KN/Prabhupada 0014 - ಭಕ್ತರು ತುಂಬಾ ಉದಾತ್ತರು

Revision as of 02:04, 25 May 2024 by Sudhir (talk | contribs)
(diff) ← Older revision | Latest revision (diff) | Newer revision → (diff)


The Nectar of Devotion -- Calcutta, January 30, 1973

ಒಬ್ಬ ಭಕ್ತನಿಗೆ, ಕೃಷ್ಣ ಅವನ ಅಂಗೈ ಒಳ್ಳಗೆ ಇದ್ದಾನೆ. ಅಜಿತ, ಜಿತೊ 'ಪ್ಯ ಅಸೌ. ಕೃಷ್ಣನನ್ನು ವಶ ಪಡಿಸಲು ಸಾಧ್ಯವಿಲ್ಲವಾದರು, ಅವನು ತನ್ನ ಭಕ್ತರಿಂದ ವಶವಾಗಲು ಇಷ್ಟ ಪಡುತ್ತಾನೆ. ಇದೇ ಆ ಸ್ಥಾನ. ಅವನು ಸ್ವೇಚ್ಛೆಯಿಂದ ತಾಯಿ ಯಶೋದೆಗೆ ವಶವಾದನು, ರಾಧರಾಣಿಗೆ ವಶವಾದನು, ತನ್ನ ಸ್ನೇಹಿತರಿಗೆ ವಶವಾದನು. ಕೃಷ್ಣನು ಸೋತು ತನ್ನ ಸ್ನೇಹಿತನನ್ನು ಭುಜದ ಮೇಲೆ ಹೊರಬೇಕಿತ್ತು. ಪ್ರಾಯೋಗಿಕವಾಗಿ ಕೆಲವೊಮ್ಮೆ ಒಬ್ಬ ರಾಜ ಅವನ ಬಳಿ ವಿಧೂಶಕನನ್ನು ತನ್ನ ಸಹವರ್ತಿಗಳ ಜೊತೆ ಇರಿಸಿಕೊಳ್ಳುತ್ತಾನೆ. ಆ ವಿಧೂಶಕ ರಾಜನನ್ನು ಅವಮಾನ ಗೊಳಿಸುತ್ತನೆ ಮತ್ತು ಆ ರಾಜ ಅದನ್ನು ಆನಂದಿಸುತ್ತಾನೆ. ಕೆಲವೊಮ್ಮೆ ಆ ವಿಧೂಶಕ... ಬಂಗಾಳದಲ್ಲಿ ಗೋಪಾಲ ಬಾನ್ ಎಂಬ ಪ್ರಖ್ಯಾತ ವಿಧೂಶಕನಿದ್ದ. ಒಂದು ದಿನ ರಾಜ ಅವನಿಗೆ ಕೇಳಿದ, "ಗೋಪಾಲ, ನಿನಗು ಮತ್ತು ಒಂದು ಕತ್ತೆಗು ಇರುವ ವ್ಯತ್ಯಸವೇನು? ಆಗ ಅವನು ತಕ್ಷಣ ರಾಜನನಿಂದ ಎಷ್ಟು ದೂರ ಎಂದು ಅಳೆದ. ಅವನು ಉತ್ತರಿಸಿದ, "ಕೇವಲ ಮೂರು ಅಡಿ ಸ್ವಾಮಿ. ವ್ಯತ್ಯಾಸ ಕೇವಲ ಮೂರು ಅಡಿ." ಆಗ ಎಲ್ಲರು ನಗಲಾರಂಭಿಸಿದರು. ರಾಜನು ಸಹ ಆ ಅವಮಾನವನ್ನು ಆನಂದಿಸಿದ.

ಏಕೆಂದರೆ ಕೇಲವೊಮ್ಮೆ ಇದರ ಅಗತ್ಯವಿದೆ. ಆದ್ದರಿಂದ, ಕೃಷ್ಣನು ಸಹ... ಪ್ರತಿಯೊಬ್ಬರು ಅವನ ಉದಾತ್ತ ಸ್ಥಾನವನ್ನು ಹೊಗಳುತ್ತಾರೆ. ಪ್ರತಿಯೊಬ್ಬರು. ಇದೇ ಕೃಷ್ಣನ ಸ್ಥಾನ - ಭಗವಂತ. ವೈಕುಂಠದಲ್ಲಿ, ಕೇವಲ ಹೊಗಳಿಕೆ ಇದೆ. ಯಾವುದೇ ಬೇರೆ ವಿಷಯ ಇಲ್ಲ. ಆದರೆ ವೃಂದಾವನದಲ್ಲಿ ಕೃಷ್ಣನು ಭಕ್ತರಿಂದ ಅವಮಾನ ಸ್ವೀಕರಿಸಲು ಉತ್ಸುಕ. ವೃಂದಾವನ ಜೀವನವೇನೆಂದು ಜನರಿಗೆ ತಿಳಿದಿಲ್ಲ. ಆದ್ದರಿಂದ, ಭಕ್ತರು ಬಹಳ ಉದಾತ್ತ. ರಾಧರಾಣಿ ಅಪ್ಪಣೆ ಮಾಡುತ್ತಾರೆ,

"ಕೃಷ್ಣನನ್ನು ಇಲ್ಲಿ ಬರಲು ಬಿಡಬೇಡಿ."

ಕೃಷ್ಣ ಒಳಗೆ ಹೋಗಲು ಸಾಧ್ಯವಿಲ್ಲವಾಯಿತು. ಅವನು ಬೇರೆ ಗೋಪಿಯರನ್ನು ಹೊಗಳುತ್ತಾನೆ:

"ದಯವಿಟ್ಟು ನನನ್ನು ಒಳಗೆ ಹೋಗಲು ಬಿಡಿ."

"ಇಲ್ಲ, ಇಲ್ಲ. ಯಾವುದೇ ಆದೇಶವಿಲ್ಲ. ನೀವು ಹೋಗಲು ಸಾಧ್ಯವಿಲ್ಲ."

ಆದ್ದರಿಂದ, ಕೃಷ್ಣ ಅದನ್ನು ಬಯಸುತ್ತಾನೆ.