KN/690108c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:39, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಕೃಷ್ಣನನ್ನು ಸ್ವೀಕರಿಸಬಾರದು ಏಕೆಂದರೆ ಅವನು ಭಾರತದಲ್ಲಿ ಅವತರಿಸಿದನು ಆದ್ದರಿಂದ ಅವನು ಭಾರತೀಯ ಅಥವಾ ಭಾರತೀಯ ದೇವರು. ಅದು ತಪ್ಪು. ಕೃಷ್ಣನು ಎಲ್ಲರಿಗೋಸ್ಕರ. ಕೃಷ್ಣನು ಹಿಂದೂ ಸಮುದಾಯಕ್ಕೆ ಸೇರಿದವನು ಅಥವಾ ಕೃಷ್ಣನು ಭಾರತಕ್ಕೆ ಸೇರಿದವನು ಅಥವಾ ಬೇರೆ ರೀತಿಯಲ್ಲಿ ಕ್ಷತ್ರಿಯ ಎಂದು ಪರಿಗಣಿಸಬೇಡಿ, ಅವನು ಯಾವುದೇ ಐಹಿಕ ಪದವಿಗೆ ಒಳಪಡುವುದಿಲ್ಲ. ಅವನು ಇವೆಲ್ಲರ ಹೊರತಾಗಿದ್ದಾನೆ. ಮತ್ತು ನೀವು ಭಗವದ್ಗೀತೆ, ಹದಿನಾಲ್ಕನೆಯ ಅಧ್ಯಾಯದಲ್ಲಿ ಕಾಣುವಿರಿ, ಅವನು ಹೇಳುತ್ತಾನೆ, ಸರ್ವ-ಯೋನಿಶು ಕೌಂತೆಯ ಸಂಭವನ್ತಿ ಮೂರ್ತಯಃ (ಭ. ಗೀತಾ ೧೪.೪). ಮಾನವ ಜೀವಿಗಳನ್ನು ಒಳಗೊಂಡಂತೆ 8,400,000 ವಿಧದ ಜೀವಿಗಳಿವೆ. ಮತ್ತು ಕೃಷ್ಣನು ಹೇಳುತ್ತಾನೆ, ಅಹಂ ಬೀಜ ಪ್ರದಃ ಪಿತಾ, "ನಾನು ಅವರ ಬೀಜ ನೀಡುವ ತಂದೆ". ಆದ್ದರಿಂದ ಅವನು ಕೇವಲ ಮಾನವ ಸಮಾಜದ ತಂದೆಯೆಂದು ಹೇಳಿಕೊಳ್ಳುವುದಿಲ್ಲ ಆದರೆ ಪ್ರಾಣಿ ಸಮಾಜ, ಪ್ರಾಣಿ ಸಮಾಜ, ಪಕ್ಷಿ ಸಮಾಜ, ಕೀಟ ಸಮಾಜ, ಜಲ ಸಮಾಜ, ಸಸ್ಯ ಸಮಾಜ, ಮರ ಸಮಾಜ-ಎಲ್ಲಾ ಜೀವಿಗಳ ತಂದೆಯೂ ಕೂಡ. ದೇವರು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವರ್ಗಕ್ಕೆ ಸೇರಲು ಸಾಧ್ಯವಿಲ್ಲ. ಅದು ತಪ್ಪು ಕಲ್ಪನೆ. ದೇವರು ಎಲ್ಲರಿಗೂ ಸೇರಿರಬೇಕು. "
690108 - ಉಪನ್ಯಾಸ ಭ. ಗೀತಾ ೪.೧೧-೧೮ - ಲಾಸ್ ಎಂಜಲೀಸ್