KN/661026 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆತ್ಮವು ಈಗ ಸೂಕ್ಷ್ಮ ದೇಹ ಮತ್ತು ಸ್ಥೂಲ ದೇಹದಿಂದ ಆವೃತವಾಗಿದೆ. ಸ್ಥೂಲ ದೇಹವು ಕೆಲಸ ಮಾಡುವುದನ್ನು ನಿಲ್ಲಿಸಿದಾಗ... ರಾತ್ರಿಯಲ್ಲಿ ಸ್ಥೂಲ ದೇಹವು ಮಲಗಿದೆ, ಆದರೆ ಸೂಕ್ಷ್ಮ ದೇಹದ ಮನಸ್ಸು ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ನೀವು ಕನಸು ಕಾಣುತ್ತಿರುವಿರಿ. ಸೂಕ್ಷ್ಮ ದೇಹ ಕೆಲಸ ಮಾಡುತ್ತಿದೆ. ಆದ್ದರಿಂದ ನೀವು ಈ ದೇಹವನ್ನು ತ್ಯಜಿಸಿದಾಗ, ನಿಮ್ಮ ಸೂಕ್ಷ್ಮ ದೇಹ, ಮನಸ್ಸು, ಬುದ್ಧಿ, ಅದು ನಿಮ್ಮನ್ನು ಬಹಳ ಚೆನ್ನಾಗಿ ಒಯ್ಯುತ್ತದೆ. ಪರಿಮಳವನ್ನು ಗಾಳಿಯು ಒಯ್ಯುವಂತೆ. ಗಾಳಿಯು ಕೆಲವು ಗುಲಾಬಿ ಮರಗಳ ಮೇಲೆ ಹಾದು ಹೋದರೆ, ಗಾಳಿಯು ಗುಲಾಬಿಯಂತೆ ಪರಿಮಳ ಪಡೆಯುತ್ತದೆ. ಗುಲಾಬಿ ಇಲ್ಲ, ಆದರೆ ಪರಿಮಳವಿದೆ. ಅದೇ ರೀತಿ, ನಿಮ್ಮ ಮನಸ್ಥಿತಿಯ ಪರಿಮಳ, ನಿಮ್ಮ ತಿಳುವಳಿಕೆಯ ಪರಿಮಳವನ್ನು ಒಯ್ಯಲಾಗುತ್ತದೆ. ಅದು ಸೂಕ್ಷ್ಮ ದೇಹ. ಮತ್ತು ನೀವು ಅದೇ ರೀತಿಯ ದೇಹವನ್ನು ಪಡೆಯುತ್ತೀರಿ. ಆದ್ದರಿಂದ ಸಾವಿನ ಸಮಯದಲ್ಲಿ ಪರೀಕ್ಷಿಸಲಾಗುತ್ತದೆ, ಕೃಷ್ಣ ಪ್ರಜ್ಞೆಯಲ್ಲಿ ಒಬ್ಬರು ಎಷ್ಟು ಮುಂದುವರೆದಿದ್ದಾರೆ ಎಂದು."
661026 - ಉಪನ್ಯಾಸ BG 08.05 - ನ್ಯೂ ಯಾರ್ಕ್