KN/690411 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆತ್ಮವಿತ್ ಸಂಮತಃ. ಇದನ್ನು ಮಹಾನ್ ಆಚಾರ್ಯರು ಅಂಗೀಕರಿಸಬೇಕು. ನಾವು ಈ ಕೃಷ್ಣ ಪ್ರಜ್ಞೆಯನ್ನು ಮುಂದಿಡುತ್ತಿರುವುದು ನಮ್ಮ ಆಶಯಗಳಿಂದಲ್ಲ. ಇದನ್ನು ಮಹಾನ್ ಆಚಾರ್ಯರು ಅನುಮೋದಿಸಿದ್ದಾರೆ. ನಾವು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಅಷ್ಟೆ. ಅದು ನಮ್ಮ ವ್ಯವಹಾರ. ಆತ್ಮವಿತ್ ತತ್ತ್ವ, ಆತ್ಮವಿತ್-ಸಮ್ಮತ. ತದನಂತರ ಪುಂಸಾಂ, ಸಾಮಾನ್ಯವಾಗಿ ಜನರಿಗೆ, ಶ್ರೋತವ್ಯಾದಿಷು ಯಃ ಪರಹ್ (ಶ್ರೀ.ಭಾ. ೨.೧.೧). ಸಾಮಾನ್ಯ ಜನಗಳು ಕೇಳುವುದಕ್ಕಾಗಿ ಅನೇಕ ವಿಷಯಗಳನ್ನು ಪಡೆದಿದ್ದಾರೆ. ಆದರೆ ಈ ವಿಷಯ, ಈ ಕೃಷ್ಣ ಪ್ರಜ್ಞೆಯನ್ನು ಕೇಳುವುದು, ..., ಶ್ರೋತವ್ಯಾದಿ. ನೀವು ಕೇಳಲು ಯಾವುದೇ ವಿಷಯವನ್ನು ಪಡೆದುಕೊಂಡಿದ್ದರೂ, ಅವುಗಳಲ್ಲಿ ಇದು ಅತ್ಯುನ್ನತವಾಗಿದೆ. ಇದು ಅಗ್ರಗಣ್ಯವಾಗಿದೆ. ಶ್ರೋತವ್ಯಾದಿಷು ಯಃ ಪರಹ್. ಆದ್ದರಿಂದ ಅವರು ಪ್ರಾರಂಭಿಸಿದ್ದಾರೆ, ಸುಖದೇವ ಗೋಸ್ವಾಮಿ ಕೃಷ್ಣನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ, ಮತ್ತು ಈ ಗ್ರಂಥವು ದೇವರನ್ನು ಸಾಕ್ಷಾತ್ಕಾರಿಸಲು ಮೊದಲ ಹೆಜ್ಜೆ. ಹೇಗೆ, ಸಾಮಾನ್ಯ ಪುರುಷರಿಗೋಸ್ಕರ, ಹೇಗೆ ಒಬ್ಬರು, ದೇವರನ್ನು ಅರಿತುಕೊಳ್ಳಬಹುದು, ಈ ವಿಷಯಗಳನ್ನು ವಿವರಿಸಲಾಗುವುದು. ನಾವು ವಿವರಿಸೋಣ. "
690411 - ಉಪನ್ಯಾಸ ಶ್ರೀ.ಭಾ. ಆಯ್ದ ಭಾಗಗಳು - ನ್ಯೂ ಯಾರ್ಕ್