KN/690120c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:42, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರತಿಯೊಂದು ಜೀವಿಗಳು ಆನಂದಿಸಲು ಅರ್ಹರಾಗಿದ್ದಾರೆ, ಏಕೆಂದರೆ ಅವನು ದೇವರ ವಿಭಿನ್ನಅಂಶ. ಏಕೆಂದರೆ ಅವನು ವಿಭಿನ್ನಅಂಶ ಆಗಿರುವುದರಿಂದ, ಅವನು ಕೂಡ ಆನಂದಿಸುವವನು, ನಿಮಿಷದ ಪ್ರಮಾಣದಲ್ಲಿದ್ದರೂ. ಆದರೆ ಅವನು ದೇವರ ಸಹಯೋಗದೊಂದಿಗೆ ಆನಂದಿಸಬಹುದು. ಆದ್ದರಿಂದ ದೇವರ ಒಡನಾಟದಲ್ಲಿ ಪ್ರವೇಶಿಸಲು, ಅವನು ತನ್ನನ್ನು ತಾನೇ ಶುದ್ಧೀಕರಿಸಿಕೊಳ್ಳಬೇಕು. ಯಸ್ಮಾದ್ ಬ್ರಹ್ಮ-ಸೌ ... ಬ್ರಹ್ಮ, ಬ್ರಹ್ಮ-ಸೌಖ್ಯಂ. ಬ್ರಹ್ಮ ಎಂದರೆ ಅನಿಯಮಿತ, ಅಥವಾ ಆಧ್ಯಾತ್ಮಿಕ. ಆಧ್ಯಾತ್ಮಿಕ ಎಂದರೆ ಅನಿಯಮಿತ, ಅಂತ್ಯವಿಲ್ಲದ, ಶಾಶ್ವತ-ಶ್ರೇಷ್ಠ. ಇವು ಬ್ರಹ್ಮದ ಕೆಲವು ಅರ್ಥಗಳು. ಆದ್ದರಿಂದ ನೀವು ಆನಂದವನ್ನು ಹುಡುಕುತ್ತಿದ್ದೀರಿ; ಅದು ನಿಮ್ಮ ಸವಲತ್ತು. ಅದು ನಿಮ್ಮ ಹಕ್ಕು. ನಿಮಗಿರಲೇಬೇಕು. ಆದರೆ ನೀವು ಇಂದ್ರಿಯ ತೃಪ್ತಿಯ ವೇದಿಕೆಯಲ್ಲಿ ಹುಡುಕುತ್ತಿದ್ದೀರಿ, ನೀವು ಅದನ್ನು ಎಂದಿಗೂ ಪಡೆಯುವುದಿಲ್ಲ. ನಿಮ್ಮ ಈ ಅಸ್ತಿತ್ವವನ್ನು ನೀವು ಶುದ್ಧೀಕರಿಸಿದರೆ, ನಿಮ್ಮ ಆಧ್ಯಾತ್ಮಿಕ ಅಸ್ತಿತ್ವದಲ್ಲಿ ನೀವು ಅಪರಿಮಿತ ಆನಂದವನ್ನು ಪಡೆಯುತ್ತೀರಿ.

690120 - ಉಪನ್ಯಾಸ ಶ್ರೀ.ಭಾ. ೦೫.೦೫.೦೧ - ಲಾಸ್ ಎಂಜಲೀಸ್