KN/680615c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:08, 4 September 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜೀವನದ ಈ ದೈಹಿಕ ಪರಿಕಲ್ಪನೆಯಿಂದಾಗಿ ನಾನು ಆತಂಕದಿಂದ ತುಂಬಿದ್ದೇನೆ. ಒಬ್ಬ ಮನುಷ್ಯನು ತುಂಬಾ ದುಬಾರಿ ಮೋಟಾರು ಕಾರು ಪಡೆದಂತೆಯೇ, ಮತ್ತು ಅವನು ಕಾರನ್ನು ಬೀದಿಯಲ್ಲಿ ಓಡಿಸುತ್ತಿದ್ದಾನೆ. ಯಾವುದೇ ಅಪಘಾತ ಸಂಭವಿಸದಂತೆ ಅವನು ತುಂಬಾ ಜಾಗರೂಕನಾಗಿರುತ್ತಾನೆ. ಕಾರು, ಕಾರು ಸ್ಥಗಿತವಾಗದಂತೆ. ಎಷ್ಟೊಂದು ಆತಂಕ. ಆದರೆ ಬೀದಿಯಲ್ಲಿ ನಡೆಯುತ್ತಿರುವ ಒಬ್ಬ ವ್ಯಕ್ತಿಗೆ ಅವನಿಗೆ ಅಂತಹ ಆತಂಕವಿಲ್ಲ. ಕಾರಿನಲ್ಲಿದ್ದ ವ್ಯಕ್ತಿ ಯಾಕೆ ತುಂಬಾ ಆತಂಕಕ್ಕೊಳಗಾಗಿದ್ದಾನೆ? ಯಾಕೆಂದರೆ ಅವನು ತನ್ನನ್ನು ಕಾರಿನೊಂದಿಗೆ ಗುರುತಿಸಿಕೊಂಡಿದ್ದಾನೆ. ಕಾರಿಗೆ ಏನಾದರೂ ಅಪಘಾತ ಸಂಭವಿಸಿದಲ್ಲಿ, ಕಾರು ಸ್ಥಗಿತಗೊಂಡರೆ, "ನಾನು ಹಾಳಾದೆ. ಓಹ್, ನನ್ನ ಕಾರು ಹಾಳಾಯಿತು. "ಅವನು ಕಾರಿನಿಂದ ಭಿನ್ನವಾಗಿದ್ದರೂ, ಗುರುತಿಸುಕೊಳ್ಳುವುದು, ತಪ್ಪಾಗಿ ಗುರುತಿಸುಕೊಳ್ಳುವುದರಿಂದ ಅವನು ಹಾಗೆ ಯೋಚಿಸುತ್ತಾನೆ. ಅದೇ ರೀತಿ, ನಾವು ಈ ದೇಹದೊಂದಿಗೆ ತಪ್ಪಾಗಿ ಗುರುತಿಸಲ್ಪಟ್ಟಿರುವ ಕಾರಣ, ನಮಗೆ ಜೀವನದ ಹಲವು ಸಮಸ್ಯೆಗಳು ಎದುರಾಗಿವೆ. ಆದ್ದರಿಂದ ನಾವು ಜೀವನದ ಸಮಸ್ಯೆಗಳಿಗೆ ಪರಿಹಾರವನ್ನು ಮಾಡಲು ಬಯಸಿದರೆ, ಆಗ 'ನಾನು ಏನು ಎಂದು' ನಾವು ಅರ್ಥಮಾಡಿಕೊಳ್ಳಬೇಕು."
680615 - ಉಪನ್ಯಾಸ - ಮಾಂಟ್ರಿಯಲ್