KN/661117 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣ ಮತ್ತು ಸಾಮಾನ್ಯ ಮನುಷ್ಯ, ಅಥವಾ ಸಾಮಾನ್ಯ ಜೀವಿಗಳ, ನಡುವಿನ ವ್ಯತ್ಯಾಸವೆಂದರೆ ನಾವು ಒಂದೇ ಸ್ಥಳದಲ್ಲಿ ಉಳಿಯ ಬಹುದು, ಆದರೆ ಕೃಷ್ಣ… ಗೋಲೋಕ ಏವ ನಿವಸತಿ ಅಖಿಲಾತ್ಮ-ಭೂತಃ (ಬ್ರಹ್ಮ.ಸಂ 5.37). ಅಲೌಕಿಕ ಸಾಮ್ರಾಜ್ಯದಲ್ಲಿ ಅವನು ತನ್ನ ವಾಸಸ್ಥಾನವನ್ನು ಪಡೆದಿದ್ದರೂ, ಇದನ್ನು ಗೋಲೋಕ ವೃಂದಾವನ ಎಂದು ಕರೆಯಲಾಗುತ್ತದೆ... ನಾನು ಬಂದಿರುವ ವೃಂದಾವನ ನಗರ, ಆ ವೃಂದಾವನವನ್ನು ಭೌಮ ವೃಂದಾವನ ಎಂದು ಕರೆಯಲಾಗುತ್ತದೆ. ಭೌಮ ವೃಂದಾವನ ಎಂದರೆ ಈ ಭೂಮಿಯ ಮೇಲೆ ಇಳಿದ ಅದೇ ವೃಂದಾವನ ಎಂದರ್ಥ. ಕೃಷ್ಣ ಈ ಭೂಮಿಯ ಮೇಲೆ ತನ್ನ ಆಂತರಿಕ ಶಕ್ತಿಯಿಂದ ಇಳಿಯುವಂತೆಯೇ, ಅವನ ಧಾಮ, ಅಥವ ಅವನ ವಾಸಸ್ಥಾನವು ಆದ ವೃಂದಾವನ ಧಾಮ ಕೂಡ ಇಳಿಯುತ್ತದೆ. ಅಥವಾ, ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃಷ್ಣ ಈ ಭೂಮಿಯ ಮೇಲೆ ಇಳಿಯುವಾಗ, ಅವನು ಆ ನಿರ್ದಿಷ್ಟ ಭೂಮಿಯಲ್ಲಿ ಸ್ವತಃ ಪ್ರಕಟಗೊಳ್ಳುತ್ತಾನೆ. ಆದ್ದರಿಂದ ಆ ಭೂಮಿ ತುಂಬಾ ಪವಿತ್ರವಾಗಿದೆ, ವೃಂದಾವನ."
661117 - ಉಪನ್ಯಾಸ BG 08.15-20 - ನ್ಯೂ ಯಾರ್ಕ್