KN/Prabhupada 0213 - ಸಾವನ್ನು ನಿಲ್ಲಿಸಿ ಆಗ ನಿಮ್ಮ ಜಾದುಗಾರಿಕೆಯನ್ನು ನೋಡುತ್ತೇನೆ
Morning Walk -- June 17, 1976, Toronto
ಭಕ್ತ ಜೀನ್: ಸ್ವಾಮೀಜಿ, ಇದು ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಕ್ರಿ.ಶ. 100 ರಿಂದ ಇಂದಿನವರೆಗೆ ಅತೀಂದ್ರಿಯತೆಯ ಇತಿಹಾಸವಿದೆ. ಈಗ ಕೆಲವು ಪ್ರಮುಖ ಪವಾಡಪುರುಷರು ಮತ್ತು ಅಷ್ಟೊಂದು ಪ್ರಮುಖವಲ್ಲದ ಅನೇಕರಿದ್ದಾರೆ. ಈಗ ನೀವು ಈ ಪುರುಷರನ್ನು, ಈ ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಪವಾಡಪುರುಷರನ್ನು ಹೇಗೆ ವರ್ಗೀಕರಿಸುತ್ತೀರಿ?
ಪ್ರಭುಪಾದ: ಇದು ಯೋಗದ ಅತೀಂದ್ರಿಯತೆ. ಇದಕ್ಕೂ ಆಧ್ಯಾತ್ಮಿಕ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ, ಜನರು ಕೆಲವು ಪವಾಡಗಳನ್ನು ನೋಡಲು ಬಯಸುತ್ತಾರೆ. ಆದ್ದರಿಂದ, ಈ ಅತೀಂದ್ರಿಯ ಶಕ್ತಿಯು ಕೆಲವು ಪವಾಡಗಳನ್ನು ತೋರಿಸಿ ಅವರನ್ನು ಬೆರಗುಗೊಳಿಸಲು ಉಪಯೋಗವಾಗುತ್ತದೆ. ಅಷ್ಟೆ. ಇದು ಆಧ್ಯಾತ್ಮಿಕ ಜೀವನದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ಭಕ್ತ ಜೀನ್: ಬಹುಶಃ ನೀವು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ನಾನು ಸಂತ ಜಾನ್ ಹಾಗು ಅಸ್ಸಿಸಿಯ ಸಂತ ಫ್ರಾನ್ಸಿಸ್ನಂತಹ ನಿಜವಾದ ಭಕ್ತಿಪೂರ್ವಕ ಪವಾಡಪುರುಷರನ್ನು ಉಲ್ಲೇಖಿಸುತ್ತಿದ್ದೆ.
ಪ್ರಭುಪಾದ: ಭಕ್ತಿ ಸೇವೆ ಇದ್ದರೆ ಪವಾಡಗಳ ಅಗತ್ಯ ಎಲ್ಲಿದೆ? ಅಗತ್ಯವಿಲ್ಲ. ದೇವರು ನನ್ನ ಯಜಮಾನ, ನಾನು ಅವನ ಸೇವಕ. ಈ ಅಸಂಬದ್ಧ ಪವಾಡಗಳ ಅವಶ್ಯಕತೆ ಎಲ್ಲಿದೆ?
ಭಕ್ತ ಜೀನ್: ಪವಾಡ ಎಂಬ ಪದದೊಂದಿಗೆ ಅನೇಕ ಜನರು, ವಿಶೇಷವಾಗಿ ಇಲ್ಲಿ ಅಮೇರಿಕದಲ್ಲಿ ಆಟವಾಡುತ್ತಿದ್ದಾರೆ.
ಪ್ರಭುಪಾದ: ಅನೇಕ ಜನ…, ನಮಗೆ ಅನೇಕ ಜನರೊಂದಿಗೆ ಯಾವುದೇ ಸಂಬಂಧವಿಲ್ಲ. ನೀವು ನಿಜವಾಗಿಯೂ ದೇವರ ಸೇವಕರಾಗಿದ್ದರೆ… ದೇವರು ಇದ್ದಾನೆ, ನೀವು ಅವನ ಸೇವಕರು. ಆದ್ದರಿಂದ, ನಿಮ್ಮ ವ್ಯವಹಾರವು ಅಲ್ಲಿದೆ. ದೇವರ ಆದೇಶಗಳನ್ನು ಪಾಲಿಸಲು ಮಾತ್ರ. ಅಷ್ಟೆ. ನೀವು ಪವಾಡವನ್ನು ಏಕೆ ಬಯಸುತ್ತೀರಿ? ಜನರಿಗೆ ಸ್ವಲ್ಪ ಕೈಚಳಕವನ್ನು ತೋರಿಸಲೆ? ನೀವು ದೇವರ ಸೇವೆ ಮಾಡಿ. ಅಷ್ಟೇ. ಇದು ತುಂಬಾ ಸರಳವಾದ ವಿಷಯ, ಭಗವಂತನ ಆದೇಶಗಳ ಪಾಲನೆ. ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜಿ ಮಾಂ ನಮಸ್ಕುರು (ಭ.ಗೀ 18.65). ಜಾದುಗಾರಿಕೆಯ ಪ್ರಶ್ನೆ ಎಲ್ಲಿದೆ? ಜಾದುಗಾರಿಕೆಯ ಪ್ರಶ್ನೆಯೇ ಇಲ್ಲ. ಭಗವಂತ ಹೇಳುತ್ತಾನೆ: “ಯಾವಾಗಲೂ ನನ್ನ ಬಗ್ಗೆ ಯೋಚಿಸಿ. ನಿಮ್ಮ ನಮನಗಳನ್ನು ಅರ್ಪಿಸಿ ಮತ್ತು ನನ್ನನ್ನು ಪೂಜಿಸಿ.” ಅಷ್ಟೆ. ಜಾದುಗಾರಿಕೆಯ ಅಗತ್ಯ ಎಲ್ಲಿದೆ? ಇದೆಲ್ಲವೂ ಕೈಚಳಕ ಅಷ್ಟೆ.
ಭಾರತೀಯ: ಒಂದು ತಪ್ಪು ಕಲ್ಪನೆ ಇದೆ ಎಂದು ನಾನು ಭಾವಿಸುತ್ತೇನೆ.
ಪ್ರಭುಪಾದ: ನೀವು ನಿಮ್ಮ ರೀತಿಯಲ್ಲಿ ಯೋಚಿಸಿ. ನೀವು ಸರಿಯಾದ ಮಾರ್ಗಕ್ಕೆ ಬರುವವರೆಗು ನಿಮ್ಮ ಆಲೋಚನೆ ಅನರ್ಥಕ.
ಭಾರತೀಯ: ಇಲ್ಲ, ಸ್ವಾಮೀಜಿ. ಜಾದುಗಾರಿಕೆಯ ಬಗ್ಗೆ ಒಂದು ತಪ್ಪು ಕಲ್ಪನೆ ಇದೆ. ಅದು ಆಧ್ಯಾತ್ಮಿಕ ಪ್ರಗತಿಯೊಂದಿಗೆ ಬರುತ್ತದೆ ಎಂದು ಅವರು ಹೇಳುತ್ತಾರೆ. ಇವರು ಅದನ್ನೇ ಸೂಚಿಸುತ್ತದ್ದಾರೆ ಎಂದು ನನ್ನ ಭಾವನೆ.
ಪ್ರಭುಪಾದ: ಸಮಸ್ಯೆಯೆಂದರೆ ನಾವು ಈ ಭೌತಿಕ ಜಗತ್ತಿನಲ್ಲಿ ಜೀವನದುದ್ದಕ್ಕೂ ಬಳಲುತ್ತಿದ್ದೇವೆ ಮತ್ತು ನಮ್ಮ ಗುರಿ ಮತ್ತೆ ಮನೆಗೆ, ಭಗವದ್ಧಾಮಕ್ಕೆ ಹೇಗೆ ಹಿಂತಿರುಗುವುದು ಎಂಬುದು. ಅದು ಅವರಿಗೆ ತಿಳಿದಿಲ್ಲ. ಅವರು ಜಾದುಗಾರಿಕೆಯನ್ನು ತೋರಿಸುತ್ತಿದ್ದಾರೆ. ಸಾವನ್ನು ನಿಲ್ಲಿಸಿ. ಆಗ ನಾನು ನಿಮ್ಮ ಜಾದುಗಾರಿಕೆಯನ್ನು ನೋಡುತ್ತೇನೆ. ಈ ಅಸಂಬದ್ಧ ಜಾದುಗಾರಿಕೆ ಏನು? ನೀವು ಸಾವನ್ನು ನಿಲ್ಲಿಸುವಿರಾ? ಅದು ಸಾಧ್ಯವೇ? ಇಲ್ಲವಾದರೆ ಈ ಜಾದುಗಾರಿಕೆಯ ಅರ್ಥವೇನು? ಎಲ್ಲವೂ ನಕಲಿ. ನನ್ನ ಸಮಸ್ಯೆ ಏನೆಂದರೆ ನಾನು ಒಂದು ದೇಹವನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಬಳಲುತ್ತಿದ್ದೇನೆ, ಏಕೆಂದರೆ ನಾನು ಈ ಭೌತಿಕ ದೇಹವನ್ನು ಪಡೆದ ತಕ್ಷಣ, ನಾನು ಬಳಲಬೇಕು. ನಂತರ ನಾನು ಇನ್ನೊಂದು ದೇಹವನ್ನು ಸೃಷ್ಟಿಸುತ್ತಿದ್ದೇನೆ. ನಾನು ಸಾಯುತ್ತೇನೆ. ತಥಾ ದೇಹಾಂತರ-ಪ್ರಾಪ್ತಿಃ (ಭ.ಗೀ 2.13). ನಂತರ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ ಮತ್ತೆ. ಈ ರೀತಿಯಾಗಿ, ಈ ಹುಲ್ಲಿನ ಜೀವನದಿಂದ ದೇವತೆಗಳವರೆಗೆ, ನಾನು ದೇಹವನ್ನು ಬದಲಾಯಿಸುತ್ತಿದ್ದೇನೆ, ಸಾಯುತ್ತಿದ್ದೇನೆ, ಪುನಃ ಜನ್ಮ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಸಮಸ್ಯೆ. ಹಾಗಾದರೆ ಜಾದುಗಾರಿಕೆಯ ಉಪಯೋಗವೇನು? ಆದರೆ ಸಮಸ್ಯೆ ಏನು ಎಂದು ಅವರಿಗೆ ತಿಳಿದಿಲ್ಲ. ಅದನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಷಾನುದರ್ಶನಂ (ಭ.ಗೀ 13.9). ಇದು ನಿಮ್ಮ ಸಮಸ್ಯೆ. ನೀವು ಪದೇ ಪದೇ ಹುಟ್ಟುತ್ತಾ ಸಾಯುತ್ತಿದ್ದೀರಿ, ಮತ್ತು ನೀವು ಬದುಕಿರುವಷ್ಟು ಕಾಲ ಅನೇಕ ತೊಂದರೆಗಳನ್ನು ಎದುರಿಸುತ್ತೀರಿ. ಜರಾ-ವ್ಯಾಧಿ. ವಿಶೇಷವಾಗಿ, ವೃದ್ಧಾಪ್ಯ ಮತ್ತು ರೋಗ. ಇದು ಸಮಸ್ಯೆ. ಯಾವ ಜಾದುಗಾರಿಕೆ ನಿಮಗೆ ಸಹಾಯ ಮಾಡುತ್ತದೆ? ಜಾದುಗಾರಿಕೆಯು ನಿಮ್ಮ ಜನನ, ಮರಣ, ವೃದ್ಧಾಪ್ಯ, ಮತ್ತು ರೋಗವನ್ನು ನಿಲ್ಲಿಸುತ್ತದೆಯೇ? ಹಾಗಾದರೆ ಅದು ಪವಾಡ. ಇಲ್ಲದಿದ್ದರೆ, ಅಂತಹ ಅಸಂಬದ್ಧ ವಿಷಯಗಳ ಉಪಯೋಗವೇನು… ನಿಜವಾದ ಮಾರ್ಗದಿಂದ ದಾರಿ ತಪ್ಪಿಸುವುದು. ಅವರಿಗೆ ಜೀವನದ ಗುರಿ ಏನು, ಜೀವನದ ಸಮಸ್ಯೆ ಏನು ಎಂದು ತಿಳಿದಿಲ್ಲ. ಅವರು ಕೆಲವು ಪವಾಡವನ್ನು ಮಾಡುತ್ತಾರೆ ಮತ್ತು ಕೆಲವು ಧೂರ್ತರು ಅವರನ್ನು ಅನುಸರಿಸುತ್ತಾರೆ. ಅಷ್ಟೆ. "ಇವನು ಪವಾಡಪುರುಷ."
ಭಾರತೀಯ: ಭಕ್ತರೊಂದಿಗಿನ ಸಹವಾಸ ಎಷ್ಟು ಮುಖ್ಯ?
ಪ್ರಭುಪಾದ: ಹೌದು. ಸತಾಂ ಪ್ರಸಂಗಾನ್ ಮಮ ವೀರ್ಯ-ಸಂವಿದೋ ಭವಂತಿ ಹೃತ್-ಕರ್ಣ-ರಸಾಯನಾಃ ಕಥಾಃ (ಶ್ರೀ.ಭಾ 3.25.25). ಆದ್ದರಿಂದ, ಸಾಧು-ಸಂಗ ಬೇಕಾಗಿದೆ. ಭಕ್ತರ ಸಹವಾಸ. ಅದು ಅಗತ್ಯ. ಆಗ ನಮ್ಮ ಜೀವನ ಯಶಸ್ವಿಯಾಗುತ್ತದೆ. ಜಾದುಗಾರಿಗೆ ಬೇಕಿಲ್ಲ.