KN/Prabhupada 0006 - ಎಲ್ಲರೂ ದೇವರೇ - ಮೂರ್ಖರ ಸ್ವರ್ಗ



Lecture on SB 1.15.49 -- Los Angeles, December 26, 1973

ಪ್ರತಿಯೊಬ್ಬರಿಗೂ ಗರ್ವ, "ನನಗೆ ಗೊತ್ತು, ನನಗೆ ಎಲ್ಲವೂ ತಿಳಿದಿದೆ. ಆದ್ದರಿಂದ ಗುರುಗಳ ಬಳಿಗೆ ಹೋಗುವ ಅವಶ್ಯಕತೆ ಇಲ್ಲ", ಎಂದು. ಇಲ್ಲಿದೆ ನೋಡಿ ಗುರುವನ್ನು, ಆಧ್ಯಾತ್ಮಿಕ ಗುರುವನ್ನು, ಬಳಿಸಾರುವ ವಿಧಾನ: ಶರಣಾಗತಿ - "ನನಗೆ ಅನೇಕ ಅನುಪಯುಕ್ತ ವಿಷಯಗಳು ತಿಳಿದಿವೆ. ಈಗ ನನಗೆ ದಯವಿಟ್ಟು ಕಲಿಸಿಕೊಡಿ." ಇದ್ದನೇ ಶರಣಾಗತಿ ಎನ್ನುತ್ತಾರೆ. ಅರ್ಜುನನು ಹೇಳಿದ ಹಾಗೆ: ಶಿಷ್ಯಸ್ತೇ ಹಂ ಶಾಧಿ ಮಾಂ ಪ್ರಪನ್ನಮ್ (ಭ.ಗೀ 2.7). ಅರ್ಜುನ ಮತ್ತು ಕೃಷ್ಣನ ನಡುವೆ ವಿವಾದ ನಡೆದಾಗ, ಮತ್ತು ಯಾವಾಗ ಆ ವಿಷಯದ ಪರಿಹಾರ ಸಿಗಲಿಲ್ಲವೋ, ಆಗ ಅರ್ಜುನ ಕೃಷ್ಣನಿಗೆ ಶರಣಾದ, "ನನ್ನ ಪೀತಿಯ ಕೃಷ್ಣನೆ, ಈಗ ನಾವು ಸ್ನೇಹಿತರ ಹಾಗೆ ಮಾತನಾಡುತ್ತಿದ್ದೆವೆ, ಇನ್ನು ಮುಂದೆ ಈ ರೀತಿ ಸ್ನೇಹಬರಿತ ಮಾತುಗಳಿಲ್ಲ ನಾನು ನಿನನ್ನು ನನ್ನ ಆಧ್ಯಾತ್ಮಿಕ ಗುರುಗಳಾಗಿ ಸ್ವೀಕರಿಸಿದ್ದೇನೆ. ದಯವಿಟ್ಟು ನನಗೆ ನನ್ನ ಕರ್ತವ್ಯ ಏನೆಂದು ಕಲಿಸು." ಅದೇ ಭಗವದ್ಗೀತೆ.

ಅದ್ದನು ನಾವು ಕಲಿಯಬೇಕು. ತದ್-ವಿಜ್ಞಾನಾರ್ತಂ ಸ ಗುರುಮ್ ಏವ ಅಭಿಗಚ್ಚೇತ್ (ಮ.ಉ ೧.೨.೧೨). ಇದು ವೈದಿಕ ಆಜ್ಞೆ, ಏನು ಜೀವನದ ಮೌಲ್ಯ ಎಂದು? ಹೇಗೆ ಬದಲಾಗುತ್ತಿದೆ? ಹೇಗೆ ನಮ್ಮ ದೇಹಾಂತರವಾಗುತ್ತಿದೆ? ನಾನು ಏನು? ನಾನು ಈ ದೇಹವೋ ದೇಹಾತೀತವೋ? ಈ ವಿಷಯಗಳ ಚಿಂತನೆಯಾಗಬೇಕು. ಇದೇ ಮಾನವ ಜನ್ಮ. ಅಥಾತೋ ಬ್ರಹ್ಮ ಜಿಜ್ಞಾಸ. ಇದರ ವಿಚಾರಣೆ ಮಾಡಬೇಕು. ಅದ್ದರಿಂದ, ಈ ಕಲಿ-ಯುಗದಲ್ಲಿ, ಯಾವುದೇ ಜ್ಞಾನವಿಲ್ಲದೆ, ಯಾವುದೇ ವಿಚಾರಣೆ ಮಾಡದೆ, ಯಾವುದೇ ಗುರುವೆಲ್ಲದೆ, ಯಾವುದೇ ಪುಸ್ತಕವಿಲ್ಲದೆ, ಎಲ್ಲರು ದೇವರೇ, ಅಷ್ಟೇ. ಹೀಗೆ ನಡೆಯುತ್ತಿದೆ, ಮೂರ್ಖರ ಸ್ವರ್ಗ. ಇದು ಸಹಾಯ ಮಾಡುವುದ್ದಿಲ್ಲ. ಇಲ್ಲಿ, ವಿದುರನ ಬಗ್ಗೆ... ಅವರು ಸಹ.....

ವಿದುರೊ 'ಪಿ ಪರಿತ್ಯಜ್ಯ
ಪ್ರಭಾಸೆ ದೇಹಮ್ ಆತ್ಮನಃ
ಕೃಷ್ಣಾವೇಶೆನ ತಕ್-ಚಿತ್ತಃ
ಪಿತೄಭಿಃ ಸ್ವ-ಕ್ಷಯಂ ಯಯೌ
(ಶ್ರೀ.ಭಾ 1.15.49)

ಅವರು... ನಾನು ವಿದುರನ ಬಗ್ಗೆ ಮಾತಡುತ್ತಿದ್ದೇನೆ. ವಿದುರನು ಯಮರಾಜ. ಆದ್ದರಿಂದ, ಒಬ್ಬ ಸಂತನನ್ನು ಯಮರಾಜನ ಮುಂದೆ ಶಿಕ್ಷೆ ನೀಡಲು ಕರೆತಂದರು. ಆಗ ಆ ಸಂತನು ಯಮರಾಜನನ್ನು ಪ್ರಶ್ನಿಸಿದನು:"ನಾನು ನನ್ನ ಜೀವನದಲ್ಲಿ ಯಾವುದೇ ಪಾಪ ಮಾಡಿರುವ ನೆನಪು ನನಗೆ ಇಲ್ಲ. ನನ್ನನು ಏಕೆ ವಿಚಾರಣೆ ಮಾಡಲು ಇಲ್ಲಿಗೆ ಕರೆತಂದಿದ್ದೀರಿ? ಆಗ ಯಮರಾಜ ಹೇಳಿದನು, "ನಿನಗೆ ಅದು ನೆನಪಿಲ್ಲ. ನಿನ್ನ ಬಾಲ್ಯದಲ್ಲಿ ನೀನು ಒಂದು ಇರುವೆಗೆ ಸೂಜಿಯಿಂದ ಗುದನಾಳದ ಮೂಲಕ ಚುಚ್ಚಿದ ಕಾರಣ ಅದು ಸತ್ತು ಹೋಯಿತು. ಆದ್ದರಿಂದ, ನಿನ್ನನ್ನು ಶಿಕ್ಷಿಸಬೇಕು." ಹೇಗಿದೆ ನೋಡಿ. ಬಾಲ್ಯದಲ್ಲಿ, ಅಜ್ಞಾನದಿಂದ, ಅವನು ಒಂದು ಪಾಪಕಾರ್ಯ ಮಾಡಿದರಿಂದ, ಅವನಿಗೆ ಶಿಕ್ಷೆಯಾಯಿತು. ಮತ್ತು ನಾವು ಸ್ವಸಮ್ಮತಿಯಿಂದ, "ನೀವು ಕೊಲ್ಲಬಾರದು" ಎಂಬ ಧರ್ಮ ತತ್ವಕ್ಕೆ ವಿರುಧವಾಗಿ, ಪ್ರಾಣಿಗಳಿಗೆ ಆತ್ಮವಿಲ್ಲ ಎಂಬ ಅಸಂಬದ್ಧ ಸಿದ್ಧಾಂತವನ್ನು ನೀಡಿ, ಸಾವಿರಾರು ಕಸಾಯಿಖಾನೆಗಳ್ಳನ್ನು ತೆರೆದಿದ್ದೇವೆ. ಈ ತಮಾಷೆಯನ್ನು ನೋಡಿ. ಹೀಗೆ ನಡೆಯುತ್ತಿದೆ ಆದರೆ ಶಾಂತಿಯನ್ನು ಬಯಸುತ್ತೇವೆ.