತಿಸುತ್ತಿದ್ದಾನೆ. ಆತನಿಗೆ ಸರ್ಪವೆಂದರೆ ಭಯವಿಲ್ಲ. ಆತ ನರ್ತಿಸುತ್ತಿದ್ದಾನೆ. ಆತ ರಾಸ ಲೀಲೆಯಲ್ಲಿ ಗೋಪಿಯರೊಂದಿಗೆ ನರ್ತಿಸುತ್ತಿದ್ದಾನೆ, ಹಾಗೆಯೇ, ಆತ ಸರ್ಪದೊಂದಿಗೆ ನರ್ತಿಸುತ್ತಿದ್ದಾನೆ. ಏಕೆಂದರೆ ಆತ ಆನಂದಮಯೋ ಅಭ್ಯಾಸಾತ್. ಆತ ಆನಂದಮಯ, ಸದಾ ಖುಷಿಯಾಗಿರುವವನು. ನಿತ್ಯವಾಗಿ. ನೀವು ಕೃಷ್ಣನನ್ನು ನೋಡುವಿರಿ... ಕೃಷ್ಣ... ಕುರುಕ್ಷೇತ್ರದಲ್ಲಿ ಯುದ್ಧವು ನಡೆಯುತ್ತಿರುವ ಹಾಗೆ. ಕೃಷ್ಣನು ಸಂತೋಷವಾಗಿರುವನು. ಅರ್ಜುನನು ಜೀವಿಯಾಗಿರುವುದರಿಂದ ಆತ ಬೇಸರಗೊಂಡಿರುವನು, ಆದರೆ ಕೃಷ್ಣನಿಗೆ ಬೇಸರವಿಲ್ಲ. ಆತ ಆನಂದಮಯ. ಅದೇ ದೇವರ ಗುಣ. ಆನoದಮಯೋ ಅಭ್ಯಾಸಾತ್. ಇದುವೇ ಸೂತ್ರ, ಬ್ರಹ್ಮ ಸೂತ್ರದಲ್ಲಿ, ಏನೆಂದರೆ "ದೇವರು ಆನಂದಮಯ, ಸದಾ ಸಂತೋಷವಾಗಿರುವನು, ಸದಾ ಉಲ್ಲಾಸಭರಿತನು." ನೀವು ಮರಳಿ ಮನೆಗೆ, ದೇವೂತ್ತಮನೆಡೆಗೆ ಹಿಂತಿರುಗುವಾಗ ನೀವೂ ಕೂಡ ಉಲ್ಲಾಸಭರಿತರಾಗಬಹುದು. ಅದೇ ನಮ್ಮ ಸಮಸ್ಯೆ.

ಅಲ್ಲಿಗೆ ನಾವು ಹೋಗುವುದು ಹೇಗೆ? ಮೊದಲೆನೆಯದಾಗಿ ನಾವು ಆಲಿಸ ಬೇಕು. ಶ್ರೋತ್ರವ್ಯಃ. ದೇವರಂದರೆ ಯಾರು, ಆತನ ರಾಜ್ಯ ಯಾವುದು, ಎಂದು ಸುಮ್ಮನೆ ಆಲಿಸಿ. ಆತ ಲೀಲೆ ಹೇಗೆ ನಡೆಸುತ್ತಾನೆ, ಆತ ಹೇಗೆ ಉಲ್ಲಾಸದಿಂದಿರುತ್ತಾನೆ. ಇವೆಲ್ಲವನ್ನೂ ಆಲಿಸ ಬೇಕು. ಶ್ರವಣಂ. "ಓ, ಭಗವಂತನು ಎಷ್ಟು ಒಳ್ಳೆಯವನು", ಎಂದು ನಿಮಗೆ ಮನವರಿಕೆಯಾದೊಡನೆ ಆಗ ಈ ಸುದ್ದಿಯನ್ನು ಇಡೀ ಜಗತ್ತಿಗೇ ಪ್ರರ್ದಶಿಸಲು ಅಥವ ಪ್ರಸಾರ ಮಾಡಲು ನೀವು ಉತ್ಸುಕರಾಗುತ್ತಿರಿ. ಇದುವೇ ಕಿರ್ತನಂ. ಇದನ್ನು ಕಿರ್ತನಂ ಎನ್ನುತ್ತೇವೆ.