KN/Prabhupada 0070 - ಚೆನ್ನಾಗಿ ನಿರ್ವಹಿಸಿ



Room Conversation -- April 22, 1977, Bombay

ಪ್ರಭುಪಾದ: ನಮ್ಮ ತತ್ವಕ್ಕೆ ಬದ್ಧರಾಗಿರಿ ಹಾಗು ಜಿ.ಬಿ.ಸಿ ಬಹಳ ಎಚ್ಚರಿಕೆಯಿಂದಿರುವಂತೆ ನೋಡಿಕೊಳ್ಳಿ. ಆಗ ಎಲ್ಲವು ಮುನ್ನಡೆಯುತ್ತದೆ, ನಾನು ಇಲ್ಲವೆಂದರು ಕೂಡ. ಅದನ್ನು ಮಾಡಿ. ಅದೇ ನನ್ನ ಮನವಿ. ನಾನು ನಿಮಗೆ ಎಷ್ಟು ಕಲಿಸಿದ್ದೇನೋ ಅದನ್ನು ಅನುಸರಿಸಿ ಆಗ ಯಾರಿಗು ಬಾಧೆಯಾಗುವುದಿಲ್ಲ. ಮಾಯೆ ನಿಮ್ಮನು ತಾಕುವುದಿಲ್ಲ. ಈಗ ಕೃಷ್ಣನು ಕೊಡುತ್ತಿದ್ದಾನೆ, ಮುಂದಕ್ಕೂ ಹಣದ ಅಭಾವವಿರುವುದಿಲ್ಲ. ನೀವು ಪುಸ್ತಕಗಳನ್ನು ಮುದ್ರಿಸಿ ಹಾಗು ಮಾರಾಟ ಮಾಡಿ. ಎಲ್ಲವು ಇದೆ. ವಿಶ್ವದಾದ್ಯಂತ ಒಳ್ಳೆ ಆಶ್ರಯಗಳು ದೊರಕಿವೆ. ನಮಗೆ ಆದಾಯವಿದೆ. ನಮ್ಮ ತತ್ವಕ್ಕೆ ಬದ್ಧರಾಗಿರಿ ಹಾಗು… ನಾನು ಹಠಾತ್ ಮರಣ ಹೊಂದಿದರೂ, ನೀವು ನಿರ್ವಹಿಸಬಲ್ಲಿರಿ. ಅಷ್ಟೆ. ನನಗೆ ಆದೇ ಬೇಕು. ಚೆನ್ನಾಗಿ ನಿರ್ವಹಿಸಿ, ಹಾಗು ಚಳುವಳಿಯನ್ನು ಮುನ್ನಡೆಸಿ. ಈಗ ವ್ಯವಸ್ಥೆಮಾಡಿಕೊಳ್ಳಿ. ಹಿನ್ನಡೆಯಬೇಡಿ. ಜಾಗರೂಕರಾಗಿರಿ. ಆಪನಿ ಆಚರಿ ಪ್ರಭು ಜೀವೆರಿ ಶಿಕ್ಷಾಯಾ.