KN/670111c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ,

ಸರ್ವ-ಯೋನಿಷು ಕೌಂತೇಯ ಮುರ್ತಯಃ ಸಂಭವನ್ತಿ ಯಃ ತಾಸಾಂ ಬ್ರಹ್ಮ ಮಹದ್ ಯೋನಿರ್ ಅಹಂ ಬೀಜ-ಪ್ರದಃ ಪಿತಾ

(ಭ. ಗೀ. ೧೪.೪) ಜನರು ಭಗವದ್ಗೀತೆಯನ್ನು ಭಾರತೀಯ ಅಥವಾ ಹಿಂದೂ ಎಂದು ಒಪ್ಪಿಕೊಳ್ಳುತ್ತಿದ್ದಾರೆ, ಆದರೆ ವಾಸ್ತವವಾಗಿ ಅದು ಹಾಗಲ್ಲ. ಇದು ಸಾರ್ವತ್ರಿಕವಾಗಿದೆ. ಜೀವಿಗಳಲ್ಲಿ ಹಲವು ರೂಪಗಳಿವೆ ಎಂದು ಕೃಷ್ಣ ಹೇಳುತ್ತಾನೇ. ೮,೪೦೦,೦೦೦ ವಿವಿಧ ರೀತಿಯ ದೇಹಗಳಿವೆ. "ಮತ್ತು ಅವರೆಲ್ಲರೂ ನನ್ನ ಮಕ್ಕಳು." ಆದ್ದರಿಂದ ನೀವು ಕೃಷ್ಣನನ್ನು ಪ್ರೀತಿಸಿದರೆ, ನೀವು ಬಿಳಿ ಮನುಷ್ಯನನ್ನು ಪ್ರೀತಿಸುತ್ತೀರಿ, ನೀವು ಅಮೆರಿಕನ್ನರನ್ನು ಪ್ರೀತಿಸುತ್ತೀರಿ, ನೀವು ಯುರೋಪಿಯನ್ ರನ್ನು ಪ್ರೀತಿಸುತ್ತೀರಿ, ನೀವು ಭಾರತೀಯರನ್ನು ಪ್ರೀತಿಸುತ್ತೀರಿ, ನೀವು ಹಸುವನ್ನು ಪ್ರೀತಿಸುತ್ತೀರಿ, ನೀವು ನಾಯಿಯನ್ನು ಪ್ರೀತಿಸುತ್ತೀರಿ, ನೀವು ಸರ್ಪವನ್ನು ಪ್ರೀತಿಸುತ್ತೀರಿ-ಎಲ್ಲವನ್ನು."

670111 - ಉಪನ್ಯಾಸ ಭ. ಗೀ. ೧೦.೦೮ - ನ್ಯೂ ಯಾರ್ಕ್