KN/670217 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:33, 16 July 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ದೇವರ ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆಯಿಲ್ಲ. ಅದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಚೈತನ್ಯ ಮಹಾಪ್ರಭು ವೇದಾಂತ, ವೇದಾಂತವನ್ನು ದೇವರಿಂದಲೇ ಸಂಕಲಿಸಲ್ಪಟ್ಟಿದೆ ಎಂದು ಹೇಳುತ್ತಾರೆ. ಅದನ್ನು ನಾವು ನಿನ್ನೆ ವಿವರಿಸಿದ್ದೇವೆ. ಭಗವಾನ್ ಕೃಷ್ಣ ಕೂಡ ವೇದಾಂತ ವಿದ್ ವೇದಾಂತ ಕೃದ್ ಚ ಅಹಂ ( ಭ. ಗೀತಾ ೧೫.೧೫ ): "ನಾನು ವೇದಾಂತವನ್ನು ಸಂಕಲಿಸಿದವನು ಮತ್ತು ನಾನು ವೇದಾಂತವನ್ನು ತಿಳಿದವನು. ಒಂದು ವೇಳೆ ದೇವರು, ಒಂದು ವೇಳೆ ಕೃಷ್ಣ, ವೇದಾಂತವನ್ನು ತಿಳಿದಿಲ್ಲದಿದ್ದರೆ, ಅವನು ವೇದಾಂತವನ್ನು ಹೇಗೆ ಸಂಕಲಿಸಬಹುದು? ವೇದಾಂತ ಎಂದರೆ "ಜ್ಞಾನದ ಕೊನೆಯ ಪದ." ನಾವು ಎಲ್ಲರೂ ಜ್ಞಾನವನ್ನು ಬಯಸುತ್ತೇವೆ, ಮತ್ತು ವೇದಾಂತ ಎಂದರೆ ಜ್ಞಾನದ ಕೊನೆಯ ಪದವಾಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭು ಮೊದಲಿಗೆ ವೇದಾಂತ-ಸೂತ್ರದಲ್ಲಿ ನಿಮಗೆ ಯಾವುದೇ ನ್ಯೂನತೆಯನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ಸಾಧಿಸಿದರು; ಆದ್ದರಿಂದ ನಿಮಗೆ ಅರ್ಥೈಸುವ ಯಾವ ಹಕ್ಕೂ ಇಲ್ಲ. ಏಕೆಂದರೆ ನೀವು ಅಸಂಬದ್ಧ ಮೂರ್ಖರಾಗಿದ್ದೀರಿ, ಆದ್ದರಿಂದ ಸರ್ವೋಚ್ಚ ಪರಿಪೂರ್ಣ ದೇವರಿಂದ ಸಂಕಲಿಸಲ್ಪಟ್ಟಿರುವ ಸೂತ್ರಗಳನ್ನು, ನೀವು ಹೇಗೆ ಸ್ಪರ್ಶಿಸಬಹುದು ಮತ್ತು ವ್ಯಾಖ್ಯಾನಿಸಬಹುದು? ಆದರೆ "ನಾನು ಮೂರ್ಖ" ಎಂದು ನಾವು ಒಪ್ಪಿಕೊಳ್ಳುವುದಿಲ್ಲ. ನಾನು ತುಂಬಾ ವಿದ್ಯಾವಂತ ಎಂದು ನಾನು ಭಾವಿಸುತ್ತೇನೆ, ನನ್ನಲ್ಲಿ ಯಾವುದೇ ನ್ಯೂನತೆಯಿಲ್ಲ, ನಾನು ಪರಿಪೂರ್ಣ. " ಆದ್ದರಿಂದ ಇವೆಲ್ಲ ಮೂರ್ಖತನ. "
670217 - ಉಪನ್ಯಾಸ ಚೈ. ಚ. ಆದಿ. ೦೭.೧೦೬-೧೦೭ - ಸ್ಯಾನ್ ಫ್ರಾನ್ಸಿಸ್ಕೋ