KN/681221 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" 'ದಯವಿಟ್ಟು ಭಗವಾನ್ ನಿತ್ಯಾನಂದರ ಆಶ್ರಯವನ್ನು ಸ್ವೀಕರಿಸಿ,' ಎಂದು ನರೋತ್ತಮ ದಾಸ ಠಾಕೂರರು ಸಲಹೆ ನೀಡುತ್ತಾರೆ. ಭಗವಾನ್ ನಿತ್ಯಾನಂದರ ಕಮಲ ಪಾದಗಳ ಆಶ್ರಯವನ್ನು ಸ್ವೀಕರಿಸಿದ ಪರಿಣಾಮ ಏನು? ಹೆನೋ ನಿತಾಯ್ ಬಿನೆ ಭಾಯ್ ಎಂದು ಅವರು ಹೇಳುತ್ತಾರೆ: "ನೀವು ನಿತ್ಯಾನಂದನ ಕಮಲದ ಪಾದದ ನೆರಳಿನಲ್ಲಿ ಆಶ್ರಯ ಪಡೆಯದಿದ್ದರೆ," ರಾಧಾ-ಕೃಷ್ಣ ಪಾಯಿತೆ ನೈ, 'ರಾಧಾ-ಕೃಷ್ಣರನ್ನು ಸಮೀಪಿಸುವುದು ತುಂಬಾ ಕಷ್ಟಕರವಾಗಿರುತ್ತದೆ'. ರಾಧಾ-ಕೃಷ್ಣ... ಈ ಕೃಷ್ಣ ಪ್ರಜ್ಞೆ ಆಂದೋಲನವು ರಾಧಾ - ಕೃಷ್ಣರನ್ನು ಸಮೀಪಿಸುವುದಕ್ಕಾಗಿ, ಸರ್ವೋಚ್ಚ ಭಗವಂತನೊಂದಿಗೆ ಅವರ ಭವ್ಯವಾದ ಆನಂದ ನೃತ್ಯದಲ್ಲಿ ಸಂಬಂಧ ಹೊಂದಲು. ಅದು ಕೃಷ್ಣ ಪ್ರಜ್ಞೆಯ ಗುರಿ. ಆದ್ದರಿಂದ ನರೋತ್ತಮ ದಾಸ ಠಾಕೂರ ಅವರ ಸಲಹೆಯೆಂದರೆ, 'ನೀವು ನಿಜವಾಗಿಯೂ ರಾಧಾ-ಕೃಷ್ಣರ ನೃತ್ಯ ಸಂಘಕ್ಕೆ ಪ್ರವೇಶಿಸಲು ಬಯಸಿದರೆ, ನೀವು ನಿತ್ಯಾನಂದನ ಕಮಲ ಪಾದಗಳ ಆಶ್ರಯ ಪಡೆಯಬೇಕು'.
ನಿತ್ತಾಯ್-ಪದ-ಕಮಲದ ಉಪನ್ಯಾಸ ಭಾವಾರ್ಥ- ಲಾಸ್ ಎಂಜಲೀಸ್