KN/690411b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 05:03, 21 June 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕಾಡಿನಲ್ಲಿ ಕೆಲವು ತೊಂದರೆಗಳಿದ್ದವು ಏಕೆಂದರೆ ಕಂಸನು ಕೃಷ್ಣನನ್ನು ಕೊಲ್ಲಲು ಅವನ ಹಿಂದೆ ಬಿದ್ದಿದ್ದನು. ಅವನು ತನ್ನ ಸಹಾಯಕರನ್ನು ಕಳುಹಿಸುತ್ತಿದ್ದನು. ಆದ್ದರಿಂದ ಕೆಲವು ಅಸುರರು ಬರುವರು, ಬಕಾಸುರಾ, ಅಘಾಸುರ ಮತ್ತು ಕೃಷ್ಣನು ಅವರೆಲ್ಲರನ್ನು ಕೊಲ್ಲುವನು. ಮತ್ತು ಹುಡುಗರು ಹಿಂತಿರುಗಿ ಕಥೆಯನ್ನು ತಮ್ಮ ತಾಯಿಗೆ ವಿವರಿಸುತ್ತಿದ್ದರು . 'ಓಹ್, ನನ್ನ ಪ್ರೀತಿಯ ಅಮ್ಮ ! ಅಂತಹ ಮತ್ತು ಅಂತಹ ಘಟನೆ ಸಂಭವಿಸಿತು ಮತ್ತು ಕೃಷ್ಣ ಅದನ್ನು ಕೊಂದರು! ತುಂಬಾ ...' (ನಗು) ತಾಯಿ, 'ಓಹ್, ಹೌದು, ನಮ್ಮ ಕೃಷ್ಣ ತುಂಬಾ ಅದ್ಭುತವಾದವನು!' (ನಗು) ಆದ್ದರಿಂದ ಅವರೆಲ್ಲರ ಖುಶಿಯೇ ಕೃಷ್ಣ. ಅಷ್ಟೆ. ತಾಯಿ ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾಳೆ, ಹುಡುಗ ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾನೆ. ಆದ್ದರಿಂದ ಅವರಿಗೆ ಕೃಷ್ಣನನ್ನು ಹೊರತುಪಡಿಸಿ ಏನೂ ತಿಳಿದಿರಲಿಲ್ಲ. ಕೃಷ್ಣ, ಸ್ವಲ್ಪ ತೊಂದರೆಯಾದಾಗಲೆಲ್ಲಾ 'ಓ ಕೃಷ್ಣ'. ಯಾವಾಗಲಾದರೂ ಬೆಂಕಿ ಇದ್ದರೆ. 'ಓಹ್, ಕೃಷ್ಣ'. ಅದು ವಂದಾವನದ ಸೌಂದರ್ಯ. ಅವರ ಮನಸ್ಸು ಕೃಷ್ಣನಲ್ಲಿ ಲೀನವಾಗಿ ಹೋಗಿದೆ. ತತ್ತ್ವಶಾಸ್ತ್ರದ ಮೂಲಕ ಅಲ್ಲ. ತಿಳುವಳಿಕೆಯ ಮೂಲಕ ಅಲ್ಲ, ಆದರೆ ನೈಸರ್ಗಿಕ ಪ್ರೀತಿಯಿಂದ. 'ಕೃಷ್ಣನು ನಮ್ಮ ಹಳ್ಳಿ ಹುಡುಗ, ನಮ್ಮ ಸಂಬಂಧಿ, ನಮ್ಮ ಸ್ನೇಹಿತ, ನಮ್ಮ ಪ್ರೇಮಿ, ನಮ್ಮ ಯಜಮಾನ. ' ಹೇಗಾದರೂ ಸರಿ, ಕೃಷ್ಣ. "
690411 - ಸಂಭಾಷಣೆ - ನ್ಯೂ ಯಾರ್ಕ್