KN/660729 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನನ್ನ ಮುಂದಿನ ಜೀವನದಲ್ಲಿ ನಾನು ಏನಾಗುತ್ತೇನೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಅದು ನನ್ನ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ ಏಕೆಂದರೆ ಭೌತಿಕ ಪ್ರಕೃತಿ ನಮಗೆ ಈ ದೇಹವನ್ನು ನೀಡಿದೆ. ಇದು ನನ್ನ ಆದೇಶದ ಪೂರೈಕೆಯ ಪ್ರಕಾರ ಮಾಡಲ್ಪಟ್ಟಿಲ್ಲ. ಪ್ರಕೃತೆಃ ಕ್ರಿಯಮಾಣಾನಿ ಗುನೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ನಿಮಗೆ ಇಲ್ಲಿ ಕರ್ಮ ಮಾಡಲು ಅವಕಾಶ ನೀಡಲಾಗಿದೆ, ಆದರೆ ನಿಮ್ಮ ಕರ್ಮಾನುಸಾರವಾಗಿ, ನಿಮ್ಮ ಮುಂದಿನ ಜೀವನದಲ್ಲಿ ನೀವು ಏನನ್ನು ಹೊಂದಲಿದ್ದೀರಿ ಎಂದು ತೀರ್ಮಾನಿಸಲಾಗುತ್ತದೆ. ಅದು ನಿಮ್ಮ ಸಮಸ್ಯೆ. ಐವತ್ತು ವರ್ಷಗಳ, ಅರವತ್ತು ವರ್ಷಗಳ, ಅಥವಾ ಎಪ್ಪತ್ತು ವರ್ಷಗಳ, ಅಥವಾ ನೂರು ವರ್ಷಗಳ ಈ ಜೀವನವೆ ಸರ್ವಸ್ವ ಎಂದು ತಿಳಿದುಕೊಳ್ಳಬೇಡಿ, ಇಲ್ಲ. ನೀವು ನಿರಂತರವಾಗಿ ದೇಹಾಂತರ ಮಾಡುತ್ತಿರುವಿರಿ. ಅದು ನಡೆಯುತ್ತಿದೆ. ನೀವು ಅದನ್ನು ತಿಳಿದಿರಬೇಕು."
660729 - ಉಪನ್ಯಾಸ BG 04.12-13 - ನ್ಯೂ ಯಾರ್ಕ್