KN/690120b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಎಲ್ಲವೂ ದೇವರ ಆಸ್ತಿ. ನಿಮಗೆ ಸಾಧ್ಯವಿಲ್ಲ, ನೀವು ದೇವರ ಮಗನಾಗಿದ್ದರೂ ಸಹ, ದೇವರ ಅನುಮತಿಯಿಲ್ಲದೆ ನೀವು ಏನನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ತಂದೆಯ ಆಸ್ತಿಯಂತೆಯೇ ಕೂಡ. ನಿಮ್ಮ ತಂದೆಯ ಆಸ್ತಿಯನ್ನು ನೀವು ಆನುವಂಶಿಕವಾಗಿ ಪಡೆಯುತ್ತೀರಿ ... ಅದು ವಾಸ್ತವಿಕ. ಆದರೆ ಒಬ್ಬ ತಂದೆ ಮೇಜಿನ ಮೇಲೆ ಒಂದು ಸಾವಿರ ಡಾಲರ್ ಇಟ್ಟಿದ್ದಾರೆ ಎಂದು ಭಾವಿಸೋಣ . ನೀವು ಅದನ್ನು ಅವರ ಅನುಮತಿಯಿಲ್ಲದೆ ತೆಗೆದುಕೊಂಡರೆ, "ಅದು ನನ್ನ ತಂದೆಯ ಹಣ" ಎಂದು ನೀವು ಭಾವಿಸಿದರೆ, ಆದರೆ ಕಾನೂನಿನ ಪ್ರಕಾರ ನೀವು ಅಪರಾಧಿಯಾಗುತ್ತೀರಿ. ನಿಮ್ಮ ತಂದೆ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಅದು ಸರ್ಕಾರದ ಕಾನೂನು. ಹಣ ನಿಮ್ಮ ತಂದೆಯದೇ ಕೂಡ, ನಿಮ್ಮ ತಂದೆ ತುಂಬಾ ಕರುಣಾಮಯಿ ಕೂಡ, ಆದರೆ ನಿಮ್ಮ ತಂದೆಯ ಹಣವನ್ನು ನೀವು ಅವರ ಅನುಮತಿಯಿಲ್ಲದೆ ತೆಗೆದುಕೊಂಡರೆ, ನೀವು ಅಪರಾಧಿ. ಮತ್ತು ಇತರರ ಬಗ್ಗೆ ಏನು ಮಾತನಾಡಬೇಕು? ಅದೇ ರೀತಿ, ನಾವೆಲ್ಲರೂ ದೇವರ ಮಕ್ಕಳು. "
690120 - ಉಪನ್ಯಾಸ ಶ್ರೀ.ಭಾ. ೦೫.೦೫.೦೧- ಲಾಸ್ ಎಂಜಲೀಸ್