KN/Prabhupada 0212 - ವೈಜ್ಞಾನಿಕವಾಗಿ ಸಾವಿನ ನಂತರ ಜೀವನವಿದೆ
Garden Conversation -- June 10, 1976, Los Angeles
ಪ್ರಭುಪಾದ: ಆಧುನಿಕ ಶಿಕ್ಷಣ! ಜನನ, ಮರಣ, ವೃದ್ಧಾಪ್ಯ, ಮತ್ತು ರೋಗಗಳ ಪುನರಾವರ್ತನೆಯು ಒಂದು ತೊಂದರೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ. ಅವರಿಗೆ ಅದು ಅರ್ಥವಾಗುವುದಿಲ್ಲ. ಅವರು ಅದನ್ನು ಏಕೆ ಸ್ವೀಕರಿಸುತ್ತಾರೆ? ಸ್ವೀಕರಿಸಿ. ಬೇರೆ ದಾರಿಯಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಇದನ್ನು ನಿಲ್ಲಿಸಲು ಒಂದು ಮಾರ್ಗವಿದ್ದರೆ, ಅವರು ಅದನ್ನು ಏಕೆ ತೆಗೆದುಕೊಳ್ಳುವುದಿಲ್ಲ? ಹ್ಮ್? ಈ ಶಿಕ್ಷಣದ ಮೌಲ್ಯವೇನು? ಅವರಿಗೆ ಸರಿ ಮತ್ತು ತಪ್ಪುಗಳ ನಡುವೆ ಅಂತರ ತಿಳಿದಿಲ್ಲ. ಯಾರೂ ಸಾವನ್ನು ಇಷ್ಟಪಡುವುದಿಲ್ಲ, ಆದರೆ ಸಾವು ಇದೆ. ಯಾರೂ ವೃದ್ಧರಾಗಲು ಇಷ್ಟಪಡುವುದಿಲ್ಲ, ಆದರೆ ವೃದ್ಧಾಪ್ಯವಿದೆ. ಅವರು ಈ ದೊಡ್ಡ ಸಮಸ್ಯೆಗಳನ್ನು ಬದಿಗಿಟ್ಟು ಜ್ಞಾನದ ವೈಜ್ಞಾನಿಕ ಪ್ರಗತಿಯ ಬಗ್ಗೆ ಏಕೆ ಹೆಮ್ಮೆಪಡುತ್ತಾರೆ? ಇದು ಯಾವ ರೀತಿಯ ಶಿಕ್ಷಣ? ಅವರು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಶಿಕ್ಷಣದ ಫಲಿತಾಂಶವೇನು? ಶಿಕ್ಷಣ ಎಂದರೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಶಕ್ತಿ. ಆದರೆ ಅವರಿಗೆ ಸಾಧ್ಯವಿಲ್ಲ. ಸಾವು ಒಳ್ಳೆಯದಲ್ಲ ಎಂದು ಅವರಿಗೆ ತಿಳಿದಿದೆ, ಆದರೆ ಅವರು ಸಾವನ್ನು ತಡೆಯಲು ಏಕೆ ಪ್ರಯತ್ನಿಸುತ್ತಿಲ್ಲ? ಪ್ರಗತಿ ಎಲ್ಲಿದೆ? ಅವರು ವಿಜ್ಞಾನದ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ಪ್ರಗತಿ ಎಲ್ಲಿದೆ? ನೀವು ಸಾವನ್ನು ತಡೆಯಲು ಸಾಧ್ಯವಿಲ್ಲ. ನೀವು ವೃದ್ಧಾಪ್ಯವನ್ನು ತಡೆಯಲು ಸಾಧ್ಯವಿಲ್ಲ. ನೀವು ಸುಧಾರಿತ ಔಷಧವನ್ನು ತಯಾರಿಸಬಹುದು, ಆದರೆ ನೀವು ರೋಗವನ್ನು ಏಕೆ ನಿಲ್ಲಿಸುವುದಿಲ್ಲ? ಈ ಮಾತ್ರೆ ತೆಗೆದುಕೊಳ್ಳಿ, ಇನ್ನು ಮುಂದೆ ಯಾವುದೇ ರೋಗವಿರುವುದಿಲ್ಲ. ಆ ವಿಜ್ಞಾನ ಎಲ್ಲಿದೆ? ಹ್ಮ್?
ನಳಿನೀಕಂಠ: ಅವರು ಅದನ್ನು ಕುರಿತು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.
ಪ್ರಭುಪಾದ: ಅದು ಮತ್ತೊಂದು ಮೂರ್ಖತನ. ಉಢಾಫೆ.
ಗೋಪವೃಂದಪಾಲ: ಕೃಷ್ಣ ಪ್ರಜ್ಞೆ ಕ್ರಮೇಣ ಪ್ರಕ್ರಿಯೆ ಎಂದು ನಾವು ಹೇಳುವಂತೆ, ಅವರ ವೈಜ್ಞಾನಿಕ ಪ್ರಗತಿಯೂ ಕ್ರಮೇಣ ಪ್ರಕ್ರಿಯೆ ಎಂದು ಹೇಳುತ್ತಾರೆ.
ಪ್ರಭುಪಾದ: ಕ್ರಮೇಣ ಪ್ರಕ್ರಿಯೆ. ಆದರೆ ಅವರು ಸಾವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಭಾವಿಸುತ್ತಾರೆಯೇ? ನಾವು ಮರಳಿ ಭಗವದ್ಧಾಮಕ್ಕೆ, ದೇವೋತ್ತಮ ಪರಮಪುರುಷನಾದ ಕೃಷ್ಣನಿಗೆ ಹಿಂತಿರುಗುತ್ತಿದ್ದೇವೆ ಎಂದು ನಮಗೆ ವಿಶ್ವಾಸವಿದೆ. ಆದರೆ ಅವರು ಸಾವು, ವೃದ್ಧಾಪ್ಯ, ಮತ್ತು ರೋಗವನ್ನು ತಡೆಯಲು ಸಾಧ್ಯವಾಗುತ್ತದೆ ಎಂಬ ಅವರ ವಿಶ್ವಾಸ ಎಲ್ಲಿದೆ?
ಡಾ. ವುಲ್ಫ್: ಈಗ ಹೊಸ ಪ್ರವೃತ್ತಿ ಏನೆಂದರೆ, ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಸಾವಿನ ನಂತರ ಜೀವನವಿದೆ ಎಂಬ ಸತ್ಯವನ್ನು ಅವರು ಸ್ಥಾಪಿಸಿದ್ದಾರೆ.
ಪ್ರಭುಪಾದ: ಇದೆ.
ಡಾ. ವೂಲ್ಫ್: ಅವರು ಇದನ್ನು ವೈಜ್ಞಾನಿಕವಾಗಿ ಮಾಡಲು ಪ್ರಯತ್ನಿಸುತ್ತಾರೆ.
ಪ್ರಭುಪಾದ: ಮಾಡಲಿ. ವೈಜ್ಞಾನಿಕವಾಗಿ, ಸಾವಿನ ನಂತರ ಜೀವನವಿದೆ. ನಾವು ಪದೇ ಪದೇ ಹೇಳುತ್ತೇವೆ, ನನ್ನ ಬಾಲ್ಯದ ದೇಹವು ಸತ್ತಿದೆ, ಅದು ಹೋಗಿದೆ, ಕಣ್ಮರೆಯಾಯಿದೆ. ಆದರೂ ನನಗೆ ಬೇರೆ ದೇಹವಿದೆ. ಆದ್ದರಿಂದ, ಸಾವಿನ ನಂತರ ಜೀವನವಿದೆ. ಇದು ಪ್ರಾಯೋಗಿಕ. ಆದ್ದರಿಂದ, ಕೃಷ್ಣನು ಹೇಳುತ್ತಾನೆ, ತಥಾ ದೇಹಾಂತರ-ಪ್ರಾಪ್ತಿಃ (ಭ.ಗೀ 2.13). ಅದೇ ರೀತಿ, ನ ಹನ್ಯತೇ ಹನ್ಯಮಾನೇ ಶರೀರೇ (ಭ.ಗೀ 2.20). ಇದು ದೇವರ ಅಧಿಕೃತ ಹೇಳಿಕೆಯಾಗಿದೆ. ಪ್ರಾಯೋಗಿಕವಾಗಿ ಕಂಡರೂ, ನಾವು ಒಂದರ ನಂತರ ಮತ್ತೊಂದು ದೇಹವನ್ನು ಪಡೆಯುತ್ತೇವೆ, ಆದರೆ ಉಳಿದಿರುತ್ತೇವೆ. ಹಾಗಾದರೆ ಆಕ್ಷೇಪಣೆ ಎಲ್ಲಿದೆ? ಹಾಗಾದರೆ ಸಾವಿನ ನಂತರ ಜೀವನವಿದೆ. ದೇಹದ ವಿನಾಶವನ್ನು ಸಾವು ಎನ್ನುತ್ತೇವೆ. ಆದ್ದರಿಂದ, ಇನ್ನು ಮುಂದೆ ಮರಣವಿಲ್ಲ ಎಂದು ಅರಿತ ಜೀವನವನ್ನು ನಡೆಸಲು ಸಾಧ್ಯವಾದರೆ, ನಾವು ಅದನ್ನು ಬಯಸಬೇಕು. ಅದು ಬುದ್ಧಿವಂತಿಕೆ. ನೀವು ಕೃಷ್ಣನನ್ನು ಅರ್ಥಮಾಡಿಕೊಂಡರೆ ಮತ್ತು ಅವನ ಬಳಿಗೆ ಹಿಂತಿರುಗಲು ಯೋಗ್ಯರಾದರೆ, ಇನ್ನು ಮುಂದೆ ಸಾವು ಇರುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ.