KN/690110b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈ ಭಕ್ತರ ಒಡನಾಟವನ್ನು ತ್ಯಜಿಸಿದ ತಕ್ಷಣ, ತಕ್ಷಣವೇ ಮಾಯೆಯು ನನ್ನನ್ನು ಆವರಿಸುತ್ತದೆ. ತಕ್ಷಣವೇ. ಮಾಯೆಯು ಅಕ್ಕಪಕ್ಕದಲ್ಲೇ ಇರುತ್ತದೆ. ನಾವು ಈ ಸಂಘವನ್ನು ಬಿಟ್ಟುಕೊಟ್ಟ ತಕ್ಷಣ," ಹೌದು, ನನ್ನ ಸಹವಾಸದಲ್ಲಿ ಬನ್ನಿ "ಎಂದು ಮಾಯೆಯು ಹೇಳುತ್ತದೆ. ಯಾವುದೇ ಸಹವಾಸವಿಲ್ಲದೆ, ಯಾರೂ ತಟಸ್ಥರಾಗಿರಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅವನು ಮಾಯೆಯ ಅಥವಾ ಕೃಷ್ಣನ ಜೊತೆ ಒಡನಾಟ ಹೊಂದಿರಲೇಬೇಕು.ಆದ್ದರಿಂದ ಎಲ್ಲರೂ ಭಕ್ತರೊಡನೆ, ಕೃಷ್ಣನ ಜೊತೆ ಒಡನಾಟವನ್ನು ಇಟ್ಟುಕೊಳ್ಳಲು ತುಂಬಾ ಗಂಭೀರವಾಗಿರಬೇಕು. "ಕೃಷ್ಣ ಅಂದರೆ... ನಾವು ಕೃಷ್ಣನ ಬಗ್ಗೆ ಮಾತನಾಡುವಾಗ, "ಕೃಷ್ಣ" ಎಂದರೆ ಕೃಷ್ಣ ಅವನ ಭಕ್ತರೊಂದಿಗೆ ಎಂದು ಅರ್ಥ. ಕೃಷ್ಣ ಎಂದಿಗೂ ಒಬ್ಬಂಟಿಯಾಗಿರುವುದಿಲ್ಲ. ಕೃಷ್ಣನು ರಾಧರಾಣಿಯ ಜೊತೆಗಿದ್ದಾನೆ, ರಾಧರಾಣಿಯು ಗೋಪಿಯರೊಂದಿಗೆ ಇದ್ದಾರೆ, ಮತ್ತು ಕೃಷ್ಣನು ಗೋ ಪಾಲಕರೊಂದಿಗಿದ್ದಾನೆ. ನಾವು ನಿರಾಕಾರವಾದಿಗಳಲ್ಲ. ನಾವು ಕೃಷ್ಣನನ್ನು ಮಾತ್ರ ನೋಡುವುದಿಲ್ಲ. ಅದೇ ರೀತಿ, ಕೃಷ್ಣ ಎಂದರೆ ಕೃಷ್ಣನ ಭಕ್ತರೊಂದಿಗೆ. ಆದ್ದರಿಂದ ಕೃಷ್ಣ ಪ್ರಜ್ಞೆ ಎಂದರೆ ಕೃಷ್ಣನ ಭಕ್ತರೊಂದಿಗೆ ಒಡನಾಟ ಇಟ್ಟುಕೊಳ್ಳುವುದು. "
690110 - ಗೌರ ಪಹು ಭಜನ್ ಮತ್ತು ಭಾವಾರ್ಥ - ಲಾಸ್ ಎಂಜಲೀಸ್