KN/660419 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಪ್ರಸ್ತುತ ಕ್ಷಣದಲ್ಲಿ, ನಮ್ಮ ಭೌತಿಕ ಸ್ಥಿತಿಯಲ್ಲಿ, ನಾವು ವಿಚಾರಗಳನ್ನು ತಯಾರಿಸುತ್ತಿದ್ದೇವೆ, ಮತ್ತು ಏನನ್ನಾದರೂ ಸೃಷ್ಟಿಸುವುದು, ಮತ್ತು ಅದನ್ನು ತಿರಸ್ಕರಿಸುವುದು, ಮನಸ್ಸಿನ ವ್ಯವಹಾರವಾಗಿರುವುದರಿಂದ ನಾವು ಗೊಂದಲಕ್ಕೊಳಗಾಗಿದ್ದೇವೆ. ಮನಸ್ಸು ಏನನ್ನಾದರೂ ಯೋಚಿಸುತ್ತದೆ, 'ಹೌದು, ನಾನು ಇದನ್ನು ಮಾಡುತ್ತೇನೆ ', ಮತ್ತೆ ' ಓಹ್, ಇದನ್ನು ಮಾಡದಿರುವುದು ಉತ್ತಮ ', ಎಂದು ನಿರ್ಧರಿಸುತ್ತದೆ. ಇದನ್ನು ಸಂಕಲ್ಪ-ವಿಕಲ್ಪ ಎಂದು ಕರೆಯಲಾಗುತ್ತದೆ, ನಿರ್ಧರಿಸುವುದು ಮತ್ತು ತಿರಸ್ಕರಿಸುವುದು. ಇದು ಐಹಿಕ ಮಟ್ಟದಲ್ಲಿನ ನಮ್ಮ ಅಸ್ಥಿರ ಸ್ಥಿತಿಯ ಕಾರಣದಿಂದ. ಆದರೆ ನಾವು ಸರ್ವೋಚ್ಚ ಪ್ರಜ್ಞೆಯ ಪ್ರಕಾರ ಕಾರ್ಯನಿರ್ವಹಿಸಲು ನಿರ್ಧರಿಸಿದಾಗ, ಆ ಹಂತದಲ್ಲಿ, 'ನಾನು ಅದನ್ನು ಮಾಡುತ್ತೇನೆ', ಅಥವಾ 'ನಾನು ಅದನ್ನು ಮಾಡಬಾರದು', ಎಂಬ ದ್ವಂದ್ವತೆ ಇಲ್ಲ. ಇಲ್ಲ. ಒಂದೇ ಒಂದು ವಿಷಯವಿದೆ, 'ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಮಾಡುತ್ತೇನೆ ಏಕೆಂದರೆ ಅದು ಉನ್ನತ ಪ್ರಜ್ಞೆಯಿಂದ ಅನುಮೋದಿಸಲಾಗಿದೆ.’ ಇಡೀ ಭಗವದ್ಗೀತೆ ಜೀವನದ ಈ ತತ್ವವನ್ನು ಆಧರಿಸಿದೆ."
660419 - ಉಪನ್ಯಾಸ BG 02.55-56 - ನ್ಯೂ ಯಾರ್ಕ್