KN/670209 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ನೀವು ನೋಡುವಂತೆಯೇ ಅರ್ಜುನ, ಆರಂಭದಲ್ಲಿ ಅವನು ಕೃಷ್ಣನೊಂದಿಗೆ ವಾದಿಸುತ್ತಿದ್ದನು, ಸ್ನೇಹಿತ ಮತ್ತು ಸ್ನೇಹಿತನ ನಡುವೆ, ಆದರೆ ಅವನು ತನ್ನನ್ನು ತಾನು ಶಿಷ್ಯನಾಗಿ ಶರಣಾದಾಗ, ಶಿಷ್ಯಸ್ ತೇ ಹಂ ಶಾಧಿ ಮಾಂ ಪ್ರಪನ್ನಮ್ ( ಭ. ಗೀ. ೨.೭). ಅವನು ಹೇಳಿದನು, "ನನ್ನ ಪ್ರೀತಿಯ ಕೃಷ್ಣ, ಈಗ ನಾನು ನಿನಗೆ ಶರಣಾಗುತ್ತಿದ್ದೇನೆ. ನಾನು ನಿನ್ನನ್ನು ನನ್ನ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸುತ್ತೇನೆ. ಶಿಷ್ಯಸ್ ತೇ ಹಂ." ನಾನು ನಿನ್ನ ಶಿಷ್ಯ, ಸ್ನೇಹಿತನಲ್ಲ. ಏಕೆಂದರೆ ಸ್ನೇಹಪರ ಮಾತುಕತೆ, ವಾದಗಳು, ಅಂತ್ಯವಿಲ್ಲ. ಆದರೆ ಆಧ್ಯಾತ್ಮಿಕ ಗುರು ಮತ್ತು ಶಿಷ್ಯರ ನಡುವೆ ಮಾತುಕತೆ ನಡೆದಾಗ,ಅಲ್ಲಿ ಯಾವುದೇ ವಾದವಿಲ್ಲ. ವಾದವಿಲ್ಲ. "ಇದನ್ನು ಮಾಡಬೇಕು" ಎಂದು ಆಧ್ಯಾತ್ಮಿಕ ಗುರು ಹೇಳಿದ ತಕ್ಷಣ ಅದನ್ನು ಮಾಡಬೇಕು. ಅಷ್ಟೆ, ಅದೇ ಅಂತಿಮ. "
670209 - ಉಪನ್ಯಾಸ ಚೈ. ಚ. ಆದಿ. ೦೭.೭.೮೧ - ಸ್ಯಾನ್ ಫ್ರಾನ್ಸಿಸ್ಕೋ