KN/681030 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭೌತಿಕ ಜಗತ್ತಿನಲ್ಲಿ ಸಾತ್ವಿಕ ಗುಣವು ಕೆಲವೊಮ್ಮೆ ತಮೋ ಗುಣ ಮತ್ತು ರಜೋ ಗುಣದೊಂದಿಗೆ ಬೆರೆತಿರುತ್ತದೆ, ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಶುದ್ಧವಾದ ಸಾತ್ವಿಕ ಗುಣವಿದೆ-ರಜೋ ಗುಣ ಮತ್ತು ತಮೋ ಗುಣದ ಯಾವುದೇ ಮಾಲಿನ್ಯ ಅಥವಾ ಛಾಯೆಗಳಿಲ್ಲ. ಆದ್ದರಿಂದ ಇದನ್ನು ಶುದ್ಧ-ಸತ್ತ್ವ ಎಂದು ಕರೆಯಲಾಗುತ್ತದೆ. ಶುದ್ಧ- ಸತ್ತ್ವ. ಶಬ್ದಮ್, ಸತ್ತ್ವಂ ವಿಶುದ್ಧಮ್ ವಸುದೇವ - ಶಬ್ದಿತಂ (ಶ್ರೀ.ಭಾ. ೦೪.೦೩.೨೩): "ಆ ಶುದ್ಧ ಸತ್ತ್ವವನ್ನು ವಸುದೇವ ಎಂದು ಕರೆಯಲಾಗುತ್ತದೆ, ಮತ್ತು ಆ ಶುದ್ಧ ಸತ್ತ್ವದಲ್ಲಿ ದೇವರನ್ನು ಅರಿತುಕೊಳ್ಳಬಹುದು." ಆದ್ದರಿಂದ ದೇವರ ಹೆಸರು ವಾಸುದೇವ, "ವಸುದೇವನಿಂದ ಉತ್ಪತ್ತಿಯಾಗಿದೆ . "ವಸುದೇವ ವಾಸುದೇವನ ತಂದೆ. ಆದ್ದರಿಂದ ನಾವು ಯಾವುದೇ ರಜೋಗುಣ ಮತ್ತು ತಮೋಗುಣದ ಛಾಯೆಗಳಿಲ್ಲದೆ ಶುದ್ಧ ಸತ್ತ್ವದ ಮಾನದಂಡಕ್ಕೆ ಬರದಿದ್ದರೆ, ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ."
681030 - ಉಪನ್ಯಾಸ ಈಶೋ ೧ - ಲಾಸ್ ಎಂಜಲೀಸ್